ಭಾಗ 191
ಬೆಳಿಗ್ಗೆ 7:00 ಘಂಟೆ
ಕಾಮಾಕ್ಷಿಪುರದ ಮನೆ.......
ಮಹಡಿಯ ರೂಮಿನಲ್ಲಿ ಅನುಷಾಳಿಂದ ಫ್ರೆಶಾಗಿಸಿಕೊಂಡು ಕೆಳಗೆ ಕಿರುಚಾಡುತ್ತ ಬಂದ ನಿಶಾ ನೇರವಾಗಿ ಕಿಚ್ಚನಿಗೆ ತೆರಳಿ ಅಮ್ಮನನ್ನು ತಬ್ಬಿಕೊಂಡು ಅವಳಿಂದ ಚೆನ್ನಾಗಿ ಮುದ್ದು ಮಾಡಿಸಿಕೊಂಡಳು.
ನಿಶಾ...ಮಮ್ಮ ನನ್ನಿ ಲಾಲಾ ಕೊಲು....ಎಂದೇಳಿ ಹೊರಗೋಡುತ್ತ ಯಾರ ಕೈಗೂ ಸಿಗದೆ ಅಪ್ಪನ ಮಡಿಲಿಗೇರಿ ಪವಡಿಸಿದಳು. ಮನೆಯ ಎಲ್ಲಾ ಸದಸ್ಯರೂ ಎದ್ದು ಫ್ರೆಶಾಗಿದ್ದರೆ ಹೆಂಗಸರೆಲ್ಲರೂ ಸ್ನಾನ ಕೂಡ ಮುಗಿಸಿ ರೆಡಿಯಾಗಿದ್ದರು. ದೊಡ್ಡವರಿಗೆ ಕಾಫಿ ಟೀ ಜೊತೆ ಮಕ್ಕಳಿಗೆ ಹಾರ್ಲಿಕ್ಸ್ ಮತ್ತು ಬೋರ್ನವೀಟ ಮಾಡಿಕೊಡಲಾಗುತ್ತಿತ್ತು. ಅಪ್ಪನ ಮಡಿಲಲ್ಲಿ ಕುಳಿತು ಸುರೇಶಣ್ಣನ ಕಡೆ ಬೆರಳು ತೋರಿಸಿ......
ನಿಶಾ......ಪಪ್ಪ ಅಣ್ಣ ನಂಗಿ ಐಸ್ ಕೊಲಿಲ್ಲ ಹೋಗು ನಾ ಕೊಲಲ್ಲ ಅಂತು ಪಪ್ಪ ಅಣ್ಣಗೆ ಬೇಯಿ ಏತ್ ಕೊಲು.
ನೆನ್ನೆಯ ದಿನ ಸಪ್ಪಗೆ ಮಲಗಿದ್ದ ಮಗಳು ಈಗ ತನ್ನ ಹಳೆ ಅವತಾರಕ್ಕೆ ಮರಳಿದ್ದನ್ನು ಕಂಡು ಹರೀಶ ಸಂತೋಷಗೊಂಡು ಅವಳನ್ನು ಮುದ್ದು ಮಾಡಿ ಸುರೇಶನಿಗೆ ಗದರಿದರೆ ಕಿಲಕಿಲನೆ ನಗುತ್ತಿದ್ದ ಮಗಳ ಮುಖ ನೋಡುತ್ತ ಕಿಚನ್ ಬಾಗಿಲಲ್ಲಿ ನಿಂತಿದ್ದ ನೀತು ಆನಂದದ ಕಣ್ಣೀರು ಸುರಿಸುತ್ತಿದ್ದಳು.
ಸವಿತಾ.......ದೇವರ ದಯೆಯಿಂದ ಎಲ್ಲವೂ ಒಳ್ಳೆಯದಾಗುತ್ತೆ ಕಣೆ ಚಿನ್ನಿ ನೋಡು ಬೆಳಿಗ್ಗೆಯಿಂದ ಎಷ್ಟು ಲವಲವಿಕೆಯಲ್ಲಿದ್ದಾಳೆ.
ನೀತು......ನನ್ನ ಕಂದ ಹೀಗೆ ನಗುತ್ತಿದ್ದರೆ ಸಾಕು ನನಗಿನ್ನೇನು ಬೇಡ.
ಸುಮ....ನೆನ್ನೆ ದಿನ ನಮ್ಮ ಮನೆಗೆ ಹಿಡಿದಿದ್ದ ಗ್ರಹಣ ಇಂದು ಸರಿದಿದೆ ಅಂತ ತಿಳಿ ನೀತು ತಗೋ ನೀನೂ ಕಾಫಿ ಕುಡಿ ನೆನ್ನೆ ರಾತ್ರಿಯೂ ಏನ್ ತಿಂದಿಲ್ಲವಲ್ಲ.
ನೀತು......ಅತ್ತಿಗೆ ನಾನೊಬ್ಬಳೇನಾ ಮನೆಯಲ್ಯಾರೂ ಸಹ ರಾತ್ರಿ ಏನೂ ತಿಂದಿಲ್ಲ ಬೇಗ ತಿಂಡಿ ಮಾಡಿಬಿಡೋಣ ರಾಜಸ್ಥಾನದಿಂದ ಬರುತ್ತಿರುವವರಿಗೂ ಸೇರಿಸಿ ಮಾಡಬೇಕು.
ಸಮಯ 7:25.......
ರಕ್ಷಕರು ಮನೆಯಿಂದ ತೆಗೆದುಕೊಂಡು ಹೋಗಿದ್ದ ಐದು ಕಾರುಗಳು ಹಿಂದಿರುಗಿ ಬಂದಿದ್ದು ಗೇಟಿನೊಳಗೆ ಕಾಲಿಟ್ಟ ವಿಕ್ರಂ ಸಿಂಗ್ ಹಿಂದೆಯೆ ಒಳಬಂದ ಕಪ್ಪು ಜೀನ್ಸ್ ಬಿಳಿಯ ಶಾರ್ಟ್ ಕುರ್ತಾ ಹಣೆಯಲ್ಲಿ ಪುಟ್ಟ ಚಂದನದ ತಿಲಕ ಬಲ ಮೊಣಕೈಯಲ್ಲಿ " ॐ " ಕಾರದ ಡಾಲರ್ ಜೊತೆ ಸೇರಿಸಿ ಪೋಣಿಸಿ ಸುತ್ತಿಕೊಂಡ ಕಪ್ಪನೇ ದೈವೀ ದಾರ ಎಡಗೈನಲ್ಲಿ ವಿಶಿಷ್ಟವಾದ ಖದ್ಗವನ್ನಿಡಿದ ಆರುವರೆ ಅಡಿಗಳೆತ್ತರದ 40 ವರ್ಷದ ಅಸುಪಾಸಿನ ಧೃಢಕಾಯ ವ್ಯಕ್ತಿ ಒಳಬಂದು ಮೊದಲಿಗೆ ಗುರುಗಳ ಸಮಕ್ಷಮ ಶಿರಭಾಗಿ ನಮಿಸಿದನು.
ಆಚಾರ್ಯರು........ಮಹರಾಣಿ ನೀಡಿದ್ದ ಅಜ್ಞಾತವಾಸದಿಂದ ನಿನಗೆ ಕೊನೆಗೂ ರಾಜಕುಮಾರಿ ಮುಕ್ತಿ ನೀಡಿದ್ದಾಳಲ್ಲ ರಾಣಾ.
ರಾಣಾ.....ಅವರದ್ದೊಂದು ಕರೆಗಾಗಿ ವರ್ಷಗಳಿಂದಲೂ ಕಾಯುತ್ತಿದ್ದೆ ಗುರುಗಳೇ.
ನಿಧಿ ಮುಂದೆಯೂ ಮೊಣಕಾಲೂರಿ ಶಿರ ಭಾಗಿಸಿದ ರಾಣಾ....ನಿಮ್ಮ ಸೇವಕನ ವಂದನೆಗಳನ್ನು ಸ್ವೀಕರಿಸಿ ರಾಜಕುಮಾರಿ.
ನಿಧಿ......ನಿನಗೂ ವಂದನೆಗಳು ರಾಣಾ ವಸವಾಸ ಮುಗಿದಿದೆ ನಿನ್ನ ಕರ್ತವ್ಯವನ್ನು ನಿರ್ವಹಿಸುವ ಸಮಯ ಬಂದಿದೆ.
ರಾಣಾ ಜೊತೆ ಬಂದಿದ್ದ 20 ಜನ ಯೋದ್ದರೂ ಸಹ ತಾವು ನಿಂತಲ್ಲೇ ಮಂಡಿಯೂರಿ ನಮಿಸಿದರೆ ನಿಧಿ ರಾಜಕುಮಾರಿಯ ರೀತಿಯಲ್ಲೇ ಎಲ್ಲರ ವಂದನೆಗಳನ್ನು ಸ್ವೀಕರಿಸಿದಳು. ಮೂವರು ಗುರುಗಳೊಟ್ಟಿಗೆ ಎಲ್ಲರು ಮನೆಯೊಳಗೆ ಆಗಮಿಸಿದರೆ ರಾಣಾನ ಇಬ್ಬರು ಸಹಚರರು ಬಾಗಿಲಿನ ಅಕ್ಕಪಕ್ಕ ಪಹರೆಯಂತೆ ನಿಂತರು. ಇನ್ನೂ ಕೂಡ ಅಪ್ಪನ ಮಡಿಲಿನಲ್ಲಿ ಕುಳಿತು ಕುಕ್ಕಿ ಮರಿಗಳನ್ನು ತನ್ನ ಪಕ್ಕದಲ್ಲಿ ಕೂರಿಸಿದ್ದ ನಿಶಾ ಅವುಗಳೊಂದಿಗೆ ಆಡುತ್ತಿದ್ದರೆ ವಿಕ್ರಂ ಸಿಂಗ್ ಮೊದಲಿಗೆ ತಮ್ಮ ಕಿರಿಯ ರಾಜಕುಮಾರಿಗೆ ಗೌರವ ಸಲ್ಲಿಸಿದ ನಂತರ ರಾಣಾ ಕೂಡ ಮಂಡಿಯೂರಿ ವಂಧಿಸಿದನು. ರಾಣಾ ಮುಖವನ್ನೇ ನೋಡುತ್ತಿದ್ದ ನಿಶಾಳಿಗೆ ಏನನ್ನಿಸಿತೋ ಏನೋ ಮುಂದೆ ಬಾಗಿ ಅವನ ಮೀಸೆಯ ಕೂದಲನ್ನೆಳೆದು ಕಿಲಕಿಲನೇ ನಕ್ಕರೆ ರಾಣಾ ಕಣ್ಣಲ್ಲಿ ಕಣ್ಣೀರಿನ ಧಾರೆ ಹರಿಯಿತು.
ಆಚಾರ್ಯರು......ಏನಿದು ರಾಣಾ ನಿನ್ನ ಕಣ್ಣಲ್ಲೂ ನೀರು ಬರುತ್ತಾ.
ರಾಣಾ.......ಗುರುಗಳೇ ನಾನೂ ಮನುಷ್ಯನೇ ಅಲ್ಲವಾ. ಮಾತೆ ಸಹ ಇದೇ ರೀತಿ ನನ್ನ ಮೀಸೆಯನ್ನೆಳೆದು ಅಶೀರ್ವಧಿಸುತ್ತಿದ್ದರು ಈಗ ಏದುರಿಗೆ ಸಾಕ್ಷಾತ್ ಅವರನ್ನೇ ನೋಡುತ್ತಿರುವಂತಿದೆ.
ಆಚಾರ್ಯರು......ಸುಧಾಮಣಿಯ ಪ್ರತಿರೂಪವೇ ಅಲ್ಲವಾ ರಾಣಾ ನಿಮ್ಮ ಕಿರಿಯ ರಾಜಕುಮಾರಿ. ಇವರು ಹರೀಶ ಅಂತ.......
ರಾಣಾ.......ರಾಣಾ ಅಜ್ಞಾತ ವಾಸದಲ್ಲಿದ್ದನೇ ಹೊರತು ಎಲ್ಲರ ಬಗ್ಗೆ ನನಗೆ ವಿಷಯ ತಿಳಿಯುತ್ತಿತ್ತು ಗುರುಗಳೇ. ಇವರು ನಮ್ಮ ಇಬ್ಬರೂ ರಾಜಕುಮಾರಿಯರಿಗೆ ತಂದೆ ಸಮಾನರಲ್ಲ ತಂದೆಗಿಂತಲೂ ತುಂಬ ಮೇಲ್ಪಟ್ಟವರು ನಿಮ್ಮೀ ಸೇವಕನ ವಂದನೆ ಸ್ವೀಕರಿಸಿ.
ಹರೀಶ......ನಾನೊಬ್ಬ ಸಾಮಾನ್ಯ ವ್ಯಕ್ತಿ ರಾಣಾ ನನ್ನನ್ನು ನೀನಿಷ್ಟು ಎತ್ತರದಲ್ಲಿಟ್ಟು ಗೌರವ ನೀಡಿದ್ದಕ್ಕೆ ಧನ್ಯವಾದಗಳು.
ನೀತು ಏದುರಿಗೆ ಮಂಡಿಯೂರಿ ಗೌರವ ಸಲ್ಲಿಸಿದ ರಾಣಾ.....ತಾಯಿ ನನ್ನ ಪ್ರಕಾರ ದೇವರಿಗಿಂತಲೂ ಪೂಜನೀಯವಾದ ಸ್ಥಾನ. ನಮ್ಮ ಮಹರಾಣಿಯವರು ನನಗೆ ತಾಯಿಯ ಪ್ರತಿರೂಪವೇ ಆಗಿದ್ದರು ಅದೇ ರೀತಿ ನಮ್ಮ ಯುವರಾಣಿಯರಿಗೆ ತಾಯಿಯ ಮಡಿಲಿನಲ್ಲಿ ಮಲಗುವ ಸುಖಕರ ಸಾನಿಧ್ಯವನ್ನು ಕಲ್ಪಿಸಿರುವ ನೀವು ಸಹ ನನಗೆ ಮಾತೆಯ ಸಮಾನರೇ. ನನ್ನ ವಂದನೆಗಳನ್ನು ಸ್ವೀಕರಿಸಿ.
ನೀತು....ಮನಃಪೂರ್ವಕವಾಗಿ ನಿನ್ನ ವಂದನೆಗಳನ್ನು ಸ್ವೀಕರಿಸಿದ್ದೀನಿ ಏದ್ದೇಳು ರಾಣಾ. ನೀನು ನನ್ನನ್ನು ಮಾತೆ ಎಂದು ಕರೆದಿರುವೆ ವಿಕ್ರಂ ಸಿಂಗ್ ಕೂಡ ಮಾತೆ ಅಂತಲೇ ಕರೆಯುತ್ತಾರೆ ಅದೇ ಅಧಿಕಾರದಿಂದ ನಾನೊಂದು ಮಾತು ಹೇಳಿದರೆ ನಡೆಸಿಕೊಡುವಿರಾ ?
ರಾಣಾ....ಮಾತೆ ಹೇಳಬಾರದು ಆದೇಶಿಸಬೇಕು ನಾವು ಅದರಂತೆ ನಡೆದುಕೊಳ್ಳುತ್ತೀವಿ.
ನೀತು.....ನಿಮ್ಮೆಲ್ಲರ ಹೃದಯ ಮತ್ತು ಮನಸ್ಸಿನಲ್ಲಿ ಸೂರ್ಯವಂಶಿ ಸಂಸ್ಥಾನ ಮತ್ತು ರಾಜ ವಂಶಸ್ಥರ ಬಗ್ಗೆ ಅಪಾರವಾದ ಪ್ರೀತಿ ಮತ್ತು ಗೌರವ ಅತ್ಯಧಿಕವಾಗಿದೆ ಎಂಬುದು ತಿಳಿದಿದೆ ಅದನ್ಯಾರೂ ಕೂಡ ಪ್ರಶ್ನಿಸಲು ಸಾಧ್ಯವಿಲ್ಲ. ನಿಮ್ಮ ಯುವರಾಣಿಯರಿಬ್ಬರೂ ನಿಮಗಿಂತ ತುಂಬ ಕಿರಿಯವರು ನೀವು ಪ್ರತೀ ಬಾರಿಯೂ ಈ ರೀತಿ ಕಾಲನ್ನೂರಿ ಶಿರಭಾಗಿಸಿ ನಮಿಸುವ ಅಗತ್ಯವಿಲ್ಲ ಗೌರವ ಮನಸ್ಸಿನಲ್ಲಿರದ್ದರೆ ಸರಿ. ನಿಮ್ಮೆಲ್ಲರ ಪ್ರೀತಿ....ಹಾರಕೈ...ನಿಷ್ಠೆ....ಬೆಂಬಲ ಮತ್ತು ಸರಿಯಾದ ಮಾರ್ಗದರ್ಶನ ಅವರಿಬ್ಬರಿಗೂ ತುಂಬ ಅವಶ್ಯಕ ಮತ್ತು ಅಗತ್ಯವಿದೆ ನೀವೆಲ್ಲರೂ ನಿಂತುಕೊಂಡೆ ಕೈಮುಗಿದು ಗೌರವ ತೋರಿಸಿದರೆ ಸಾಕು ಮಂಡಿಯೂರಿ ಕೂರುವುದು ಬೇಡ. ಇದನ್ನೆಲ್ಲಾ ನೋಡಿದರೆ ನೀವು ನಮ್ಮ ಗುಲಾಮರೆಂಬ ಭಾವನೆ ಮೂಡುತ್ತದೆ. ನೀವ್ಯಾರೂ ನಮಗೆ ಗುಲಾಮರಲ್ಲ ನೀವೆಲ್ಲರು ಸಂಸ್ಥಾನದ ಏಳಿಗೆ ಮತ್ತು ಸಂಸ್ಥಾನವನ್ನು ಕಾಪಾಡುವ ವೀರ ಯೋಧರು ಎಂಬುದು ನನ್ನ ಭಾವನೆ ಅದೇ ರೀತಿ ನಿಮ್ಮ ರಾಜಕುಮಾರಿಯರು ನಿಮಗೆ ಗೌರವ ನೀಡಿ ನಡೆದುಕೊಳ್ತಾರೆ ಕೆಲವು ಸಮಯದಲ್ಲಿನ ರಾಜಪರಂಪರೆಗಳು ಮತ್ತು ಸಂಧರ್ಭಗಳಲ್ಲಿ ಶಿಷ್ಟಾಚಾರವನ್ನು ನಿಭಾಯಿಸಬೇಕೆಂದು ನನಗೆ ತಿಳಿದಿದೆ ಆದರೆ ಎಲ್ಲ ಜಾಗಗಳಲ್ಲೂ ಅದನ್ನೇ ಅನುಸರಿಸುವುದು ಬೇಡ. ಇಷ್ಟನ್ನೂ ನೀವು ನಿಮ್ಮ ಸಹಚರರು ಅನುಸರಿಸಿ ನಡೆದುಕೊಳ್ಳಬೇಕೆಂಬುದು ನನ್ನ ಮನವಿ.
ರಾಣಾ.....ನಿಮ್ಮಾಜ್ಞೆಯಂತೆಯೇ ನಡೆದುಕೊಳ್ಳುತ್ತೀವಿ.
ಆಚಾರ್ಯರು......ನೀತು ಹೇಳಿದ್ದಕ್ಕೆ ನಿನ್ನದೇನೂ ಆಕ್ಷೇಪವಿಲ್ಲವಲ್ಲ ರಾಣಾ.
ರಾಣಾ.....ಮಾತೆಯ ಆಜ್ಞೆಯನ್ನು ಪ್ರಶ್ನಿಸುವ ಅಧಿಕಾರ ಮೇಲಿರುವ ಭಗವಂತರಿಗೇ ಇಲ್ಲ ಇನ್ನು ನನ್ನಂತ ಸಾಮಾನ್ಯ ಮಾನವರಿಗಿದೆಯಾ ಗುರುಗಳೇ.
ನೀತು....ಮೊದಲು ಒಟ್ಟಿಗೆ ಉಪಹಾರ ಸೇವಿಸಿ ನಂತರ ಮುಂದಿನ ವಿಷಯದ ಬಗ್ಗೆ ಮಾತನಾಡೋಣ.
ಮನೆಯವರ ಜೊತೆ ಮೂವರು ಗುರುಗಳು....ವಿಕ್ರಂ ಸಿಃಗ್...ರಾಣಾ ಮತ್ತವರ ಎಲ್ಲಾ ಅನುಯಾಯಿಗಳಿಗೂ ಸಾಕಾಗುವಷ್ಟು ಮನೆಯಲ್ಲಿ ಮಾಡಿರುವ ಇಡ್ಲಿ....ಪೊಂಗಲ್...ಚಟ್ನಿ...ಗೊಜ್ಜಿನ ಜೊತೆ ನಿಶಾಳಿಗೆ ಪ್ರಿಯವಾದ ಕ್ಯಾರೆಟ್ ಹಲ್ವಾ ಕೂಡ ನೀಡಲಾಯಿತು. ಅಣ್ಣಂದಿರ ಮುಂದೆ ನೆಲದಲ್ಲಿ ಕುಳಿತಿದ್ದ ನಿಶಾ ಅವರಿಬ್ಬರಿಂದ ಕ್ಯಾರೆಟ್ ಹಲ್ವಾ ತಿನ್ನಿಸಿಕೊಂಡು ಒಬ್ಬೊಬ್ಬರಾಗಿ ಎಲ್ಲಾ ಅಕ್ಕಂದಿರಿಂದಲೂ ಹಲ್ವಾನೇ ತಿನ್ನಿಸಿಕೊಂಡ ನಂತರ ಅಪ್ಪನ ಮಡಿಲಿಗೆ ಸೇರಿಕೊಂಡಳು.
ಹರೀಶ.....ಚಿನ್ನಿ ಮರಿ ನೀನು ಬರೀ ಹಲ್ವಾ ತಿಂತಿದ್ದೀಯಲ್ಲಮ್ಮ ಕಂದ ಇಡ್ಲಿ ತಿನ್ನಲ್ವಾ.
ಅಪ್ಪನ ತಟ್ಟೆಯನ್ನೆಲ್ಲಾ ನೋಡಿ........ಪಪ್ಪ ಬೆಣ್ಣಿ ಲಿಲ್ಲ.
ರೇವಂತ್......ಚಿನ್ನಿ ಇಡ್ಲಿಗೂ ನಿಂಗೆ ಬೆಣ್ಣೆ ಬೇಕಾ ಪುಟ್ಟಿ.
ನಿಶಾ ಹೂಂ ಎಂದು ತಲೆ ಕುಣಿಸುತ್ತಿದ್ದಾಗ ಬೆಣ್ಣೆ ಡಬ್ಬಿ ತಂದ ಅನುಷ
.......ಅಣ್ಣ ಊಟಕ್ಕೆ ಬಿಟ್ಟರೆ ಮಿಕ್ಕಿದ್ದಕ್ಕೆಲ್ಲಾ ಇವಳಿಗೆ ಬೆಣ್ಣೆ ಬೇಕು.... ಎಂದೇಳಿ ಹರೀಶನ ತಟ್ಟೆಗೆ ಬೆಣ್ಣೆ ಹಾಕಿದಳು. ಆಂಟಿ ಇನ್ನೂ ಚೊಪ್ಪ.. ಇನ್ನಿ ಚೊಪ್ಪ...ಎಂದು ಹೇಳಿ ತನಗೆ ಬೇಕಿದ್ದಷ್ಟು ಬೆಣ್ಣೆ ಹಾಕಿಸಿಕೊಂಡ ನಂತರ ಅಪ್ಪನಿಂದ ಇಡ್ಲಿ ಪೀಸನ್ನು ಬೆಣ್ಣೆಯಲ್ಲಿ ಅದ್ದಿ ಮುಳುಗಿಸಿದ ಬಳಿಕವೇ ತಿನ್ನಿಸಿಕೊಂಡಳು. ಇಡ್ಲಿಗಿಂತ ಜಾಸ್ತಿ ಬೆಣ್ಣೆ ಮತ್ತು ಹಲ್ವಾ ತಿನ್ನಿಸಿಕೊಂಡಿದ್ದ ನಿಶಾ ಸಾಕೆಂದು ಕೆಳಗಿಳಿದು ಅಪ್ಪನ ತಟ್ಟೆಯಲ್ಲಿದ್ದ ಬೆಣ್ಣೆಯನ್ನೆಲ್ಲಾ ಬಳಿದು ತಿಂದ ನಂತ ಕಿಚನ್ನಿನಲ್ಲಿ ಕೈ ತೊಳೆಸಿಕೊಂಡು ಸುರೇಶನ ಕುತ್ತಿಗೆಗೆ ಹಿಂದಿನಿಂದ ನೇತಾಕಿಕೊಂಡಳು. ಅಣ್ಣ ನನ್ನನ್ನು ಉಯ್ಯಾಲೆ ಆಡಿಸು ಎಂದಾಗ ತಿಂಡಿ ತಿನ್ಕೊಂಡು ಹೋಗಣ ಎಂದರೆ ಅವನ ತೊಡೆ ಮೇಲೆ ಕುಳಿತ ನಿಶಾ ಗಿರೀಶಣ್ಣನ ತಟ್ಟೆಯಿಂದ ಹಲ್ವಾ ತೆಗೆದುಕೊಂಡು ಸುರೇಶಣ್ಣನಿಗೆ ತಿನ್ನಿಸಿದಳು.
ಪ್ರೀತಿ....ನೆನ್ನೆ ಎಷ್ಟೊಂದು ಸಪ್ಪಗಿದ್ದಳೋ ಇವತ್ತಷ್ಟೇ ಲವಲವಿಕೆಯ ಪ್ರತಿರೂಪದಂತಿದ್ದಾಳೆ. ದೇವರು ಇವಳು ಸದಾ ಹೀಗೆ ಇರುವಂತೆ ನೋಡಿಕೊಳಲ್ಲಿ ಸಾಕು.
ಅಣ್ಣ ತಿಂಡಿ ತಿಂದ ನಂತರ ಅವನನ್ನೆಳೆದುಕೊಂಡು ಊಯ್ಯಾಲೆಯ ಕಡೆ ಕರೆದೊಯ್ದರೆ ನಿಧಿ ತಮ್ಮ ತಂಗಿಯರನ್ನೆಲ್ಲಾ ಅಲ್ಲಿಗೆ ಕಳಿಸಿದಳು.
.........continue