• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

rsree

New Member
24
5
3
ಕತೆ ಮುಂದುವರಿಸುವುದು ಹೊಸ ಬಾಗ್ ಸೇರಿಸುವುದು ಕಷ್ಟವಾಗುತ್ತದೆ. ಈ ಕತೆ ಇಲ್ಲಿಗೆ ನಿಲ್ಲಿಸಿ. ಶಿಲ್ಪಳ ಕತೆ ಮುಂದುವರಿಸಿ. ಇದು ನನ್ನ ಅಭಿಪ್ರಾಯ.
 
  • Like
Reactions: Samar2154

sharana

New Member
48
30
18
Kathe chennagi ide bro nishara daivathwa chennagi ide kashmira varnane chennagi ide total kathe superb bro mundina update bega kodi bro
 
  • Like
Reactions: Samar2154

Samar2154

Well-Known Member
2,714
1,772
159
ಭಾಗ — 328


ಬೆಳಿಗ್ಗೆ ಎಲ್ಲರೂ ರೆಡಿಯಾಗುತ್ತಿದ್ದರೆ ಅಮ್ಮನಿಂದ ಮೊದಲು ತಾನೆ ರೆಡಿಯಾಗಿದ್ದ ನಿಶಾಳಿನ್ನೂ ಮಂಚದಲ್ಲಿ ರಗ್ ಹೊದ್ದು ಕುಳಿತಿದ್ಳು.

ನೀತು.....ಕಂದ ಕುಳುಕುಳು ಆಗ್ತಿದ್ಯಾ ನನ್ ಚಿನ್ನಿ ಮರಿಗೆ ?

ನಿಶಾ.....ಹೂಂ ಮಮ್ಮ ನನ್ನಿ ಸೆಟರ್ ಹಾಕು ಬೇಗ ನಾನಿ ಪಪ್ಪ ಜೊತಿ ರೊಂಡ್ ಹೋತೀನಿ.

ನೀತು.....ನಿಮ್ಮಕ್ಕ ಬಂದ್ಳು ಹಾಕ್ತಾಳೆ ಕಂದ. ನಿಹಾ ಚಿನ್ನಿ ಮರಿಗೆ ಜರ್ಕಿನ್ ಟೋಪಿ ಹಾಕ್ಬಿಡಮ್ಮ.

ತಂಗಿಯನ್ನು ಮುದ್ದಾಡಿ ಜರ್ಕಿನ್ ತೊಡಿಸಿದ ನಿಹಾರಿಕ....ಅಮ್ಮ ರೆಡಿಯಾಗಿ ಬರುತ್ತೆ ನಡಿ ಪಪ್ಪ ನಿಂಗೆ ಕಾಂಪ್ಲಾನ್ ತಂದಿದೆ ಬಿಸಿಬಿಸಿ ಕುಡಿದ್ರೆ ಕುಳುಕುಳು ಆಗಲ್ಲ.

ಹರೀಶನ ಕುಟುಂಬವಿದ್ದ ವ್ಯಾನ್ ಆರ್ಮಿ ಕಂಟೋನ್ಮೇಟ್ ಗೇಟ್ ಬಳಿ ತಲುಪಿದಾಗ ಅಕ್ಷರಾ ಇವರನ್ನು ಬರಮಾಡಿಕೊಳ್ಳುವುದಕ್ಕೆ ಮುಂಚಿತವಾಗಿಯೇ ಅಪ್ಪನೊಟ್ಟಿಗೆ ಬಂದು ಕಾಯುತ್ತಿದ್ದಳು. ಮನೆಯಲ್ಲಿ ತಾಯಿಯನ್ನು ಪರಿಚಯಿಸಿದಾಗ ಅಕ್ಷರಾಳ ತಾಯಿ ಜಾನಕಿ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ನೀರು....ಕಾಫಿ ತಂದಿಟ್ಟಾಗ.......

ನಿಶಾ.....ಆಂಟಿ ನಾನಿ ಕಾಪಿ ಕುಡಿಲ್ಲ ನಂಗಿ ಹೊಟ್ಟಿ ಹಸೀತು.

ನಿಧಿ.......ಆಂಟಿಗೆ ಕನ್ನಡ ಗೊತ್ತಿಲ್ಲ ಕಂದ.

ನಿಶಾ.....ಲಿಲ್ಲ ಆಂಟಿ ಗೊತ್ತು ಲಿಲ್ಲ ಆಂಟಿ ನಂಗಿ ತಿಂಡಿ ಬೇಕು.

ಇಷ್ಟು ವರ್ಷಗಳಿಂದಲೂ ಮಗಳಿಗೋಸ್ಕರ ಹೇಗೊ ತಡೆದಿದ್ದ ಕಣ್ಣೀರು ಜಾನಕಿ ಕಂಗಳಿಂದ ಝಳಝಳನೇ ಸುರಿಯತೊಡಗಿ ನಿಶಾಳನ್ನೆತ್ತಿ ಮುದ್ದಾಡುತ್ತ......

ಜಾನಕಿ......ನನ್ನೀ ಮುದ್ದು ಬಂಗಾರಿಗೆಲ್ಲ ಗೊತ್ತ ಹೊಟ್ಟೆ ಹಸಿತಿದ್ಯ ಕಂದ ನಡಿ ಆಲೂ ಪರೋಟ ಮಾಡಿದ್ದೀನಿ ನಿಂಗಿಷ್ಟ ಅಲ್ವ.

ನಿಶಾ.......ಹೂಂ ತುಂಬ ಇಟ್ಟ ನಂಗಿ ಬೆಣ್ಣೆ ಬೇಕು.

ಜಾನಕಿ......ಆಲೂ ಪರೋಟ ಬೆಣ್ಣೆ ಎರಡೂ ಇದೆ ಕಂದ ಬಾ.

ನಿಧಿ ಶಾಕಿನಿಂದ.......ಆಂಟಿ ನಿಮಗೆ ಕನ್ನಡ ಬರುತ್ತಾ ? ಮತ್ಯಾಕೆ ಕಳೆದ ಸಲ ಬಂದಿದ್ದಾಗ ನನ್ಜೊತೆ ಮಾತಾಡ್ಲಿಲ್ಲ ?

ನಿಧಿಗಿಂತಲೂ ಶಾಕಿನಲ್ಲಿದ್ದ ಅಕ್ಷರಾ.....ಅಮ್ಮ ನಿಮಗೆ ಕನ್ನಡ ಗೊತ್ತಿದ್ಯಾ ಹೇಗೆ ? ನನಗ್ಯಾಕೆ ಮುಂಚೆ ಹೇಳಿರಲಿಲ್ಲ ?

ಜಾನಕಿ ಅವರಿಬ್ಬರಿಗೆ ಉತ್ತರಿಸುವ ಬದಲು ಕಣ್ಣೀರಿಡುತ್ತ ನಿಶಾಳ ಜೊತೆ ಕಿಚನ್ನಿಗೋದರೆ ನೀತು ಕೂಡ ಅವರಿಂದೆ ತೆರಳಿದಳು. ಅಮ್ಮನ ಹಿಂದೆ ಹೊರಟ ಮಗಳನ್ನು ತಡೆಯುತ್ತ.........

ಬ್ರಿಗೇಡಿಯರ್ ಕುಲ್ದೀಪ್ ಸಿಂಗ್.......ನೀನು ಹುಟ್ಟುವುದಕ್ಕಿಂತ ಮುಂಚಿನ ಗಾಯ ಕಣಮ್ಮ ಹಳೆಯದ್ದೆಲ್ಲ ನೆನಪಾಗಿರಬೇಕು ಅದಕ್ಕೆ ನಿಮ್ಮಮ್ಮನಿಗೆ ದುಃಖವಾಗ್ತಿದೆ.

ಹರೀಶ.......ಕ್ಷಮಿಸಿ ಸರ್ ನನ್ನ ಮಗಳಿಂದಾಗಿ........

ಕುಲ್ದೀಪ್ ಸಿಂಗ್.......ದಯವಿಟ್ಟು ನೀವು ಕ್ಷಮೆ ಕೇಳ್ಬೇಡಿ ಸರ್. ಆದ್ರೆ ಇಷ್ಟು ವರ್ಷಗಳಲ್ಲಿ ನನ್ನೀ ಮಗಳಿಗೊಮ್ಮೆಯೂ ತಿಳಿಯದ ಸತ್ಯ ಮೂರು ವರ್ಷದ ನಿಮ್ಮ ಮಗಳಿಗೇಗೆ ತಿಳಿಯಿತು ಅಂತಾನೇ ಗೊತ್ತಾಗ್ತಿಲ್ಲ.

ಗಿರೀಶ.......ಅಂಕಲ್ ನನ್ನ ಚಿನ್ನೀನ ಸಾಮಾನ್ಯ ಅಂದ್ಕೊಬೇಡಿ ಅವಳಿಂತದೆಷ್ಟೊ ಪವಾಡ ಮಾಡ್ತಾಳೆ ಹೇಳಕ್ಕಾಗಲ್ಲ ನೋಡ್ಬೇಕು.

ಕೆಲ ಹೊತ್ತು ಲಿವಿಂಗ್ ಹಾಲಿನಲ್ಲಿ ಮೌನ ಆವರಿಸಿಕೊಂಡಿದ್ದು ನೀತು ಮಗಳಿಗೆ ತಿಂಡಿ ತಿನ್ನಿಸುತ್ತ ಹೊರಬಂದು........

ನೀತು......ನಿಮ್ಮಮ್ಮ ನಿನ್ನಿಂದ್ಯಾವ ವಿಷಯ ಮುಚ್ಚಿಟ್ಟಿದ್ರು ಅಂತ ನಿನಗೆ ತಿಳಿಯುತ್ತೆ ಅಕ್ಷರಾ ಮೊದಲು ತಿಂಡಿ ತಿನ್ನು.

ಅಕ್ಷರಾ.....ಆಂಟಿ......

ನೀತು......ನನ್ನ ಮಾತಿಗೆ ಗೌರವ ಕೊಡಲ್ವ ?

ಎಲ್ಲರೂ ಮರುಮಾತಿಲ್ಲದೆ ತಿಂಡಿ ಮುಗಿಸಿದಾಗ........

ಜಾನಕಿ........ನಾನು ಹುಟ್ಟಿ ಬೆಳಿದಿದ್ದೆಲ್ಲವೂ ಬೆಂಗಳೂರು ಕನ್ನಡ ನನ್ನ ಮಾತೃಭಾಷೆ. ನಮ್ಮದು ಚಿಕ್ಕ ಚೊಕ್ಕನಾದ ಕುಟುಂಬ ನನ್ನ ತಂದೆ..ತಾಯಿ...ಅಣ್ಣ ಮತ್ತೆ ನಾನು ನಾಲ್ವರು ಮಾತ್ರ. ನಾನು ಡಿಗ್ರಿ ಮಾಡ್ತಿದ್ದ ಕಾಲೇಜ್ ಆರ್ಮಿ ಕಂಟೋನ್ಮೆಂಟ್ ಹತ್ತಿರವೇ ಇದ್ದಿದ್ದು. ಆಗಲೇ ದೀಪು (ಕುಲ್ದೀಪ್ ಸಿಂಗ್) ಆರ್ಮಿಯಲ್ಲಿ ಹೊಸದಾಗಿ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ಪಡೆದು ಆರು ತಿಂಗಳ ಮಟ್ಟಿಗೆ ಬೆಂಗಳೂರಿನ ಕಂಟೋನ್ಮೆಂಟಲ್ಲಿ ಕಾರ್ಯ ನಿರ್ವಹಿಸುವುದಕ್ಕಾಗಿ ಬಂದಿದ್ರು ಇವರ ಮೂಲತಃ ಹರಿಯಾಣದವರು. ದೀಪು ನಮ್ಮ ಕಾಲೇಜಿನ ಹತ್ತಿರವಿದ್ದ ಜ್ಯೂಸ್ ಅಂಗಡಿಗೆ ಬರ್ತಿದ್ರು ನಾನು ನನ್ನ ಗೆಳತಿಯರೊಟ್ಟಿಗೆ ಅಂಗಡಿ ಪಕ್ಕದಲ್ಲಿನ ಬಸ್ ಸ್ಟಾಪಲ್ಲಿ ಬಸ್ಸಿಗಾಗಿ ಕಾಯ್ತಿರ್ತಿದ್ದೆ. ಇವರ ಆಕರ್ಶಕ ವ್ಯಕ್ತಿತ್ವ...ನಡೆನುಡಿ ನನ್ನ ಫ್ರೆಂಡ್ಸ್ ಗುಂಪಿನಲ್ಲಿ ಮಾತಿನ ವಿಷಯವಾಗಿದ್ದು ನನನ್ನೂ ಇವರ ಕಡೆಗೆ ಆಕರ್ಶಿತಳಾಗುವಂತೆ ಮಾಡಿತ್ತು. ಒಂದೆರಡು ತಿಂಗಳಲ್ಲೇ ಇಬ್ಬರ ನಡುವೆ ಪ್ರೀತಿ ಚಿಗುರೊಡೆದು ಹೆಮ್ಮರವಾಗಿ ಬೆಳೆದುಬಿಟ್ಟಿತು. ದೀಪುಗೆ ತನ್ನವರೆಂದು ಯಾರೂ ಇರದಿದ್ದ ಕಾರಣ ನಾನೇ ಇವರಿಗೆ ಸರ್ವಸ್ವವಾಗಿದ್ದೆ. ನಮ್ಮಿಬ್ಬರ ಪ್ರೀತಿಯ ಬಗ್ಗೆ ನಾನು ಮನೆಯಲ್ಲಿ ಹೇಳಿದಾಗ ಅಂತರ್ಜಾತಿ ವಿವಾಹವೆಂದು ಅಪ್ಪ..ಅಮ್ಮ ಇಬ್ಬರೂ ಒಪ್ಪಿಕೊಳ್ಳಲಿಲ್ಲ. ನಮ್ಮಣ್ಣನಿಗೆ ನಾನೇ ಪ್ರಪಂಚ ನನಗೂ ಅಣ್ಣನೇ ದೇವರ ಸಮಾನ. ನಮ್ಮಿಬ್ಬರನ್ನು ಒಂದಾಗಿಸಲು ಅಣ್ಣ ಸಾಕಷ್ಟು ಪ್ರಯತ್ನಿಸಿದ್ರೂ ಅಪ್ಪ...ಅಮ್ಮ ಸುತಾರಾಂ ಒಪ್ಪಿಕೊಳ್ಳಲಿಲ್ಲ. ಕಡೆಯದಾಗಿ ಅಪ್ಪ ಒಂದೇ ಮಾತು ಹೇಳಿದು ನಿನಗೆ ಅಪ್ಪ..ಅಮ್ಮ ಅಥವ ನಿನ್ನಾ ಹುಡುಗನ ಪ್ರೀತಿ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊ ಅಂತ. ಅಪ್ಪನ ಮಾತಿನಿಂದ ನನ್ನ ಅಸ್ತಿತ್ವವೇ ಅಳ್ಳಾಡಿ ಹೋಗಿತ್ತು. ಅಪ್ಪ..ಅಮ್ಮನನ್ನು ಬಿಟ್ಟು ಕೆಲವು ತಿಂಗಳಿಂದ ಪ್ರೀತಿಸುತ್ತಿರುವ ಹುಡುಗನನ್ನ ಆಯ್ಕೆ ಮಾಡುವುದಕ್ಕೆ ಮನಸ್ಸು ಒಪ್ಪುತ್ತಿರಲಿಲ್ಲ. ಆದರೆ ದೀಪುಗೆ ನಾನೇ ಇಡೀ ಪ್ರಪಂಚ ನನ್ನನ್ನು ಬಿಟ್ಟರೆ ಇವನಿಗ್ಯಾರಿಲ್ಲ ಅಂತ ಹೃದಯ ಕೂಗಿ ಹೇಳ್ತಿತ್ತು. ಕೆಲವು ದಿನ ನಾನಿದೇ ತೊಳಲಾಟದಲ್ಲಿದ್ದಾಗ ಅಣ್ಣನೇ ಸಮಸ್ಯೆಗೆ ಸಲಹೆ ನೀಡುತ್ತ ನಿಮ್ಮಿಬ್ಬರ ಪರಿಶುದ್ದವಾದ ಪ್ರೀತಿಗೆ ಸದಾ ನನ್ನ ಬೆಂಬಲವಿದೆ. ಸಧ್ಯದ ಪರಿಸ್ಥಿತಿಯಲ್ಲಿ ಅಪ್ಪ..ಅಮ್ಮನನ್ನು ಒಪ್ಪಿಸಿ ನಿನ್ನ ಮದುವೆ ಮಾಡಿಸುವುದಕ್ಕೆ ಸಾಧ್ಯವಿಲ್ಲ. ನೀನು ದೀಪುವಿನ ಜೊತೆ ಬೇರೆಯೂರಿಗೆ ಹೋಗಿ ಮದುವೆಯಾಗಮ್ಮ ಮುಂದೆ ಮಗುವಾದಾಗ ಮೊಮ್ಮಗುವಿನ ಮುಖ ನೋಡಿ ಅಪ್ಪ..ಅಮ್ಮ ಕೂಡ ನಿಮ್ಮಿಬ್ಬರನ್ನು ಸ್ವೀಕರಿಸ್ತಾರೆ. ಅಣ್ಣನ ಮಾತಿನಂತೆ ದೀಪು ದೆಹಲಿಗೆ ಹಿಂದಿರುವಾಗ ನಾನೂ ಇವರ ಜೊತೆ ಮನೆಯಿಂದೋಡಿ ಬಂದ್ಬಿಟ್ಟೆ ದೆಹಲಿಯಲ್ಲೇ ನಾವಿಬ್ಬರೂ ಮದುವೆಯಾದ್ವಿ. ನಮ್ಮನ್ನು ಒಂದು ಮಾಡಿದ್ದ ನಮ್ಮಣ್ಣ ಇವತ್ತಿಗೂ ನಮ್ಮೆಜಮಾನರನ್ನೊಮ್ಮೆ ಕೂಡ ಬೇಟಿ ಮಾಡಿಲ್ಲ. ವರ್ಷದ ಬಳಿಕ ಅಕ್ಷರಾ ಹುಟ್ಟಿದಾಗ ನಮ್ಮಿಂದ ಬೆಂಗಳೂರಿಗೆ ಹೋಗಲಾಗಲಿಲ್ಲ ಆಗಿವರು ಬಾರ್ಡರ್ ಏರಿಯಾದಲ್ಲಿ ನಿಯೋಜನೆಗೊಂಡಿದ್ರು ರಜೆ ಸಿಗ್ತಿರಲಿಲ್ಲ. ಅಕ್ಷರಾ ಒಂದುವರೆ ವರ್ಷ ತುಂಬಿದಾಗ ನಾವು ಬೆಂಗಳುರಿಗೆ ಬಂದ್ವಿ ಆದ್ರೆ ಅಷ್ಟರಲ್ಲಾಗಲೇ ತಡವಾಗಿ ಹೋಗಿತ್ತು. ವರ್ಷದ ಹಿಂದೆ ಅಪ್ಪ... ಅಮ್ಮ ಮರಣಿಸಿದ್ದು ಅಣ್ಣನಿಗೂ ಮದುವೆಯಾಗಿ ನಾವು ಹುಟ್ಟಿ ಬೆಳಿದಿದ್ದ ಮನೆ ಮಾರಾಟ ಮಾಡಿ ಅಣ್ಣ ಬೇರೆಯೂರಿಗೆ ಶಿಫ್ಟಾಗಿ ಹೋಗಿದ್ರು. ನಮ್ಮನೇ ಅಕ್ಕಪಕ್ಕದವರಿಗೂ ಅಣ್ಣ ಯಾವೂರಿಗೆ ಶಿಫ್ಟಾದನೆಂಬ ವಿಷಯ ಗೊತ್ತಿರಲಿಲ್ಲ. ಅಣ್ಣ ಕೆಲಸ ಮಾಡ್ತಿದ್ದ ಕಂಪನಿಯಲ್ಲೂ ವಿಚಾರಿಸಿದ್ವಿ ಆದ್ರೆ ಅಣ್ಣ ಅಲ್ಲಿ ಕೆಲಸ ಬಿಟ್ಟಿದ್ದು ನನ್ನ ಪ್ರೀತಿಯ ಅಣ್ಣನನ್ನು ನೋಡುವೆಲ್ಲ ದಾರಿ ಮುಚ್ಚಿಹೋಗಿತ್ತು.
ಅಂದಿನಿಂದ ಇಂದಿನವರೆಗೂ ನಾನೀ ವಿಷಯ ನನ್ನ ಮಗಳಿಗೂ ಹೇಳಲಾಗದೆ ಮುಚ್ಚಿಟ್ಟಿದ್ದೆ. ಅಕ್ಷರಾ ತನ್ನ ಸಹಪಾಠಿಗಳ ಅಜ್ಜಿ.. ತಾತ ಅಥವ ಇನ್ಯಾರೇ ನೆಂಟರಿಷ್ಟರನ್ನು ನೋಡಿದಾಗ ನನಗ್ಯಾಕೆ ಯಾರೂ ಇಲ್ಲವೆಂದು ಕೇಳ್ತಿದ್ದ ಪ್ರಶ್ನೆ ನನ್ನೆದೆಗೆ ಶೂಲದ ರೀತಿಯಲ್ಲಿ ಚುಚ್ತಿತ್ತು ಹಾಗಾಗಿ ಸತ್ಯ ಹೇಳುವ ಧೈರ್ಯ ನಮ್ಮಿಬ್ಬರಿಗ್ಯಾವತ್ತೂ ಬರಲೇ ಇಲ್ಲ. ನೀತು ನಿಂಗೆ ಗೊತ್ತಿಲ್ಲ ನನ್ನ ಮಗಳು ಹೃದಯದಿಂದ ತನ್ನಾಪ್ತ ಸ್ನೇಹಿತೆಯೆಂದು ಸ್ವೀಕರಿಸಿದ್ದು ನಿಧಿಯನ್ನೇ ಅದಕ್ಕಿಬ್ಬರೂ ಘಂಟೆಗಟ್ಟಲೇ ಫೋನಲ್ಲಿ ಮಾತಾಡ್ತಿದ್ದೇ ಸಾಕ್ಷಿ. ಇವತ್ತು ಈ ಪುಟ್ಟ ಚಿನ್ನಾರಿಯಿಂದ ನಮ್ಮ ಮನಸ್ಸಿನಲ್ಲಿದ್ದ ಭಾರ ಕಡಿಮೆಯಾಗುವ ದಾರಿ ಸಿಗುವಂತಾಗಿ ನನ್ನ ಮಗಳಿಗೂ ಸತ್ಯ ತಿಳಿಯಿತು.

ಜಾನಕಿ ಅಳುತ್ತಿದ್ದರೆ ಅಕ್ಷರಾ ತಾಯಿಗೆ ಸಮಾಧಾನ ಮಾಡುತ್ತ ತಾನೂ ಅಳುತ್ತಿದ್ದಳು.

ನೀತು ಸ್ವಲ್ಪ ಯೋಚಿಸಿ......ನನ್ನೀ ಮಗಳು ಇಷ್ಟು ವರ್ಷವಾದ್ಮೇಲೆ ನಿಮ್ಮಿಂದ ಸತ್ಯ ಹೊರಬರುವಂತೆ ಮಾಡಿದ್ದಾಳೆಂದ್ರೆ ಇದಕ್ಕೊಂದು ಕಾರಣವಿದ್ದೇ ಇರುತ್ತೆ. ನಿಮ್ಮಣ್ಣನ ಹೆಸರೇನು ?

ಜಾನಕಿ ಸ್ವಲ್ಪ ಸಮಾಧಾನಗೊಂಡಿದ್ದು.......ವಿವೇಕ್ ಶರ್ಮ ಅಂತ

ನೀತು ಚಕಿತಳಾಗಿ........ವಿವೇಕ್ ಶರ್ಮ ನಿಮ್ಮತ್ತಿಗೆ ಹೆಸರು ?

ಜಾನಕಿ......ನಾವು ಬೆಂಗಳೂರಿಗೆ ಹೋಗುವಷ್ಟರಲ್ಲಿ ಅಣ್ಣನಿಗೆ ಮದುವೆಯಾಗಿತ್ತು ನಾನತ್ತಿಗೆಯನ್ನು ನೋಡಿಲ್ಲ. ನಮ್ಮ ಮನೆಯ ಅಕ್ಕಪಕ್ಕದವರಿಂದ ಅತ್ತಿಗೆ ಬಗ್ಗೆ ಗೊತ್ತಾಯ್ತು. ಅತ್ತಿಗೆಯ ಹೆಸರು ಸವಿತಾ ಅಂತೆ xxxx ಊರಿನವರು ಜೊತೆಗೆ ಸ್ಕೂಲ್ ಟೀಚರ್ ಅಂತಷ್ಟೆ ನನಗೆ ತಿಳಿದಿದ್ದು ಇನ್ನೇನೂ ಗೊತ್ತಿಲ್ಲ.

ಹರೀಶ ಏನೋ ಹೇಳಲು ಹೊರಟಾಗ ನೀತು ಗಂಡನ ಕೈಯನ್ನು ಅಮುಕಿ ಮಕ್ಕಳಿಗೂ ಕಣ್ಸನ್ನೆಯಲ್ಲಿ ಮಾತಾಡದಂತೆ ತಾಕೀತು ಮಾಡಿದಳು.

ನೀತು.......ನಿಮ್ಮಣ್ಣನ ಫೋಟೋ ಇದ್ಯಾ ?

ಜಾನಕಿ....ನಾನು ಮನೆ ಬಿಟ್ಟು ಬರುವುದಕ್ಕಿಂತ ಒಂದು ವಾರದ ಮುಂಚೆಯಷ್ಟೆ ಅಪ್ಪ..ಅಮ್ಮ...ಅಣ್ಣನೊಟ್ಟಿಗಿರುವ ಫೋಟೋ ನನ್ನ ಬಳಿಯಿದೆ....ಎಂದೇಳಿ ತಂದುಕೊಟ್ಟಳು.

ಫೋಟೋ ನೋಡಿದಾಗ ನೀತು ತುಟಿಗಳಲ್ಲಿ ಕಿರುನಗೆ ಮೂಡಿದ್ದು ಮುದ್ದಿನ ಮಗಳನ್ನು ಹೆಮ್ಮೆಯಿಂದ ನೋಡಿದಳು.

ನೀತು....ಮೊಬೈಲಲ್ಲಿ ಇದರ ಸ್ನಾಪ್ ತಗೊತೀನಿ ನಮಗೆಲ್ಲಾದ್ರೂ ನಿಮ್ಮಣ್ಣ ಸಿಕ್ಕಿದ್ರೆ ಅಂತ.

ಜಾನಕಿ......ತಗೊಳ್ಳಿ ನೀವೂ ಕರ್ನಾಟಕದವರೆ ಅಲ್ವ ಅಕಸ್ಮಾತ್ ನಮ್ಮಣ್ಣ ಏದುರಾದ್ರೆ ಇಷ್ಟು ವರ್ಷಗಳಿಂದ ಅಣ್ಣನಿಗೋಸ್ಕರ ಪರಿತಪಿಸುತ್ತಿರುವ ನನ್ನ ಕಾಯುವಿಕೆ ಅಂತ್ಯವಾಗಬಹುದು.

ನೀತು......ನಿಮ್ಮಣ್ಣನನ್ನು ಹುಡುಕಿಸುವ ಜವಾಬ್ದಾರಿ ನನಗಿರಲಿ ಅದರ ಬದಲಿಗೆ ನೀವೇನು ಕೊಡ್ತೀರ ?

ಜಾನಕಿ ಕೈ ಮುಗಿದು.......ನೀವಿಷ್ಟು ಮಾಡಿದ್ರೆ ನಾ ನಿಮಗೆ ಇಡೀ ಜೀವನ ಜೀತದಾಳಾಗಿರಲು ಸಿದ್ದ.

ನೀತು.....ಈ ರೀತಿ ಮಾತಾಡ್ಬೇಡಿ ಜಾನಕಿ. ನೀವಿಬ್ರೂ ನಿಮ್ಮ ಜೀವನದ ಹತ್ತು ದಿನ ನಿಮ್ಮ ಮಗಳಿಗೋಸ್ಕರ ಕೊಡ್ಬೇಕು ಅಷ್ಟೆ. ನೀವಿದಕ್ಕೆ ರೆಡಿಯಿದ್ದೀರಾ ?

ಬ್ರಿಗೇಡಿಯರ್.....ನೀವು ಹೇಳಿದ್ದೇನೂ ಅರ್ಥವಾಗ್ಲಿಲ್ಲ ?

ನೀತು......ನಾವಿಲ್ಲಿಂದ ಕಾಶ್ಮೀರಕ್ಕೆ ಹೋಗ್ತಿದ್ದೀವಿ ನಮ್ಜೊತೆಯಲ್ಲಿ ನಿಮ್ಮ ಮಗಳನ್ನು ಕರ್ಕೊಂಡೋಗೋಣ ಅಂತ ನೀವದಕ್ಕೆ ಪರ್ಮಿಶನ್ ಕೊಡ್ಬೇಕು.

ಜಾನಕಿ........ಧಾರಾಳವಾಗಿ ಕರ್ಕೊಂಡ್ ಹೋಗಿ ನಿಧಿ ಇವಳ ಮೊಟ್ಟಮೊದಲ ಪರಮಾಪ್ತೆ ಇಬ್ಬರೂ ಜೊತೆಯಲ್ಲಿ ಸಮಯ ಕಳೆದರೆ ಮನಸ್ಸುಗಳಿನ್ನೂ ಹತ್ತಿರವಾಗುತ್ತೆ.

ನೀತು......ಶ್ರೀನಗರದಿಂದ ನಾವು ನೇರವಾಗಿ ದೆಹಲಿಗೆ ಹೋಗ್ತಿವಿ ನೀವಿಬ್ರೂ ದೆಹಲಿಗೆ ಮಗಳನ್ನಿಲ್ಲಿಗೆ ಕರೆತರುಲು ದೆಹಲಿಗೆ ಬನ್ನಿ ಆಗಲೇ ನಿಮ್ಮ ಮಗಳನ್ನು ಕಳಿಸ್ತೀನಿ.

ಬ್ರಿಗೇಡಿಯರ್ ಕುಲ್ದೀಪ್......ಖಂಡಿತವಾಗಿ ಬರ್ತೀವಿ ಯಾವತ್ತು ಬರ್ಬೇಕಂತ ಹೇಳ್ಬಿಡಿ ಸಾಕು.

ನೀತು.......ಅಕ್ಷರಾ ನಿಮ್ಮಪ್ಪ ಅಮ್ಮ ಪರ್ಮಿಶನ್ ಕೊಟ್ಟಾಯ್ತಲ್ಲ ಪುಟ್ಟಿ ಹೋಗಿ ನಿನ್ನ ಬಟ್ಟೆ ಪ್ಯಾಕ್ ಮಾಡ್ಕೊಳಮ್ಮ ನಿನ್ನ ಸ್ನೇಹಿತೆ ಜೊತೆ ಜಾಲಿಯಾಗಿದ್ದು ಬರುವಂತೆ.

ಅಕ್ಷರಾ ಖುಷಿಯಿಂದ ಅಮ್ಮನ ಕೆನ್ನೆಗೆ ಮುತ್ತಿಟ್ಟು ನಿಧಿ ಜೊತೆ ತನ್ನ ರೂಮಿಗೆ ತೆರಳಿದರೆ ನಿಶಾ ಸಪ್ಪಗೆ ಬಂದಪ್ಪನನ್ನು ಸೇರುತ್ತ......

ನಿಶಾ.........ಪಪ್ಪ ನಾನಿ ಅಲ್ಲಿ ಹೋತೀನಿ ಅಂದಿ ಅಣ್ಣ ಬೇಡ ನನ್ನಿ ಬೇತಾರೆ ಅಂತು. ನನ್ನಿ ಬೇತಾರೆ ಪಪ್ಪ ?

ಜಾನಕಿ........ನಿನ್ನನ್ಯಾರೂ ಬೈಯಲ್ಲ ಕಂದ ಎಲ್ಲಿಗೊಗ್ಬೇಕಮ್ಮ ?

ಸುರೇಶ......ಆಂಟಿ ಇಲ್ಲಿನ ಕ್ಯಾಂಪಸೊಳಗೆ ಸುತ್ತಾಡ್ಬೇಕಂತೆ.

ಜಾನಕಿ ಗಂಡನಿಗೆ ಹಿಂದಿಯಲ್ಲಿ ಹೇಳಿದಾಗ ಕುಲ್ದೀಪ್......ನಡಿ ಪುಟ್ಟಿ ನಾನೇ ಕರ್ಕೊಂಡೋಗ್ತೀನಿ.

ನಿಶಾ ಅವರ ಕೈ ಹಿಡಿದು ಆರ್ಮಿ ಕಂಟೋನ್ಮೆಂಟ್ ಸುತ್ತಾಡಲು ಹೊರಟರೆ ಗಿರೀಶ..ಸುರೇಶ...ನಿಹಾರಿಕ ಕೂಡ ಜೊತೆಯಾದರು.
ಅಣ್ಣ ಮೊದಲೇ ಹೇಳಿಕೊಟ್ಟಂತೆ ತನ್ನೆದುರಿಗೆ ಬಂದಂತ ಆರ್ಮಿ ಜವಾನರಿಗೆ ನಿಶಾ ಸೆಲ್ಯೂಟ್ ಮಾಡಿ ಜೈಹಿಂದ್ ಎನ್ನುತ್ತ ಎಲ್ಲರ ಮನಸ್ಸಿನಲ್ಲೂ ತನ್ನ ಛಾಪು ಮೂಡಿಸುತ್ತಿದ್ದಳು. ಕಂಟೋನ್ಮೆಂಟ್ ಸುತ್ತಾಡಿ ಖುಷಿಯಿಂದ ಹಿಂದಿರುಗಿದ ನಿಶಾ ಅತ್ತಿಗೆ ಮಡಿಲಿಗೇರಿ ವಿವರಣೆ ನೀಡತೊಡಗಿದಳು.

ಸುರೇಶ......ಅತ್ತಿಗೆ ಈ ಚಿಲ್ಟಾರೀನ ನಾಲ್ಕೈದು ದಿನ ಇಲ್ಲಿ ಬಿಟ್ಬಿಟ್ರೆ ಇವಳಿಲ್ಲಿಗೇ ಬಾಸಾಗಿ ಹೋಗ್ತಾಳಷ್ಟೆ.

ನಿಹಾರಿಕ......ಅಮ್ಮ ಎಲ್ರಿಗೂ ಸೆಲ್ಯೂಟ್ ಮಾಡಿದ್ದೇ ಮಾಡಿದ್ದು ಅವರೂ ಪ್ರತಿಯಾಗಿವಳಿಗೆ ಸೆಲ್ಯೂಟ್ ಮಾಡ್ತಿದ್ರು.



.........continue
 

Samar2154

Well-Known Member
2,714
1,772
159
Continue.........


ಮಧ್ಯಾಹ್ನದ ಊಟ ಕೂಡ ಇಲ್ಲಿಯೇ ಮುಗಿಸಿ ಹೊರಟಾಗ ಇದೇ ಮೊದಲ ಬಾರಿ ಅಪ್ಪ...ಅಮ್ಮ ಜೊತೆಗಿಲ್ಲದೆ ಅಕ್ಷರಾ ತಾನೊಬ್ಬಳೇ ಗೆಳತಿಯ ಕುಟುಂಬದೊಂದಿಗೆ ಟ್ರಿಪ್ಪಿಗೆ ಹೊರಟಿದ್ದು ಇಬ್ಬರನ್ನೂ ತಬ್ಬಿಕೊಂಡು ಬೀಳ್ಗೊಂಡಳು. ದಂಪತಿಗಳಿಬ್ಬರು ಇಷ್ಟು ವರ್ಷಗಳ ಕಾಲ ಮನಸ್ಸಿನಲ್ಲಿದ್ದ ವಿಷಯವನ್ನು ಮಗಳಿಗೂ ಹೇಳಲಾಗದೆ ಪರಿತಪಿಸುತ್ತಿದ್ದ ಭಾರವನ್ನು ಕಡಿಮೆ ಮಾಡಿಸಿದ್ದ ನಿಶಾಳನ್ನೆತ್ತಿ ಮುದ್ದಾಡಿ ಕಳಿಸಿಕೊಟ್ಟರು. ಕಾರ್ಗಿಲ್ ಸುತ್ತಾಡಿ ಮಾರನೇ ದಿನ ಜನರು ವಾಸಿಸುವ ಪ್ರಪಂಚದ ಎರಡನೇ ಅತ್ಯಂತ ಶೀತವಾದ ಊರಾಗಿರುವ ದ್ರಾಸ್ ಎಂಬಲ್ಲಿಗೆ ಬಂದು ಸಾಮಾನ್ಯ ಲಾಡ್ಜಲ್ಲಿ ಉಳಿದುಕೊಂಡರು. ನಿಶಾಳಂತೂ ಛಳಿಗೆ ಗುಬ್ಬಚ್ಚಿ ಮರಿಯಂತೆ ಬೆಚ್ಚಗೆ ಪ್ಯಾಕಾಗಿ ಅಮ್ಮನ ಮಡಿಲಿಗೆ ಕಚ್ಚಿಕೊಂಡು ಬಿಟ್ಟಿದ್ದಳು. ಮಾರನೇ ದಿನ ದ್ರಾಸ್ ಸುತ್ತಮುತ್ತಲಿನ ಹಿಮಾಲಯದ ಪ್ರಕೃತಿ ಸೌಂದರ್ಯವನ್ನು ಸವಿದು ರಾತ್ರಿಯೊಳಗೆ ಶ್ರೀನಗರ ತಲುಪಿ
ಅಲ್ಲಿನ ಪ್ರತಿಷ್ಠಿತ ಹೋಟೆಲ್ಲಿನಲ್ಲಿ ವ್ಯಾಸ್ತವ್ಯ ಹೂಡಿದರು. ಶ್ರೀನಗರ
ಸುತ್ತಾಡಿ ಲಾಲ್ ಚೌಕ್ ಪ್ರದೇಶವನ್ನು ನೋಡಿ ಅಲ್ಲಿ ನಡೆದಿರುವ ರಕ್ತಸಿಕ್ತ ಚರಿತ್ರೆಯನ್ನು ಮೆಲುಕು ಹಾಕುತ್ತ ಮನೆಯವರಿಗೆ ಕಶ್ಮೀರಿ ಶಾಲು...ಡ್ರೈ ಫ್ರೂಟ್ಸ್...ಮತ್ತಿತರ ವಸ್ತುಗಳನ್ನು ಖರೀಧಿಸಿದರು. ಮೂರನೇ ದಿನ ಸೋನ್ ಮಾರ್ಗ್ ತಲುಪಿದಾಗಲ್ಲಿ ಕಳೆದ ಕೆಲವು ದಿನಗಳಿಂದ ಬಿದ್ದಂತ ಹಿಮದಿಂದಾಗಿ ಹಿಮಾಲಯದ ಬೆಟ್ಟಗಳು ಹಿಮದ ಬಿಳೀ ಹೊದಿಕೆ ಹೊದ್ದುಕೊಂಡತ್ತಿತ್ತು. ಐಸ್..ಐಸ್..ಐಸ್. ಎನ್ನುತ್ತ ನಿಶಾ—ನಿಹಾರಿಕ ಹಿಮರಾಶಿಯಲ್ಲಿ ಕುಣಿದಾಡುತ್ತಿದ್ದರು. ಗಿರೀಶ—ಸುರೇಶ ಕೂಡ ತಂಗಿಯರ ಜೊತೆ ಕುಣಿದಾಡಿ ಮೊದಲು ಪ್ರೀತಿಯ ಅಕ್ಕನ್ನನ್ನಿಡಿದರು. ನಿಧಿಯ ಕಾಲುಗಳನ್ನು ಸುರೇಶ ಹಿಡಿದಿದ್ದು ಗಿರೀಶ ಅಕ್ಕನ ತೋಳನ್ನಿಡಿದಿಬ್ಬರೂ ಉಯ್ಯಾಲೆ ಆಡಿಸುತ್ತಿದ್ದರು. ಅಣ್ಣಂದಿರೇನು ಮಾಡ್ತಿದ್ದಾರೆಂದು ನಿಹಾರಿಕ ನಿಶಾ ನೋಡುತ್ತಿದ್ದಂತೆಯೇ ಅಕ್ಕನನ್ನು ಊಯ್ಯಾಲೆಯಾಡಿಸುತ್ತ ನಿಧಿ ಬೇಡವೆಂದು ಕಿರುಚಿಕೊಳ್ಳುತ್ತಿದ್ದರೂ ತಮ್ಮಂದಿರವಳನ್ನು ಹಿಮದ ರಾಶಿ ಮೇಲೆಸೆದುಬಿಟ್ಟರು. ಇಬ್ಬರೂ ತನ್ನ ಕಡೆ ಬಂದಿದ್ದು ನೋಡಿ ಅವರಿಂದ ತಪ್ಪಿಸಿಕೊಳ್ಳಲು ಪಾವನ ಅತ್ತೆಯ ಕಡೆ ಓಡಿದರೂ ಅತ್ತಿಗೆಯನ್ನಿಡಿದು ಊಯ್ಯಾಲೆಯಾಡಿಸಿ ಅವಳನ್ನೂ ಅಕ್ಕನಂತೆ ಹಿಮದ ಮೇಲೆಸೆದರು. ನಿಶಾ ಖುಷಿಯಿಂದ ಚಪ್ಪಾಳೆ ತಟ್ಟುತ್ತಿದ್ದರೆ ಅಣ್ಣ ತಮ್ಮನ ಮುಂದಿನ ದಾಳಿ ನಿಹಾರಿಕಾಳ ಮೇಲೆ ನಡೆದಿತ್ತು. ಅಕ್ಕ..ಅಣ್ಣ ತಂಗಿಯರಾಟ ನೋಡಿ ಅಕ್ಷರಾ ತುಂಬ ಖುಷಿ ಪಡುತ್ತಿದ್ದರೆ ಅವಳನ್ನೆತ್ತಿ ಅಣ್ಣ ತಮ್ಮ ಮಂಜಿನ ಮೇಲೆ ಎಸೆದುಬಿಟ್ಟರು. ಚಪ್ಪಾಳೆ ತಟ್ಟುತ್ತ ಕಿರುಚುತ್ತಿದ್ದ ನಿಶಾ ಅಣ್ಣಂದಿರು ತನ್ನತ್ತ ಬರುವುದನ್ನು ನೋಡಿ ಪಪ್ಪ..ಪಪ್ಪ...ಎಂದು ಕೂಗುತ್ತ ಅಪ್ಪನ ಕಡೆಗೋಡುವ ಮುಂಚೆ ಮುದ್ದಿನ ತಂಗಿಯನ್ನಿಡಿದರು. ನಿಶಾ ಕಿರುಚಾಡುತ್ತ ಬಿಡಿಸಿಕೊಳ್ಳಲು ಹೆಣಗಾಡಿದರೂ ಅವಳಿಂದ ಸಾಧ್ಯವಾಗದೆ ತಾನೂ ಅಕ್ಕಂದಿರ ಮಧ್ಯಕ್ಕೋಗಿ ಹಿಮದ ಮೇಲೆ ತೊಪ್ಪನೆ ಬಿದ್ದಳು. ಅಣ್ಣಂದಿರು ಊಯ್ಯಾಲೆಯಾಡಿಸಿ ತಮ್ಮನ್ನು ಎಸೆದಿದ್ದು ನಿಶಾ—ನಿಹಾರಿಕ ಇಬ್ಬರಿಗೂ ತುಂಬಾನೆ ಮಜವಾಗಿದ್ದು ಇನ್ನೂ ಬೇಕು..ಇನ್ನೂ ಬೇಕೆಂದು ಅಣ್ಣಂದಿರಿಂದ ತಮ್ಮನ್ನು ತಾವೇ ಊಯ್ಯಾಲೆಯಾಡಿಸಿ ಹಿಮದ ಮೇಲೆಸೆಸಿಕೊಳ್ಳುತ್ತ ಆಟವಾಡಿ ಏಂಜಾಯ್ ಮಾಡುತ್ತಿದ್ದರು. ತಂಗಿಯರ ಖುಷಿ ನೋಡುತ್ತ ನಿಧಿಯನ್ನು ತೋಳಿನಲ್ಲೆತ್ತಿಕೊಂಡು ಸುಭಾಷ್ ಗಿರಿಗರನೇ ಸುತ್ತು ತಿರುಗಿಸಿದರೆ ಅಣ್ಣ..ಅಣ್ಣ..ಎಂದು ಕಿರುಚಿಕೊಳ್ಳುತ್ತ ನಿಧಿ ಹಿಮದ ಮೇಲೋಗಿ ಪಾಚಿಕೊಂಡಳು. ಈಗ ಗಂಡನ ತೋಳಿನಲ್ಲಿದ್ದ ಪಾವನ ಬೇಡ ರೀ ಪ್ಲೀಸ್ ಎಂದು ಬೇಡಿಕೊಂಡರೂ ಬಿಡದೆ ತನ್ನ ಮಡದಿಯನ್ನೂ ತಂಗಿಯ ಪಕ್ಕಕ್ಕೆಸೆದನು. ನಿಶಾ ಕೂಡ ಮೂವರು ಅಣ್ಣಂದಿರನ್ನು ಮಂಜಿನಲ್ಲಿ ಕೆಡವಿಕೊಂಡು ಅವರ ಮೇಲೆಲ್ಲಾ ಹಿಮವನ್ನೆಸೆದು ಆಡುತ್ತಿದ್ದಳು. ನೀತು—ಹರೀಶ ಮಕ್ಕಳ ಖುಷಿ ನೋಡಿ ಸಂತೋಷಿಸುತ್ತಿದ್ದರೆ ವೀರ್..ಸುಮೇರ್..ಅಜಯ್ ಇವರೆಲ್ಲರ ಫೋಟೋ ವೀಡಿಯೋ ತೆಗೆಯುತ್ತಿದ್ದರು. ಮಮ್ಮ ಇನ್ನಿ ಸೊಪ್ಪ ಆಟ ಆತೀನಿ ಪೀಸ್ ಎನ್ನುತ್ತ ಬೆಳಿಗ್ಗೆಯಿಂದ ನಾಲ್ಕರವರೆಗೆ ಅಕ್ಕ ಅಣ್ಣಂದಿರ ಜೊತೆ ಕುಣಿದಾಡಿದ್ದ ನಿಶಾ ಹೊಟ್ಟೆ ಹಸಿಯುತ್ತಿದ್ದ ಹಾಗೆ ಅಮ್ಮನ ಬಳಿ ಬಂದು ಸೇರಿಕೊಂಡಳು.

ನಿಶಾ......ಮಮ್ಮ ನನ್ನಿ ಸುಸ್ಸಿ ಆತು ಹೊಟ್ಟಿ ಹಸಿತು ಹೋಗನ ಬಾ

ನೀತು......ಅಷ್ಟೊತ್ತಿಂದ ಕೂಗ್ತಿದ್ನಲ್ಲಮ್ಮ ಕಂದ ಈಗ ಬರ್ತೀಯ.

ಹರೀಶ......ಲೇ ನನ್ ಬಂಗಾರಿ ಎಷ್ಟೊಂದ್ ಖುಷಿಯಾಗಿದ್ಳು ನೋಡ್ತಿದ್ಯಲ್ಲ ರೇಗ್ಬೇಡ ಕಣೆ.

ನೀತು.......ರೀ ನಾನೆಲ್ಲಿ ರೇಗಿದೆ ಅವರೆಲ್ಲ ದೊಡ್ಡವರು ಇವಳಿನ್ನು ಪುಟ್ಟವಳಲ್ವ ಹಸಿವು ತಡ್ಕೊಂಡ್ ಆಡ್ತಿದ್ಳಲ್ಲ.

ಹರೀಶ....ನಡಿ ಕಂದ ನಾವಿಬ್ರೂ ಆಲೂ ಪರೋಟ ತಿನ್ನಣ.

ಶ್ರೀನಗರಕ್ಕೆ ತಲುಪುವ ದಾರಿಯಲ್ಲೇ ಊಟ ಮುಗಿಸಿದ ಕೂಡಲೇ ಕುಣಿದು ಕುಪ್ಪಳಿಸಿದ್ದ ಆಯಾಸದಲ್ಲಿ ಅಮ್ಮನ ಮಡಿಲಿಗೇರಿದ ನಿಶಾ ನಿದ್ರೆಗೆ ಶರಣಾದಳು. ವಾರವಿಡೀ ಶ್ರೀನಗರ ಮತ್ತಲ್ಲಿನ ಸುತ್ತ ಮುತ್ತಲಿನ ಪ್ರೇಕ್ಷಣೀಯ ಪ್ರದೇಶಗಳನ್ನು ಸುತ್ತಾಡಿ ಪೆಹಲ್ಗಾಂ ಪ್ರದೇಶವನ್ನೂ ವೀಕ್ಷಿಸಿಕೊಂಡು ಬಂದರು. ವಿಜಯದಶಮಿ ದಿನದ ಹಿಂದಿನ ದಿನವೇ ಎಲ್ಲರೂ ಜಮ್ಮು ತಲುಪಿದ್ದು ಮಾರನೇ ದಿನ ನಿಧಿ—ನಿಶಾಳ ಹುಟ್ಟು ಹಬ್ಬವಿದ್ದು ವೈಶ್ಣೋದೇವಿಯ ಸನ್ನಿಧಾನಕ್ಕೆ ಹೋಗುವುದೆಂದು ನಿರ್ಧರಿಸಲಾಗಿತ್ತು. ಜಮ್ಮು ತಲುಪಿ ಅಲ್ಲಿನ ಲಾಡ್ಜ್ ರೂಂ ಸೇರಿದಾಗ.......

ನಿಧಿ......ಕಳೆದ ಸಲ ಇಡೀ ಫ್ಯಾಮಿಲಿ ಜೊತೆಗಿದ್ರು ಆದರೀವತ್ತು ನಾವುಗಳಷ್ಟೆ ಉಳಿದವರಲ್ಯಾರೂ ಜೊತೆಗಿಲ್ವಲ್ಲಮ್ಮ.

ನೀತು ಮಗಳ ಮಾತಿಗೆ ಮುಗುಳ್ನಕ್ಕರೆ ಅಕ್ಕನ ಮಡಿಲಲ್ಲಿದ್ದ ನಿಹಾ ಕೂಡ ಹುಬ್ಬು ಕುಣಿಸಿ ನಗುತ್ತಿದ್ದಳು. ಅಮ್ಮ ತಂಗಿಯ ನಡವಳಿಕೆ ಅರ್ಥವಾಗದೆ ಇಬ್ಬರನ್ನೂ ನೋಡುತ್ತಿದ್ದ ನಿಧಿಯನ್ನು ಹಿಂದಿನಿಂದ ಯಾರೋ ಬಿಗಿಯಾಗಿ ತಬ್ಬಿಡಿದರು. ನಿಧಿ ಚೂಡಿದಾರ್ ಧರಿಸಿ ವೇಲ್ ಹೊದ್ದುಕೊಂಡಿದ್ದು ಅದರ ಸಂಧಿಯಲ್ಲಿ ಕೈ ತೂರಿಸಿದ ಆ ವ್ಯಕ್ತಿ ನಿಧಿಯ ಮಾವಿನ ಹಣ್ಣುಗಳನ್ನು ಸವರಿ ಅಮುಕಿ ಬಿಟ್ಟಿತು. ನಿಧಿ ಕೋಪದಿಂದ ಹಿಂದಿರುಗಿದ ಮರುಕ್ಷಣವೇ ಆಕೆ ಮುಖದಲ್ಲಿ ಸಂತೋಷದ ಚಿಲುಮೆಯೊಡೆಯಿತು.

ನಿಕಿತಾ.....ಏನಕ್ಕ ನಾನೇಗಿಲ್ಲಿ ಅಂತ ಶಾಕಾಯ್ತಾ ?

ನಿಧಿ ತಂಗಿಯ ಕೆನ್ನೆ ಸವರಿ......ನೀನ್ಯಾವಾಗ ಬಂದ್ಯೆ ? ನೀನೊಬ್ಳೇ ಬಂದಿದ್ದಾ ? ನಿಮ್ಮಿ ಆಂಟಿ ಅಂಕಲ್.......

ನಮಿತ.......ಅಕ್ಕ ಎಲ್ಲರೂ ಬಂದಾಯ್ತು ನಿಮ್ಮ ಚಿನ್ನಿ ಬರ್ತಡೇ ದಿನ ಮಿಸ್ ಮಾಡಕ್ಕಾಗುತ್ತಾ.

ಬೇರೆ ಬೇರೆಯಾಗಿ ತಮ್ಮ ಮಕ್ಕಳ ಜೊತೆ ಟೂರಿಗೆ ತೆರಳಿದ್ದ ಇಡೀ ಕುಟುಂಬವನ್ನು ನೀತು—ಹರೀಶ ಜಮ್ಮುವಿಗೆ ಕರೆಸಿಕೊಂಡಿದ್ದನು. ಮಕ್ಕಳಿಬ್ಬರ ಹುಟ್ಟಿದ ದಿನ ಮಾರನೆ ದಿನ ಇಡೀ ಕುಟುಂಬದವರು ಜೊತೆಯಲ್ಲೇ ವೈಷ್ಣೋದೇವಿಯ ಸನ್ನಿಧಾನಕ್ಕೆ ಹೋಗುವುದಾಗಿ ತೀರ್ಮಾನಿಸಿ ದಂಪತಿಗಳು ಕುಟುಂಬದವರನ್ನು ತಾವಿರುವಲ್ಲಿಗೆ ಕರೆಸಿಕೊಂಡಿದ್ದರು. ಹಾಸಿಗೆಯಲ್ಲಿ ಹಾಯಾಗಿ ಮಲಗಿದ್ದ ನಿಶಾಳ ಮೇಲೆ ಚಿಂಕಿ..ಪಿಂಕಿ..ಚಿಂಟು ಉರುಳಾಡಿದಾಗ ಥಟ್ಟನೆದ್ದು ಕುಳಿತ ನಿಶಾ ಮೊದಲಿಗೆ ತಾನೆಲ್ಲಿದ್ದೀನೆಂದು ಸುತ್ತಲೂ ನೋಡಿ ತಮ್ಮ.. ತಂಗಿಯರನ್ನು ಕಂಡು ಖುಷಿಯಿಂದ ಕಿರುಚಿದಳು. ಪೂನಂ ಸ್ವಾತಿ ಕೂಡ ಅವರ ಅಪ್ಪ ಅಮ್ಮನೊಟ್ಟಿಗೆ ಬಂದಿದ್ದು ಗೆಳತಿಯರನ್ನು ಬಿಗಿದಪ್ಪಿಕೊಂಡ ನಿಶಾ ತಮ್ಮ ತಂಗಿ ಜೊತೆ ಕುಣಿದಾಡುತ್ತಿದ್ದಳು. ಮುಂಜಾನೆ ಎಲ್ಲರೂ ಸ್ನಾನ ಮುಗಿಸಿ ರೆಡಿಯಾಗಿದ್ದು ನಿಧಿ ಅಪ್ಪ ಅಮ್ಮನ ಆಶೀರ್ವಾದ ಪಡೆದರೆ ನಿಶಾ ಮುದ್ದು ಮಾಡಿಸಿಕೊಂಡು ಅಜ್ಜಿ..ತಾತನ ಮಡಿಲಿಗೇರಿದಳು. ವಿಕ್ರಂ ಸಿಂಗ್ ವೈಷ್ಣೋದೇವಿ ದರ್ಶನಕ್ಕೆ ಬೇಕಾದ ರಿಜಿಸ್ಟ್ರೇಶನ್ ಪ್ರಕ್ರಿಯೆ ಮುಗಿಸಿ ರಾಣಾ ಜೊತೆ ತಾನೂ ಬಂದಿದ್ದನು. ಅಕ್ಷರಾಳನ್ನು ಗೆಳತಿಯೆಂದು ನಿಧಿ ಮನೆಯವರಿಗೆ ಪರಿಚಯಿಸಿದ್ದು ಅವಳ ತಂಗಿಯರು ತುಂಬಾನೇ ಪ್ರೀತಿಯಿಂದ ಬೇಟಿಯಾಗಿದ್ದರು. ವೈಷ್ಣೋದೇವಿ ಬೆಟ್ಟದ ತಪ್ಪಲು ತಲುಪಿದ್ದು ಮನೆ ಮಕ್ಕಳು ವೈಷ್ಣೋ ಮಾತೆಯ ಹೆಡ್ ಬ್ಯಾಂಡ್ ಹಣೆಗೆ ಕಟ್ಟಿಕೊಂಡು ಜೈಮಾತಾಧಿ ಎಂಬ ಘೋಷಣೆ ಕೂಗುತ್ತ ಬೆಟ್ಟವನ್ನೇರಲು ಶುರುವಾದರು. ಚಿಂಟು ಚಿಂಕಿ ಅವರ ಅಪ್ಪಂದಿರ ಹೆಗಲಿಗೇರಿದ್ದರೆ ಸುಭಾಷಣ್ಣನ ಹೆಗಲಿಗೆ ಪಿಂಕಿ ಏರಿಕೊಂಡಿದ್ದಳು.
ನಿಶಾ ಗೆಳತಿಯರಿಬ್ಬರ ಕೈಹಿಡಿದು ಜೈಮಾತಾಧಿ ಎಂದು ಕೂಗುತ್ತ ನಡೆದುಕೊಂಡೇ ಹೊರಟಿದ್ದು ಎಷ್ಟೇ ಹೊತ್ತಾದರೂ ಸುಸ್ಸಿ ಆತು ಎನ್ನದಿದ್ದಾಗ......

ಸುರೇಶ......ಚಿನ್ನಿ ಮರಿ ಸುಸ್ತಾಗ್ತಿಲ್ವ ಕಂದ ಬಾ ಎತ್ಕೊತೀನಿ.

ನಿಶಾ.....ಇಲ್ಲ ಅಣ್ಣ ನನ್ನಿ ಸುಸ್ಸಿ ಇಲ್ಲ ನಾನಿ ನಕ್ಕೊಂಡ್ ಬತೀನಿ.

ಸುರೇಶ........ಪೂನಿ..ಸ್ವಾತಿ ನಿಮ್ಮಿಬ್ರಿಗೂ ಸುಸ್ತಾಗ್ತಿಲ್ವ ಪುಟ್ಟಿ ?

ಇಬ್ಬರೂ ಇಲ್ಲ ಅಣ್ಣನೆಂದೇಳಿ ಗೆಳತಿಯ ಕೈ ಹಿಡಿದು ಜೈಮಾತಾಧಿ ಜಾಪ ಮಾಡುತ್ತ ನಡೆಯುತ್ತಿದ್ದರು.

ಹರೀಶ.......ಎಷ್ಟು ದೂರ ನಡಿತಾರೊ ನಡೀಲಿ ಬಿಡು ಸುರೇಶ ಸುಸ್ತಾದಾಗ ಎತ್ಕೊಂಡ್ರಾಯ್ತು.

ಒಂದು ತಾಸಿನ ನಂತರ ಪೂನಂ..ಸ್ವಾತಿ ಕುದುರೆ ಮೇಲೇರಿದ್ದರೂ ನಿಶಾ ಮಾತ್ರ ನಡೆದುಕೊಂಡೇ ಬರ್ತೀನಂತ ಅಣ್ಣಂದಿರ ಜೊತೆ ಹೆಜ್ಜೆಯಿಡುತ್ತ ಮುನ್ನಡೆದಳು.

ಅನುಷ......ಚಿನ್ನಿಗಿಲ್ಲಿ ಸುಸ್ತಾಗ್ತಿಲ್ವಲ್ಲಕ್ಕ ಇದೂ ಪವಾಡ ಅನ್ಸುತ್ತೆ.

ಸುಮ......ಜಗಜ್ಜನನನಿಯ ಆಶೀರ್ವಾದದಿಂದ ನಿಶಾ ಜನಿಸಿದ್ದು ಅಂತ ನಿನಗೂ ಗೊತ್ತಿದ್ಯಲ್ಲ ಅನು ನಾವೀಗದೇ ತಾಯಿಯ ಹತ್ತಿರ ಹೋಗ್ತಿದ್ದೀವಿ. ನಿಶಾ ಜಗಜ್ಜನನಿಯ ಮುದ್ದಿನ ಮಗಳು ಹಾಗಾಗಿ ಅವಳಲ್ಲಿನ ನವಚೈತನ್ಯವೂ ತಾಯಿಯ ಕೃಪೆ ಇರ್ಬೇಕು.

ಸೌಭಾಗ್ಯ......ನೀತು ನೀನು ಮಗಳ ಜೊತೆಗೇ ಇರಮ್ಮ ಇವಳನ್ನು ಒಬ್ಬಳೇ ಬಿಡ್ಬೇಡ.

ಕೆಲವು ಘಂಟೆ ನಡೆದು ಸನ್ನಿಧಾನ ತಲುಪಿದ್ದು ನಿಶಾ ತಾನು ಸಹ ನಡೆದುಕೊಂಡೇ ಬೆಟ್ಟವನ್ನೇರಿ ಬಂದಿದ್ದಳು. ವೈಷ್ಣೋದೇವಿ ನೆಲೆಸಿರುವ ಗುಹೆಯ ಹತ್ತಿರ ತಲುಪಿದಂತೆಲ್ಲಾ ನಿಶಾ ಮುಖದಲ್ಲಿನ ತೇಜಸ್ಸು ಹೊಳೆಯುತ್ತಿದ್ದು ಆಕೆ ಅತ್ಯಂತ ಗಂಭೀರಾವಸ್ತೆಯಲ್ಲಿ ಅಮ್ಮನ ತೋಳಿಗೇರಿದ್ದಳು. ಕುಟುಂಬದವರೆಲ್ಲರೂ ದೇವಿಯ ದರ್ಶನ ಮಾಡಿ ಮುಂದೆ ತೆರಳಿದ್ದರೆ ನಿಶಾಳನ್ನೆತ್ತಿಕೊಂಡು ನೀತು ದೇವಿಯ ಮುಂದೆ ನಿಂತಿದ್ದಳು. ನಿಶಾ ದೇವಿಯ ಶ್ಲೋಕಗಳನ್ನು ಹೇಳುತ್ತ ಕೈ ಮುಗಿದು ಭಕ್ತಿಯಲ್ಲಿ ತನ್ಮಯಳಾಗಿದ್ದರೆ ಮಗಳನ್ನು ತೋಳಿನಲ್ಲೆತ್ತಿಕೊಂಡಿದ್ದ ನೀತು ತನಗೀ ಭಾಗ್ಯ ಕರುಣಿಸಿದ್ದಕ್ಕಾಗಿ ದೇವಿಗೆ ನಮಿಸುತ್ತಿದ್ದಳು. ಒಂದು ಘಂಟೆ ಬಳಿಕ....

ನಿಶಾ......ಮಮ್ಮ ಬಾ ಹೋಗಣ ನಾನಿ ಮಾಮಿ ಜೊತೆ ಮಾತಾಡಿ ಮಮ್ಮ ಮಾತಾಧಿ ಹೋಗಿ ಆಟ ಆಡು ಅಂದಿ ಮಮ್ಮ. ಪಪ್ಪ ನನ್ನಿ ಹೊಟ್ಟಿ ಹಸೀತು ಸುಸ್ಸಿ ಆತು ನನ್ನಿ ಎತ್ತಿ ಪಪ್ಪ.

ಹರೀಶ.......ನಡಿ ನೀತು ತಾಯಿ ಮಗಳಿಗೇನು ಹೇಳಬೇಕಿತ್ತೋ ಅದನ್ನಿವಳಿಗೆ ಅಲೌಕಿಕ ರೂಪದಲ್ಲಿ ಹೇಳಿರುತ್ತಾಳೆ.

ನೀತು......ನಾವು ನಿಜಕ್ಕೂ ಪೂರ್ವ ಜನ್ಮದ ಫಲ ಈ ಜನ್ದದಲ್ಲಿ ಪಡಿತಿದ್ದೀವಿ ಅನ್ನಿಸ್ತಿದೆ ಕಣ್ರಿ. ನಡಿ ಕಂದ ತಿಂಡಿ ತಿನ್ನುವಂತೆ ನಿಂಗೆ ಆಲೂ ಪರೋಟ ಬೇಕಲ್ವ.

ನಿಶಾ.......ಮಸಾಲೆ ದೋಸೆ ಬೇಕು ಮಮ್ಮ ಲಿಲ್ಲ ಪಪ್ಪ.

ಹರೀಶ......ನಿಂಗೇನ್ ಬೇಕೋ ತಿನ್ನುವಂತೆ ಕಂದ.

ಮಕ್ಕಳಿಬ್ಬರ ಹುಟ್ಟಿದ ದಿನವೆಲ್ಲ ವೈಷ್ಣೋದೇವಿ ಸನ್ನಿಧಾನದಲ್ಲೇ ಕಳೆದಿದ್ದು ಮನೆ ಮಕ್ಕಳು ತಮ್ತಮ್ಮ ಟೂರಿನ ಬಗ್ಗೆ ವಿವರಣೆ ನೀಡಿ ಮಾತನಾಡುತ್ತ ಕುಳಿತಿದ್ದರು. ನಿಶಾಳಿಗಂತೂ ವೈಷ್ಣೋದೇವಿಯ ಶಕ್ತಿಪೀಠಕ್ಕೆ ಬೇಟಿ ನೀಡಿದ್ದು ಹೊಸ ಉತ್ಸಾಹ ತುಂಬಿದಂತಾಗಿದ್ದು ಫುಲ್ ಕೀಟಲೆ ಮಾಡುತ್ತ ಖುಷಿಯಾಗಿದ್ದಳು. ಮಾರನೇ ದಿನ ನೇರವಾಗೆಲ್ಲರೂ ದೆಹಲಿಯ ವರ್ಧನ್ ಮನೆ ತಲುಪಿದರು. ತಮ್ಮ ಮಗಳನ್ನು ಕರೆದೊಯ್ಯಲು ಕಾರ್ಗಿಲ್ಲಿಂದ ಬ್ರಿಗೇಡಿಯರ್ ಕುಲ್ದೀಪ್ ಸಿಂಗ್ ಪತ್ಮಿ ಜಾನಕಿಯೊಟ್ಟಿಗೆ ತಲುಪಿದರೆ ನೀತು ತಾನು ಕೊಟ್ಟ ಮಾತಿನಂತೆ ವಿವೇಕ್ ಮತ್ತವನ ತಂಗಿ ಜಾನಕಿ ಇಬ್ಬರನ್ನು ವರ್ಷಗಳ ನಂತರ ಜೊತೆ ಸೇರಿಸಿದ್ದಳು. 21 ವರ್ಷಗಳ ನಂತರ ಈ ದಿನ ಅಣ್ಣ ತಂಗಿ ಬೇಟಿಯಾಗಿದ್ದು ಜಾನಕಿ ಅಣ್ಣನೆದೆಯಲ್ಲಿ ಮುಖ ಹುದುಗಿಸಿ ಸಂತೋಷದ ಕಣ್ಣೀರು ಸುರಿಸುತ್ತ ಇಬ್ಬರೂ ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದರು.ನಿಕಿತಾ—ನಮಿತ ತಮಗೂ ಅತ್ತೆ ಮಾವನಿರುವ ಸಂಗತಿ ತಿಳಿದು ಅಕ್ಕನಾಗುವ ಅಕ್ಷರಾಳ ಆಲಿಂಗನದಲ್ಲಿದ್ದರೆ ತಂಗಿಯರಿಗಿಂತಲೂ ಸಂತೋಷದಲ್ಲಿರುವ ಅಕ್ಷರಾ ಇಬ್ಬರನ್ನು ಬಿಗಿಯಾಗಿ ತಬ್ಬಿಕೊಂಡಿದ್ದಳು. ಅಣ್ಣ ತಂಗಿ ಇಷ್ಟು ವರ್ಷಗಳಾದ ಬಳಿಕ ಒಂದಾಗಲು ಕಾರಣಳಾಗಿದ್ದ ನಿಶಾ ತನ್ನ ಪುಟಾಣಿ ಶೈತಾನ್ ಗ್ಯಾಂಗ್ ಜೊತೆ ಕುಣಿದು ಕುಪ್ಪಳಿಸುತ್ತ ಆಡುತ್ತಿದ್ದಳು. ನಾಲ್ಕು ದಿನಗಳ ವಿದೇಶಿ ಪ್ರವಾಸ ಮುಗಿಸಿ ಬಂದ ವರ್ಧನನನ್ನು ಚಿಲ್ಟಾರಿಗಳು ಸುತ್ತುವರಿದು ಮುದ್ದಾಡಿಸಿಕೊಂಡರೆ ನಿಶಾ ಚಾಚುವಿಗೆ ಟೂರ್ ವರದಿಯೊಪ್ಪಿಸಿದಳು. ದಿನವಿಡೀ ಎಲ್ಲ ಸಂಭ್ರಮದಿಂದ ಕಳೆದು ಮಾರನೇ ದಿನ ತಮ್ತಮ್ಮ ಗೂಡುಗಳಿಗೆ ಮರಳಿ ಹೊರಟಾಗ.......

ಅಕ್ಷರಾ.....ಅತ್ತೆ ನಾನಿಷ್ಟು ದೊಡ್ಡವಳಾದ್ಮೇಲೆ ನಿಮ್ಮೆಲ್ಲರ ವಿಷಯ ತಿಳೀತು ಆದರಿಷ್ಟು ಬೇಗ ನಿಮ್ಮಿಂದ ದೂರವಾಗ್ತಿರೋದಕ್ಕೆ ಸ್ವಲ್ಪ ಕಷ್ಟವಾಗ್ತಿದೆ.

ಸವಿತಾ.......ಬೇಜಾರಾಗ್ಬೇಡ ಅಕ್ಷರಾ ಕಾಲೇಜಿಗೆ ರಜೆ ಬಂದಾಕ್ಷಣ ನಮ್ಮೂರಿಗೆ ಬಂದ್ಬಿಡು ನಾವೂ ನಿಮ್ಮಲ್ಲಿಗೆ ಬರ್ತೀವಿ. ಸಧ್ಯಕ್ಕೀಗ ನಿನ್ನ ಮಾವ ಮತ್ತು ನನ್ನ ಕೆಲಸ ಹೆಚ್ಚಾಗಿದೆ ಮಧ್ಯದಲ್ಲಿ ಫ್ರೀಯಾಗಿ ಖಂಡಿತ ನಿನ್ನತ್ತಿರ ಬರ್ತೀವಮ್ಮ.

ನಮಿತ......ಅಕ್ಕ ದಿನ ರಾತ್ರಿ ನಿಮ್ಜೊತೆ ವೀಡಿಯೋ ಕಾಲ್ ಮಾಡಿ ಮಾತಾಡ್ತೀನಿ ಮಿಸ್ಸೇ ಮಾಡಲ್ಲ.

ನಿಕಿತಾ......ಮುಂದಿನ ರಜೆ ನಾವೆಲ್ಲ ಒಟ್ಟಿಗೆ ಕಳೆಯೋಣಾಕ್ಕ.

ಇದೇ ಫ್ಯಾಮಿಲಿ ಡ್ರಾಮ ಬಹಳ ಹೊತ್ತಿನವರೆಗೂ ನಡೆಯುತ್ತಿದ್ದು ಭಾವನಾತ್ಮಕ ಮಾತುಗಳೊಂದಿಗೆ ಬೀಳ್ಗೊಳ್ಳುತ್ತಿದ್ದರು. ಅಣ್ಣನನ್ನು ಮರಳಿ ಪಡೆಯಲು ಪ್ರಮುಖ ಕಾರಣಳಾಗಿದ್ದ ನಿಶಾಳನ್ನು ಜಾನಕಿ
.....ಅಕ್ಷರಾ ಎತ್ತಿಕೊಂಡು ಮುದ್ದಾಡಿದರು. 15—20 ದಿನಗಳಾದ ನಂತರವಿಂದು ಇಡೀ ಕುಟುಂಬ ಕಾಮಾಕ್ಷಿಪುರಕ್ಕೆ ಹಿಂದಿರುಗಿದ್ದು ಟೂರ್ ಬಗ್ಗೆ ಚರ್ಚಿಸಿ ಫೋಟೋ ವೀಡಿಯೋ ನೋಡುವುದರಲ್ಲಿ ಕಾಲ ಕಳೆದರು.
 

Samar2154

Well-Known Member
2,714
1,772
159
Update posted.

ಆಫೀಸ್ ಕೆಲಸದ ಒತ್ತಡ ಸ್ವಲ್ಪ ಜಾಸ್ತಿಯಿದೆ ಹಾಗಾಗಿ ಅಪ್ಡೇಟ್ ಲೇಟಾಗ್ತಿದೆ.

ಮುಂದಿನ ಅಪ್ಡೇಟಿನಲ್ಲಿ ಹೊಸ ಜೋಡಿಯ ಸೆಕ್ಸ್ ಸೀನ್ ಬರಲಿದೆ ಈ ವಾರಾಂತ್ಯದಲ್ಲಿ ಕೊಡ್ತಿನಿ.
 
  • Like
Reactions: sharana and jayasri
Top