ಭಾಗ 149
ಶಿಲ್ಪಾ ಮತ್ತು ಜ್ಯೋತಿ ಮನೆಯಿಂದ ಫ್ರೆಶಾಗಿ ತೋಟದ ಮನೆಯನ್ನು
ತಲುಪಿದಾಗ ಅಲ್ಲುಳಿದ್ದಿದ್ದ ಡಿಜಿಪಿ....ಡಿಎಸ್ಪಿ ಮತ್ತಿತರ ಅಧಿಕಾರಿಗಳ
ಸಮೂಹಕ್ಕೆ ಪಂಚಾಯಿತಿ ಅಧ್ಯಕ್ಷರು ರುಚಿಕರವಾದ ತಿಂಡಿ ಮತ್ತು ಕಾಫಿ ವ್ಯವಸ್ಥೆ ಮಾಡಿದ್ದರು.
ಡಿಜಿಪಿ.....ಶಿಲ್ಪಾ ನೀವಿಬ್ಬರೂ ತಿಂಡಿ ತೆಗೆದುಕೊಳ್ಳಿ ಸೊಗಸಾಗಿದೆ.
ಶಿಲ್ಪಾ....ಥಾಂಕ್ಯೂ ಸರ್ ನಾವು ಮನೆಯಿಂದಲೇ ಮುಗಿಸಿಕೊಂಡು ಬಂದಿದ್ದೀವಿ ನೀವು ತಿಂಡಿ ಮಾಡಿ ಸರ್ ನಾವು ಕಾಫಿ ಕುಡಿತೀವಿ.
ಎಲ್ಲರೂ ತಿಂಡಿ ಸೇವಿಸಿ ಕಾಫಿ ಕುಡಿಯುತ್ತ......
ಶಿಲ್ಪಾ.....ಸರ್ ಸಿಎಂ ಸಾಹೇಬರು ಎಷ್ಟು ಹೊತ್ತಿಗೆ ಬರುತ್ತಾರೆ ?
ಡಿಜಿಪಿ....11 ಘಂಟೆ ಸುಮಾರಿಗೆ ಅವರ ಹೆಲಿಕಾಪ್ಟರ್ ಬರುತ್ತದಂತೆ
ಎಂಬ ಮಾಹಿತಿ ಬಂದಿತ್ತು ಅದಕ್ಕೂ ಮುಂಚೆಯೇ ಅವರ ಸಿಬ್ಬಂದಿ ಠಾಣೆಗೆ ಬರುತ್ತಾರೆ.
ಶಿಲ್ಪಾ....ಸರ್ ಆಗಲೇ ಎಂಟುವರೆ ಆಗಿದೆ ಠಾಣೆಯಲ್ಲಿ ಅವರಿಗೆಲ್ಲಾ
ತಿಂಡಿ...ಕಾಫಿ ವ್ಯವಸ್ಥೆಯನ್ನೂ ಮಾಡಿಸಬೇಕು ನಾನು ಹೊರಡುವೆ.
ಅಧ್ಯಕ್ಷ 2......ಮೇಡಂ ನೀವು ತಿಂಡಿ ಕಾಫಿ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಈಗಾಗಲೇ ಠಾಣೆಯ ಸಿಬ್ಬಂದಿಗಳಿಗೆ ತಿಂಡಿ ಕಾಫಿ ಕಳುಹಿಸಿ ಕೊಟ್ಟಿದ್ದೀವಿ ಅದರ ಜೊತೆ ಬರುವ ಅತಿಥಿಗಳಿಗೆ ತಂಪು ಪಾನೀಯ ಕುಳಿತುಕೊಳ್ಳಲು ಶಾಮಿಯಾನದ ವ್ಯವಸ್ಥೆಯನ್ನೂ ಮಾಡಿದ್ದೀವಿ.
ಅಧ್ಯಕ್ಷ 3....ಸಿಎಂ ಸಾಹೇಬರ ಹೆಲಿಕಾಪ್ಟರ್ ಇಳಿಯಲು ತೋಟದ ಪೂರ್ವ ದಿಕ್ಕಿನ ಮೈದಾನದಲ್ಲಿ ಸಕಲ ಸಿದ್ದತೆಗಳೂ ಆಗಿದೆ. ಹೂವಿನ
ಹಾರ.....ಹೂವಿನ ಬೊಕ್ಕೆ ಎಲ್ಲವೂ ಇಲ್ಲಿಗೆ ಮತ್ತು ಠಾಣೆಗೆ ಇನ್ನೇನು ಸ್ವಲ್ಪ ಹೊತ್ತಿನಲ್ಲೇ ತಲುಪಲಿದೆ.
ಡಿಜಿಪಿ.....ಶಿಲ್ಪಾ ನೀನು ಠಾಣೆಯಲ್ಲಿದ್ದು ಎಲ್ಲಾ ವ್ಯವಸ್ಥೆ ನೋಡಿಕೊ ನಾನು ಇಲ್ಲಿಯೇ ಉಳಿದು ಸಿಎಂ ಅವರನ್ನು ರಿಸೀವ್ ಮಾಡಿ ಠಾಣೆ ಹತ್ತಿರವೇ ಕರೆತರುತ್ತೇನೆ.
ಶಿಲ್ಪಾ....ಸರ್ ಇಲ್ಲಿನ ಠಾಣಾಧಿಕಾರಿಯಾಗಿ ನಾನು ಇಲ್ಲಿರಬೇಕಾದ್ದು
ನಿಯಮ ಅಲ್ಲವಾ ಸರ್ ಅದರಿಂದ ಸಿಎಂ ಬೇಸರವಾಗಬಹುದು.
ಡಿಜಿಪಿ......ಸಿಎಂ ಬೆಳಿಗ್ಗೆ ಫೋನ್ ಮಾಡಿ ನನಗೆ ಸೂಚಿಸಿದ್ದಾರೆ ನಿನ್ನ
ಅವರು ಠಾಣೆಯಲ್ಲೇ ಬೇಟಿಯಾಗುವುದಾಗಿಯೂ ಹೇಳಿರುತ್ತಾರೆ. ಡಿಎಸ್ಪಿ ನೀವೂ ಇವರೊಂದಿಗೆ ಠಾಣೆಗೆ ಹೊರಡಿ ಸಿಎಂ ಸಿಬ್ಬಂದಿಗಳ
ಆಗಮನದ ಸಮಯಕ್ಕೆ ನೀವಿಲ್ಲಿದ್ದರೆ ಒಳ್ಳೆಯದು.
ಶಿಲ್ಪಾ....ಜ್ಯೋತಿ ಮತ್ತು ಡಿಎಸ್ಪಿ ಠಾಣೆಗೆ ತೆರಳಿ ಸಿಎಂ ಆಗಮನಕ್ಕೆ ಬೇಕಾದ ಸಿದ್ದತೆಗಳನ್ನು ಪರಿಶೀಲಿಸಿ ಪೇದೆಗಳಿಗೆ ಕೆಲವು ಸೂಚನೆ ಕೊಟ್ಟು ಎಲ್ಲರನ್ನೂ ಪೆರೇಡಿನ ರೀತಿ ನಿಯೋಜಿಸಿದರು. 10 ಘಂಟೆ ಸುಮಾರಿಗೆ ಬಂದ ಸಿಎಂ ಸಿಬ್ಬಂದಿಗಳನ್ನು ಬರಮಾಡಿಕೊಂಡು ಅವರಿಗೆ ತಿಂಡಿ...ಕಾಫಿ...ಜ್ಯೂಸ್ ನೀಡಿ ವಿಚಾರಿಸಿಕೊಂಡ ನಂತರ ಎಲ್ಲರೂ ಸಿಎಂ ಆಗಮನವನ್ನೇ ಎದುರು ನೋಡುತ್ತಿದ್ದರು. 11:30 ಸಮಯಕ್ಕೆ ಠಾಣೆಗೆ ಆಗಮಿಸಿದ ಸಿಎಂ ರವರಿಗೆ ಹೂವಿನ ಹಾರ ಹಾಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಬರಮಾಡಿಕೊಂಡರೆ ಅಲ್ಲಿಗೆ ಸೇರಿದ್ದ ಮೂರು ಹಳ್ಳಿಯ ಜನರು ಅವರಿಗೆ ಜಯಘೋಷಗಳನ್ನು ಕೂಗಿದರು. ಸಿಎಂ ಗ್ರಾಮದ ಜನತೆಗೆ ಕೈಬೀಸಿ ಕೆಲ ಹೊತ್ತಿನಲ್ಲಿಯೇ
ಎಲ್ಲರನ್ನುದ್ದೇಶಿಸಿ ಮಾತನಾಡುವೆನೆಂದು ತಿಳಿಸಿ ಠಾಣೆಯ ಒಳಗಡೆ ಹೊಕ್ಕರು. ಠಾಣೆಯೊಳಗೀಗ ಸಿಎಂ...ಡಿಜಿಪಿ...ಡಿಎಸ್ಪಿ...ಸಿಎಂ ರ ಕಾರ್ಯದರ್ಶಿ...ಕೆಲವು ಹಿರಿಯ ಅಧಿಕಾರಿಗಳ ಜೊತೆ ಶಿಲ್ಪಾ ಮತ್ತು ಜ್ಯೋತಿ ಉಪಸ್ಥಿತರಿದ್ದರು.
ಸಿಎಂ....ಶಿಲ್ಪಾ ನಿನ್ನ ಕಾರ್ಯವೈಖರಿಗೆ ನಾವು ಪ್ರಭಾವಿತರಾಗಿದ್ದೀವಿ
ಹಲವಾರು ವರ್ಷಗಳಿಂದಲೂ ಇಲ್ಲಿನ ಕಾಲಿನಲ್ಲಿ ಕಳ್ಳಸಾಗಾಣಿಕೆ ಮಾಡುತ್ತಿದ್ದ ಎರಡೂ ತಂಡಗಳನ್ನು ಸಂಪೂರ್ಣ ನಿರ್ನಾಮ ಮಾಡಿ ಮಹತ್ತರವಾದ ಕಾರ್ಯವನ್ನೇ ಸಾಧಿಸಿರುವೆ. ಅದಕ್ಕಾಗಿ ನಿನಗೂ ನಿನ್ನ ಸಿಬ್ಬಂದಿಗಳಿಗೂ ನಾನು ಸರ್ಕಾರದ ಪರವಾಗಿ ಅಭಿನಂಧನೆ ಸಲ್ಲಿಸುತ್ತೇನೆ. ನಿಮ್ಮೆಲ್ಲರಿಗೂ ಸೂಕ್ತವಾದ ಬಹುಮಾನಗಳನ್ನು ಸಹ ನಮ್ಮ ಸರ್ಕಾರದಿಂದ ಘೋಷಿಸುತ್ತೇನೆ. ಠಾಣೆಯ ಮೇಲೆ ಅಟ್ಯಾಕ್
ಮಾಡಿದವರು ಯಾರೆಂದು ತಿಳಿಯಿತಾ ? ಖಧೀಮರ ನಾಯಕರಿಗೆ ಯಾರು ಅಭಯಹಸ್ತ ನೀಡುತ್ತಿದ್ದರೆಂದು ಗೊತ್ತಾಯಿತಾ ?
ಶಿಲ್ಪಾ ಎಲ್ಲರನ್ನೊಮ್ಮೆ ನೋಡಿ.....ಸರ್ ಇದೇ ವಿಷಯವಾಗಿ ನಿಮ್ಮ ಜೊತೆ ಮಾತನಾಡಬೇಕಿದೆ ಆದರೆ ಕೆಲವೊಂದು ವಿಷಯ ತುಂಬಾ ಕಾನ್ಫಿಡೆನ್ಷಿಯಲ್ ಆಗಿರುವುದರಿಂದ ನಿಮ್ಮೊಂದಿಗೆ ಏಕಾಂತದಲ್ಲಿ ಮಾತನಾಡಲು ನನಗೆ ಅವಕಾಶ ಸಿಗಬಹುದಾ ?
ಡಿಜಿಪಿ.....ಇಲ್ಲಿರುವವರೆಲ್ಲ ನಮ್ಮವರೇ ನೀನು ಇಲ್ಲಿಯೇ ಪೂರ್ತಿ ವಿವರಗಳನ್ನು ಹೇಳಬಹುದು.
ಶಿಲ್ಪಾ....ಸರ್ ನನಗೆ ಯಾರ ಮೇಲೂ ಅನುಮಾನವಿಲ್ಲ ಇಲ್ಲಿರುವ ಯಾರ ಬಗ್ಗೆಯೂ ಭಯವಿಲ್ಲ ಆದರೆ ಮುನ್ನೆಚ್ಚರಿಕೆ ತೆಗೆದುಕೊಳ್ಳೋ
ಸಲುವಾಗಿ ಹೇಳಿದೆ ಅಷ್ಟೆ. ಈ ಮುಂಚೆ ರಂಗ ಮತ್ತವನ ಸದಸ್ಯರು ಕಾಡಿನಿಂದ ತಪ್ಪಿಸಿಕೊಳ್ಳದಂತೆ ದಾರಿ ಬಂದ್ ಮಾಡುವುದಕ್ಕಾಗಿ ನಿಯೋಜನೆಗೊಂಡಿದ್ದ ಮೂವರು ಎಸ್ಪಿಗಳಲ್ಲಿ ಇಬ್ಬರು ಅವನಿಗೇ ಸಹಾಯ ಮಾಡುವವರಾಗಿದ್ದರು ಅದನ್ನೇಗೆ ಮರೆಯಲು ಸಾಧ್ಯ ? ನಾವು ನಿಗದಿಗೊಂಡಿದ್ದ ಸಮಯಕ್ಕೂ ಮುನ್ನವೇ ರಂಗನ ಅಡ್ಡೆಯ ಮೇಲೆ ದಾಳಿ ನಡೆಸದೇ ಹೋಗಿದ್ದರೆ ಆ ಇಬ್ಬರು ಎಸ್ಪಿಗಳು ರಂಗನ ತಂಡದವರನ್ನು ಸುರಕ್ಷಿತವಾಗಿ ಕಾಡಿನಿಂದಾಚೆ ಕಳಿಸಿರುತ್ತಿದ್ದರಲ್ಲವಾ
ಸರ್. ಈ ಠಾಣೆಯ ಮೇಲೂ ಅವರೆಲ್ಲರನ್ನೂ ಬಿಡಿಸುವುದಕ್ಕಾಗಿ ಭಾರೀ ಮದ್ದು ಗುಂಡುಗಳೊಂದಿಗೆ ದಾಳಿಯೂ ನಡೆದಿದೆ. ಪ್ರಾಣದ ಹಂಗು ತೊರೆದು ಅವರನ್ನು ಹಿಮ್ಮೆಟ್ಟಿಸಲು ಹೋರಾಡುತ್ತ ನನ್ನ ಕೆಲ
ಸಿಬ್ಬಂದಿಗಳು ಗಾಯಗೊಂಡು ಆಸ್ಪತ್ರೆ ಸೇರಿರುವುದು ನಿಮಗೂ ತಿಳಿದಿದೆ ಅದಕ್ಕೆ ನಾನ್ಯಾವ ರಿಸ್ಕೂ ತೆಗೆದುಕೊಳ್ಳಲು ಸಿದ್ದಳಿಲ್ಲ ಸರ್ ನಾನು ಮಿತಿಮೀರಿ ಮಾತನಾಡಿದ್ದರೆ ಕ್ಷಮೆಯಿರಲಿ.
ಸಿಎಂ.....ಡಿಜಿಪಿಯವರೇ ಎಲ್ಲರನ್ನು ಹೊರಗೆ ಕಳುಹಿಸಿರಿ.
ಶಿಲ್ಪಾ....ಕ್ಷಮಿಸಿ ಸರ್ ಮಧ್ಯದಲ್ಲಿ ಮಾತನಾಡುತ್ತಿರುವೆ ನಾವು ಇಲ್ಲಿ ಮಾತನಾಡುವ ಬದಲು ಹಿಂದಿನ ಗೋಡೌನಿನಲ್ಲಿ ಮಾತನಾಡಿದರೇ ಸೂಕ್ತ ಡಿಜಿಪಿಯವರೂ ನಮ್ಮೊಂದಿಗೆ ಇರುತ್ತಾರೆ.
ಸಿಎಂ.....ಇದು ನಿನ್ನ ಠಾಣೆ ನಾವು ಮಾತನಾಡಲು ಯಾವ ಜಾಗ ಸೂಕ್ತವೆಂದು ನಿನಗೇ ಚೆನ್ನಾಗಿ ತಿಳಿದಿರುತ್ತೆ ಬನ್ನಿ ಡಿಜಿಪಿ ನಾವಲ್ಲಿಗೇ ಹೋಗೋಣ.
ಶಿಲ್ಪಾ ತನ್ನೊಂದಿಗೆ ಜ್ಯೋತಿಯನ್ನು ಕರೆದುಕೊಂಡು ಹಿಂದಿರುವಂತ ಗೋಡೌನಿನೊಳಗೆ ತೆರಳಿ ಸಿಎಂ ಮತ್ತು ಡಿಜಿಪಿಯವರಿಗೆ ಕೂರಲು ಚೇರ್ ಹಾಕಿದರು. ಶೈತಾನನ ಮಾಯೆಯಿಂದ ಗೋಡೌನ್ ಪೂರ್ತಿ ಶುಚಿಯಾಗಿದ್ದು ಸಿಎಂ ಮತ್ತು ಡಿಜಿಪಿಯವರಿಗೆ ಕುಳಿತುಕೊಳ್ಳಲು ತಿಳಿಸಿ ಶಿಲ್ಪಾ ಅವರೆದುರು ನಿಂತಳು.
ಸಿಎಂ......ಈಗ ಹೇಳಮ್ಮ ಏನು ತಿಳಿಸಬೇಕೆಂದಿರುವೆ ?
ಶಿಲ್ಪಾ.....ಸರ್ ರಂಗ ಮತ್ತವನ ಗ್ಯಾಂಗಿನವರಿಗೆ ರಾಜಾರೋಷವಾಗಿ
ಕಾಡಿನ ಸಂಪತ್ತನ್ನು ಲೂಟಿ ಮಾಡುವುದಕ್ಕೆ ಬೆಂಬಲವಾಗಿ ನಿಂತಿದ್ದ ವ್ಯಕ್ತಿ ಬೇರಾರೂ ಅಲ್ಲ ಈ ರಾಜ್ಯದ ಮತ್ತು ಸರ್ಕಾರದ ಗೃಹಮಂತ್ರಿ. ರಂಗನ ಅಡ್ಡೆಯಲ್ಲಿ ಕೋಟ್ಯಾಂತರ ರೂ.. ಮೌಲ್ಯದ ಡ್ರಗ್ಸ್ ಮತ್ತು ಇತರೆ ಮಾದಕ ವಸ್ತುಗಳ ದಾಸ್ತಾನನ್ನು ನಾವು ವಶಪಡಿಸಿಕೊಂಡು ಪೋಲಿಸ್ ಮುಖ್ಯ ಕಛೇರಿಗೆ ಕಳುಹಿಸಿದ್ದೇವೆ.
ಸಿಎಂ ಶಾಕಿನಿಂದ ಎದ್ದು ನಿಂತು.....ನೀನೇನು ಹೇಳುತ್ತಿರುವೆ ಗೊತ್ತಾ
ಇದೆಲ್ಲದರ ಹಿಂದೆ ಗೃಹಸಚಿವ ಸಾರಾನಾಥ್ ಕೈವಾಡ ಇದೆಯಾ ? ಅದಕ್ಕೇನು ಸಾಕ್ಷಿಗಳಿದೆ ?
ಶಿಲ್ಪಾ......ನಾನಿನ್ನೂ ಹೇಳುವುದನ್ನೇ ಮುಗಿಸಿಲ್ಲ ಸರ್ ತಾಳ್ಮೆಯಿಂದ
ಕೇಳಿ ಕೆಲ ಹೊತ್ತಿನಲ್ಲೇ ನಿಮ್ಮೆದುರು ಸಾಕ್ಷಿಗಳನ್ನೂ ಕರೆಸುತ್ತೇನೆ. ಸರ್ ಮುಂದಿನ ವರ್ಷ ರಾಜ್ಯದಲ್ಲಿ ಚುನಾವಣೆಗಳು ನಡೆಯಲಿದೆ. ನೀವು ನಿಮ್ಮ ಜನರ ಅನುಕೂಲಗಳಿಗಾಗಿ ಹಮ್ಮಿಕೊಂಡಿರುವಂತ ಯೋಜನೆಗಳಿಂದಾಗಿ ತುಂಬ ಜನಪ್ರಿಯರಾಗಿದ್ದೀರ. ಇದೇ ಕಾರಣ ಮುಂದಿನ ಚುನಾವಣೆಯಲ್ಲೂ ನಿಮ್ಮ ಪಕ್ಷವೇ ಪುನಃ ಅಧಿಕಾರಕ್ಕೆ ಬರಲಿದೆ ಅಂತ ಸಮೀಕ್ಷೆಗಳೂ ಹೇಳುತ್ತಿವೆ ಅಲ್ಲವ ಸರ್. ಆದರೆ ಗೃಹ ಸಚಿವರು ಅದಕ್ಕಿಂತಲೂ ಮುಂದಾಲೋಚಿಸಿ ಚುನಾವಣೆಗೆ ತನ್ನ ಬೆಂಬಲಿಗರಗೇ ಜಾಸ್ತಿ ಟಿಕೆಟ್ ಕೊಡಿಸಿ ನಿಮ್ಮ ಹೆಸರನ್ನೇ ಜನರ
ಮುಂದಿಟ್ಟು ಅವರನ್ನು ಗೆಲ್ಲಿಸಿ ತಾನೇ ಮುಖ್ಯಮಂತ್ರಿಯಾಗುವ ಯೋಜನೆ ರೂಪಿಸಿದ್ದಾರೆ. ಆಯ್ಕೆಯಾದ ಶಾಸಕರಲ್ಲಿ ಬಹಳ ಜನ ಅವರಿಗೇ ಬೆಂಬಲ ನೀಡುವುದರಿಂದ ನೀವು ಹಿಂದೆ ಸರಿಯುವುದು
ಅನಿವಾರ್ಯ ಆಗುತ್ತೆ. ಗೃಹ ಸಚಿವರ ಈ ಪ್ಲಾನಿಗೆ ನಿಮ್ಮ ಪಕ್ಷದಲ್ಲಿನ
ರಾಜ್ಯಾಧ್ಯಕ್ಷ ವಿಠಲ ಮೂರ್ತಿ ಬೆಂಬಲವಾಗಿ ನಿಂತಿದ್ದಾರೆ. ಒಂದು ವೇಳೆ ಸಾರಾನಾಥ್ ಸಿಎಂ ಆಗಲು ನೀವು ಅಡ್ಡಿಪಡಿಸಲು ಪ್ರಯತ್ನ ಮಾಡಿದರೆ ಭಯೋತ್ಪಾದಕರ ಹೆಸರನ್ನು ಮುಂದಿಟ್ಟು ನಿಮ್ಮನ್ಯಾವ ರೀತಿ ಕೊಲ್ಲಬೇಕೆಂದೂ ಸಹ ಯೋಜನೆ ರೂಪಿಸಿದ್ದಾರೆ.
ಶಿಲ್ಪಾ ಹೇಳಿದ್ದನ್ನು ಕೇಳಿ ಸಿಎಂ ನಡುಗಿ ಹೋದರೆ ಡಿಜಿಪಿ ಕುಳಿತಲ್ಲೇ ಬೆವರಿ ಹೋಗಿದ್ದರು.
ಶಿಲ್ಪಾ ಮುಂದುವರೆಸುತ್ತ.......ಸಾರಾನಾಥ್ ಒಬ್ಬರೇ ಅಲ್ಲ ನಿಮ್ಮ ಸರ್ಕಾರದ ಶಿಕ್ಷಣ ಸಚಿವ ರಾಜೀವ್...ಅಬಕಾರಿ ಸಚಿವ ವೆಂಕಟೇಶ್
.....ಸಹಕಾರ ಸಚಿವ ನಾರಾಯಣ.....ಕೈಗಾರಿಕೆ ಸಚಿವ ಮೂರ್ತಿ....
ಇಂಧನ ಸಚಿವ ರಾಮಯ್ಯ....ಹಿಂದುಳಿದ ಕಲ್ಯಾಣ ಸಚಿವರಾದ ಮೊಹಮದ್ ಮತ್ತು ಸಾರಿಗೆ ಸಚಿವ ಸೋಮಯ್ಯ ಎಲ್ಲಾ ಇದರಲ್ಲಿ ಶಾಮೀಲಾಗಿದ್ದಾರೆ. ನಿಮ್ಮ ಸರ್ಕಾರದಲ್ಲಿ ನೀವು ನಿಷ್ಠಾವಂತರಾಗಿ ಸೇವೆ ಸಲ್ಲಿಸುತ್ತಿದ್ದರೂ ಈ ಎಲ್ಲಾ ಸಚಿವರೂ ಯಾವ್ಯಾವ ಪ್ರಕಾರ ಹಣ ಲೂಟಿ ಮಾಡಲು ಸಾಧ್ಯವಿದೆಯೋ ಎಲ್ಲಾ ಮೂಲಗಳಿಂದ ಕೊಳ್ಳೆ ಹೊಡೆಯುತ್ತಿದ್ದಾರೆ. ರಂಗನ ಅಡ್ಡೆಯನ್ನು ನಾವು ಡಿಜಿಪಿ ಸರ್ ಸಮ್ಮುಖದಲ್ಲೇ ಶೋಧಿಸಿದ್ದೆವು ಆದರೆ ಅಲ್ಲಿಯೂ ಒಂದು ರಹಸ್ಯ ಕೋಣೆಯಿರುವುದರ ಬಗ್ಗೆ ನಮಗೆ ಗೊತ್ತಾಗಲಿಲ್ಲ. ನಾನು ಜ್ಯೋತಿ ಒಂದು ದಿನ ಅಡ್ಡೆಯ ಮೂಲೆ ಮೂಲೆಯನ್ನು ಹುಡುಕಿ ಜಾಲಾಡಿದಾಗ ಈ ರಹಸ್ಯ ಕೋಣೆಯ ಬಗ್ಗೆ ತಿಳಿಯಿತು. ಅದರಲ್ಲಿ ಈ ಸಚಿವರ ಮತ್ತು ಸರ್ಕಾರದಲ್ಲಿನ ಕೆಲವು ಹಿರಿಯ ಉನ್ನತವಾದ ಹುದ್ದೆಗಳಲ್ಲಿರುವ ಅಧಿಕಾರಿಗಳಿಗೆ ಸೇರಿದ ಸುಮಾರು 300 ಕೋಟಿ ಅಥವ ಅದಕ್ಕೂ ಅಧಿಕ ಹಣ ಮತ್ತು ರಾಜ್ಯದಲ್ಲಿ ಇವರುಗಳೆಲ್ಲರೂ ಮಾಡಿರುವ ಅಪಾರ ಪ್ರಮಾಣದ ಅಕ್ರಮ ಆಸ್ತಿಗಳಿಗೆ ಸಂಬಂಧಿಸಿ ಹಲವು ದಾಖಲೆಗಳೂ ಸಿಕ್ಕಿವೆ. ವಿದೇಶಿ ಬ್ಯಾಂಕುಗಳ ಕೆಲವು ಕಾಗದ
ಪತ್ರಗಳೂ ದೊರೆಯಿತಾದರೂ ಅದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ
ತಿಳಿದಿಲ್ಲ ಏಕೆಂದರೆ ಅದನ್ನು ಪರಿಶೀಲಿಸುವುದು ನನ್ನ ಅಧಿಕಾರದ ವ್ಯಾಪ್ತಿಯನ್ನು ಮೀರಿದ್ದಾಗಿದೆ. ರಾಜ್ಯದಲ್ಲಿ ನಡೆಯುವ ದೊಂಬಿ.... ಕೋಮು ಗಲಭೆಗಳಿಗೆ ಗೃಹ ಸಚಿವರ ಕುಮ್ಮಕ್ಕೂ ಇದೆ. ವಿರೋಧ ಪಕ್ಷದ ನಾಯಕರಾದ ಕುಮಾರ ಕೂಡ ಇದರಲ್ಲಿ ಗೃಹ ಸಚಿವರ ಜೊತೆ ಕೈ ಜೋಡಿಸಿದ್ದಾರೆ. ರಾಜ್ಯದಲ್ಲಿ ಹೊರ ದೇಶದ ದುಷ್ಟರನ್ನೂ ನೆಲೆಯೂರಿಸಲು ಗೃಹ ಸಚಿವರು ದೊಡ್ಡ ಮೊತ್ತದ ಹಣ ಪಡೆದಿದ್ದು ಅದನ್ನೂ ಕಾರ್ಯಗತ ಮಾಡುತ್ತಿದ್ದಾರೆ. ಇದರ ಜೊತೆ ಡ್ರಗ್ಸ್...ಹೆಣ್ಣು
ಮಕ್ಕಳನ್ನು ಅಪಹರಿಸಿ ಮಾರಾಟ ಮಾಡುವ ಜಾಲ....ಕೋಟಾ ನೋಟು ಚಲಾಯಿಸುವಂತ ದೇಶದ್ರೋಹದ ಚಟುವಟಿಗಳನ್ನೆಲ್ಲಾ ನಡೆಸುವವರಿಗೆ ಗೃಹ ಸಚಿವರೇ ಆಶ್ರಯದಾತರು. ನಿಮ್ಮೊಂದಿಗೇ ಸರ್ಕಾರದಲ್ಲಿದ್ದುಕೊಂಡು ಯಾವ ಅಂಜಿಕೆ ಅಥವ ಪ್ರತಿರೋಧವೂ ಇಲ್ಲದೆ ಈ ಧಂದೆಗಳಿಗೆ ಸಹಾಯ ಮಾಡುತ್ತಿದ್ದಾರೆ. ಜ್ಯೋತಿ ಹೋಗಿ ದಿವಾಕರನನ್ನು ಕರೆದುಕೊಂಡು ಬಾ.
ಜ್ಯೋತಿ ತೆರಳಿ ಗೃಹ ಸಚಿವನ ಪಿಎ ದಿವಾಕರನನ್ನು ಕರೆತಂದರೆ ಆತ ಕೂಡ ಸಿಎಂ ಮತ್ತು ಡಿಜಿಪಿಯವರ ಮುಂದೆ ಗೃಹ ಸಚಿವ ಮಾಡುವ
ಎಲ್ಲಾ ಕಾನೂನುಬಾಹಿರ ಮತ್ತು ದೇಶ ದ್ರೋಹದ ಚಟುವಟಿಗಳನ್ನು
ವಿವರಿಸಿ ಹೇಳಿದನು. ಅವನ ನಂತರ ಗುಲಾಮ ಬಷೀರ್ ಖಾನ್ ಸಹ ಸಿಎಂರನ್ನು ಯಾವ ರೀತಿ ಹತ್ಯೆ ಮಾಡಬೇಕೆಂದು ಗೃಹ ಸಚಿವ ಯೋಜನೆ ರೂಪಿಸಿರುವನೆಂದು ಹೇಳಿದಾಗ ಸಿಎಂ ಕುರ್ಚಿಯಲ್ಲೇ ಗರ ಬಡಿದವರಂತೆ ಕುಳಿತುಬಿಟ್ಟರು.
ಶಿಲ್ಪಾ......ಸರ್ ನೀವು ಅತ್ಯಂತ ಪ್ರಾಮಾಣಿಕ ವ್ಯಕ್ತಿ ಮತ್ತು ನಿಮ್ಮ ಸರ್ಕಾರದ ಯೋಜನೆಗಳಿಂದ ಬಡವರು ಎರಡು ಹೊತ್ತಿನ ಊಟ ಮಾಡುವಷ್ಟು ಸಭಲರಾಗಿದ್ದಾರೆ. ಆದರೆ ನಿಮ್ಮ ಸರ್ಕಾರದಲ್ಲಿನ ಈ ಮಂತ್ರಿಗಳು ಮತ್ತು ನಿಮ್ಮ ಪಕ್ಷದಲ್ಲಿ ಅವರಿಗೆ ಬೆಂಬಲಿಗರಾದ 27 ಜನ ಶಾಸಕರು ಎಲ್ಲಾ ರೀತಿಯ ಕಾನೂನು ವಿರೋಧಿ ಮತ್ತು ದೇಶ ದ್ರೋಹದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ನೀವು ತುಂಬಾ ಪ್ರಾಮಾಣಿಕರು ಆದರೆ ಮುಗ್ದ ಮಾತೃ ಹೃದಯದ ವ್ಯಕ್ತಿಯೂ ಸಹ
ಎಲ್ಲರನ್ನೂ ಬೇಗ ನಂಬಿ ಬಿಡುತ್ತೀರ. ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡು ನಿಮ್ಮ ಮುಂದೆ ತಮಗಿಂತ ಪ್ರಾಮಾಣಿಕರು ಬೇರೆ ಯಾರೂ ಇಲ್ಲವೆಂದು ಬಿಂಬಿಸಿಕೊಂಡು ಬೆನ್ನ ಹಿಂದೆ ಎಲ್ಲಾ ರೀತಿ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈಗ ಮುಂದೇನು ಮಾಡಬೇಕೆಂಬ ನಿರ್ಧಾರ ನಿಮ್ಮದೇ ಆಗಿರುತ್ತೆ ಸರ್ ನನಗೆ ತಿಳಿದ ಎಲ್ಲಾ ಮಾಹಿತಿಗಳನ್ನೂ ನಿಮ್ಮೊಂದಿಗೆ ಹಂಚಿಕೊಂಡಿರುವೆ ಅದು ಕೂಡ ಸಾಕ್ಷಿಗಳ ಸಮೇತ.
ಶಿಲ್ಪಾ ಹೇಳಿದ ಮಾಹಿತಿಗಳನ್ನು ಆಲಿಸಿ ಗೃಹಸಚಿವನ ಪಿಎ ಮತ್ತು ಆತನ ಬಲಗೈ ಬಂಟನ ಹೇಳಿಕೆಗಳನ್ನು ಕೇಳಿ ಮುಖ್ಯಮಂತ್ರಿಗಳು ಚಿಂತಾಕ್ರಾಂತರಾಗಿ ಯೋಚಿಸುತ್ತಿದ್ದರೆ ಡಿಜಿಪಿ ಮೂವರನ್ನು ನೋಡಿ ಅವಕ್ಕಾಗಿ ಹೋಗಿದ್ದನು.
ಡಿಜಿಪಿ.....ಶಿಲ್ಪಾ ನಿನ್ನ ಪ್ರಕಾರ ಏನು ಕ್ರಮ ಜರುಗಿಸಿದರೆ ಉತ್ತಮ ?
ನೀನೇನು ಮಾಡಲು ಯೋಚಿಸಿರುವೆ ?
ಶಿಲ್ಪಾ.....ಸರ್ ನಾನೇನು ಮಾಡಲು ಸಾಧ್ಯವಿದೆ ? ಇದರಲ್ಲಿ ನನ್ನ ಅಭಿಪ್ರಾಯ ತಿಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲವಲ್ಲ ಸರ್. ನಾನೊಂದು ಠಾಣೆಯಲ್ಲಿ ಸಾಮಾನ್ಯ ಸರ್ಕಲ್ ಇನಸ್ಪೆಕ್ಟರ್ ಗೃಹ ಸಚಿವರಂತ ದೊಡ್ಡ ಪದವಿಯಲ್ಲಿರುವವರ ವಿರುದ್ದ ಏನೋ ಕ್ರಮ ಜರುಗಿಸುವುದಕ್ಕೆ ನನಗೆ ಅಧಿಕಾರವೇ ಇಲ್ಲವಲ್ಲ ಸರ್. ಈ ನಿರ್ಧಾರ
ಏನಿದ್ದರೂ ಮುಖ್ಯಮಂತ್ರಿಗಳೇ ತೆಗೆದುಕೊಳ್ಳಬೇಕು ಯಾವುದೇ ರೀತಿ ಕ್ರಮ ಜರುಗಿಸಿದರೂ ಹಲವಾರು ಪ್ರಶ್ನೆಗಳು ಉದ್ಬವಿಸುತ್ತವೆ ಅದಕ್ಕೆಲ್ಲಾ ಸಿಎಂ ಸರ್ ತಾನೇ ಜನತೆಗೆ ಉತ್ತರಿಸಬೇಕಾದವರು.
ಸಿಎಂ ಕೆಲ ಹೊತ್ತು ಯೋಚಿಸಿ......ಡಿಜಿಪಿಯವರೇ ಇದರಲ್ಲಿ ನಿಮ್ಮ ಅಭಿಪ್ರಾಯವೇನು ? ನನ್ನ ಸರ್ಕಾರ ಅಥವ ಪಕ್ಷದ ಬಗ್ಗೆ ನೀವು ಯೋಚಿಸದೆ ನಾಡಿನ ಹಿತದೃಷ್ಟಿಯಿಂದ ಹೇಳಿ. ನಾನು ಸತ್ತರೂ ಸರಿ
ರಾಜ್ಯ ಮತ್ತು ದೇಶಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ.
ಡಿಜಿಪಿ.....ಸರ್ ಎಲ್ಲರನ್ನು ಬಂಧಿಸಿ ಕಾನೂನಿನ ಪ್ರಕಾರವಾಗಿ ಶಿಕ್ಷೆ ಕೊಡಿಸುವುದೇ ಸರಿಯಾದ ನಿರ್ಧಾರ.
ಶಿಲ್ಪಾ.....ಸರ್ ಸಾಯುವ ಮಾತನಾಡಬೇಡಿ ನಿಮ್ಮಿಂದ ರಾಜ್ಯಕ್ಕೆ ಮತ್ತು ಜನತೆಗೆ ಇನ್ನೂ ಒಳ್ಳೆಯ ಕೆಲಸಗಳಾಗಬೇಕಿದೆ. ಒಂದು ವೇಳೆ
ನಿಮ್ಮ ಸ್ಥಾನದಲ್ಲಿ ಬೇರೆಯವರು ಉದಾಹರಣೆಗೆ ಗೃಹ ಸಚಿವರೇ ಸಿಎಂ ಕುರ್ಚಿಯಲ್ಲಿ ಕುಳಿತರೆ ರಾಜಾರೋಷವಾಗಿ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಾರೆ. ಎಲ್ಲವನ್ನೂ ತಿಳಿದಿದ್ದರೂ ಜೊಕರುಗಳಂತೆ ನಾವು ಅವರು ಹಾಕಿದ ತಾಳಕ್ಕೆ ಕುಣಿಯದೆ ಬೇರೇನೂ ಮಾಡಲು ಸಾಧ್ಯವಿರುವುದಿಲ್ಲ ಸರ್.
ಡಿಜಿಪಿ.....ಹೌದು ಸರ್ ಶಿಲ್ಪಾ ಹೇಳುವುದು ಸತ್ಯ. ನಾವು ಇವರನ್ನು
ಬಂಧಿಸಿದರೆ ರಾಜ್ಯದ ಸಿಎಂ ದೇಶಕ್ಕೆ ದ್ರೋಹವೆಸಗುತ್ತಿದ್ದರು ತಮ್ಮ ಪಕ್ಷದವರೇ ಆಗಿದ್ದರೂ ಅವರನ್ನು ರಕ್ಷಿಸದೆ ಶಿಕ್ಷೆ ಕೊಡಿಸಿದರೆಂದು ನಿಮ್ಮ ಖ್ಯಾತಿಯೂ ಹೆಚ್ಚಾಗುತ್ತೆ. ಅದರ ಜೊತೆ ದೇಶ ದ್ರೋಹದಂತ ಗಂಭೀರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮಂತ್ರಿಗಳು...ಕೆಲ ಶಾಸಕರು ಮತ್ತು ಅಧಿಕಾರಿಗಳಿಗೆ ಶಿಕ್ಷೆ ದೊರೆತಂತಾಗುತ್ತೆ.
ಸಿಎಂ.....ಈಗಲೇ ಬಂಧಿಸುವುದಾ ?
ಶಿಲ್ಪಾ......ಈಗ ಬೇಡ ಸರ್ ನಾವೂ ಹೀಗೆಯೇ ಮಾಡುತ್ತೇವೆಂದು ಅವರು ಊಹಿಸಿರುವ ಸಾಧ್ಯತೆಗಳಿವೆ. ಏಕೆಂದರೆ ಗೃಹ ಸಚಿವರ ಪಿಎ ಮತ್ತವರ ಬಲಗೈ ಬಂಟ ಕಾಣೆಯಾಗಿದ್ದಾರೆ ಹಾಗು ಅವರೆಲ್ಲಿ ಇದ್ದಾರೆಂದು ಯಾರಿಗೂ ಗೊತ್ತಿಲ್ಲ. ಬಷೀರ್ ನಮ್ಮ ಹಳ್ಳಿಗೆ ಬಂದ ದಿನದಿಂದ ಕಾಣಿಸುತ್ತಿಲ್ಲ ಅದಕ್ಕೆ ಗೃಹ ಸಚಿವರು ನನ್ನ ಮೇಲೆಯೇ ಅನುಮಾನ ಇರುತ್ತೆ. ಈಗ ನಾವು ಅವರನ್ನು ಅರೆಸ್ಟ್ ಮಾಡಿದರೂ ಕೋರ್ಟಿನಲ್ಲಿ ಇವರಿಬ್ಬರಿಂದ ನಾವು ಹೆದರಿಸಿಯೇ ಹೇಳಿಕೆಗಳನ್ನು ಕೊಡಿಸುತ್ತಿರುವುದಾಗಿ ಅವರ ವಕೀಲರು ವಾದ ಮಂಡಿಸುತ್ತಾರೆ. ನಮಗೆ ದೊರೆತಿರುವ ಹಣಕಾಸಿನ ವ್ಯವಹಾರಗಳ ದಾಖಲೆಗಳನ್ನು ಸಲ್ಲಿಸಿದರೂ ನ್ಯಾಯಾಲಯದಿಂದ ಅವರಿಗೆ ಜಾಮೀನು ಸಿಗುತ್ತದೆ. ಅವರು ಹೊರಬಂದ ನಂತರ ಇನ್ಯಾವುದಾದರು ವಿಧ್ವಂಸಕ ಕೃತ್ಯ ನಡೆಸಿ ಎಲ್ಲರ ಗಮನ ಅತ್ತ ಹರಿಯುವಂತೆ ಮಾಡಿ ಈ ಕೇಸಿನಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ.
ಡಿಜಿಪಿ......ಶಿಲ್ಪಾ ಹೇಳುತ್ತಿರುವುದು ಸರಿಯಾಗಿದೆ ಸರ್ ಅವರು ನಿರಾಳರಾಗಿರುವಾಗ ನಾವು ಬಂಧಿಸಬೇಕು ಆದರೆ ಅದಕ್ಕಿಂತಲೂ ಮುಂಚೆ ಅವರ ವಿರುದ್ದ ಇನ್ನಷ್ಟು ಸಾಕ್ಷಿಗಳನ್ನು ಕಲೆ ಹಾಕಬೇಕಿದೆ. ಸರ್ ಈ ಕೆಲಸ ನಿರ್ವಹಿಸಲು ಶಿಲ್ಪಾ ಸೂಕ್ತವಾದವಳೆಂದು ನನ್ನ ಅಭಿಪ್ರಾಯ ಅವಳಿಗೆ ಈ ಕೇಸಿನ ಸಂಪೂರ್ಣ ಜವಾಬ್ದಾರಿಯನ್ನು ನೀಡಬೇಕು. ಇವಳಷ್ಟು ನಿಖರವಾಗಿ.....ಚುರುಕಾಗಿ....ನಿಷ್ಠೆಯಿಂದ ಕೆಲಸ ಮಾಡುವವರು ನಮ್ಮ ಇಲಾಖೆಯಲ್ಲಿ ಇನ್ನೊಬ್ಬರಿಲ್ಲ.
ಸಿಎಂ.....ನೀವಿಬ್ಬರೂ ಹೇಳಿದ್ದು ಸರಿಯಾಗಿದೆ ಹಾಗೇ ಮಾಡೋಣ.
ಇದಕ್ಕಾಗಿ ಒಂದು ವಿಶೇಷ ತಂಡವನ್ನು ರಚನೆ ಮಾಡಿ ಶಿಲ್ಪಾ ನೀನೇ ಆ ತಂಡದ ಮುಖ್ಯಸ್ಥೆಯಾಗಿರುತ್ತೀಯ. ರಾಜ್ಯದ ಯಾವುದೇ ಠಾಣೆ
ವ್ಯಾಪ್ತಿಗೆ ಬರುವ ಕೇಸನ್ನಾದರೂ ನೀನು ನಿನ್ನ ಸುಪರ್ದಿಗೆ ಪಡೆದು ಮುಂದಿನ ಆಕ್ಷನ್ ತೆಗೆದುಕೊಳ್ಳಲು ಸ್ವತಂತ್ರಳು. ನೀನೇ ನಿನ್ನ ತಂಡ ಆಯ್ಕೆ ಮಾಡಿಕೋ ಜೊತೆಗೆ ನಿನ್ನನ್ನು ಎಸಿಪಿಯಾಗಿ ಪ್ರಮೋಟ್ ಮಾಡುತ್ತಿದ್ದೀನಿ. ನನಗೆ ದೇಶದ್ರೋಹಿಗಳಿಂದ ರಾಜ್ಯ ಸಂಪೂರ್ಣ ಮುಕ್ತಿಯಾಗಬೇಕಷ್ಟೆ.
ಶಿಲ್ಪಾ ಕ್ಷಣಕಾಲ ಶಾಕಾಗಿ.......ಥಾಂಕ್ಯೂ ಸರ್ ಆದರೆ ನನಗೆ ಕೆಲವು ದಿನ ರಜೆ ಬೇಕಾಗಿದೆ. ಇಲಾಖೆಯ ಕರ್ತವ್ಯಕ್ಕೆ ಸೇರಿದಾಗಿನಿಂದಲೂ ನನಗೆ ಕುಟುಂಬದವರೊಡನೆ ಸಮಯ ಕಳೆಯುವ ಅವಕಾಶವೇ ಸಿಕ್ಕಿಲ್ಲ. ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ನಡೆದ ನಂತರ ನಾನು ಕೆಲ ದಿನಗಳು ಕುಟುಂಬದೊಂದಿಗೆ ಇರಲು ಇಚ್ಚಿಸುತ್ತೇನೆ.
ಸಿಎಂ.....ಈ ಕೇಸಿನ ವಿಚಾರಣೆ ಯಾವಾಗ ?
ಶಿಲ್ಪಾ......ಸರ್ ಮುಂದಿನ ವಾರ.
ಸಿಎಂ.....ಒಕೆ ವಿಚಾರಣೆ ಮುಗಿದ ನಂತರ ನಿನಗೆ ಒಂದು ತಿಂಗಳು ಸಮಯಾವಕಾಶ ನೀಡುವೆ. ನೀನು ಡಿಜಿಪಿಯವರ ಜೊತೆಯಲ್ಲಿ ಚರ್ಚಿಸಿ ಒಂದು ತಂಡ ರಚಿಸಿಕೊಂಡು ದೇಶದ್ರೋಹಿಗಳಿಗೆ ಜೈಲಿನ ರುಚಿ ತೋರಿಸಬೇಕು. ನಿನಗೆ ಸರ್ಕಾರದಿಂದ ಯಾವುದೇ ರೀತಿಯ ಸಹಾಯ ಅಥವ ಸವಲತ್ತುಗಳು ಬೇಕಿದ್ದರೂ ನೇರವಾಗಿ ನನಗೇ ಫೋನ್ ಮಾಡಬಹುದು.
ಶಿಲ್ಪಾ.....ಸರಿ ಸರ್ ನೀವು ಹೇಳಿದಂತೆಯೇ ಮಾಡುವೆ.
ಇನ್ನೊಂದು ಘಂಟೆ ಇದೇ ವಿಷಯವಾಗಿ ಚರ್ಚಿಸಿದಾಗ ಶಿಲ್ಪಾ ತನ್ನ ಜೊತೆ ಜ್ಯೋತಿ....ಅದಿತಿ ಮತ್ತು ಕೃತಿಕಾ ಇರಬೇಕೆಂಡಳು. ಅದಕ್ಕೆ ಡಿಜಿಪಿ ತಕ್ಷಣವೇ ಒಪ್ಪಿಗೆ ಸುಚಿಸಿ ಮುಂದಿನ ವಿಚಾರಣೆಯು ಉಚ್ಚ ನ್ಯಾಯಾಲಯದಲ್ಲಿ ನಡೆಯುವುದರಿಂದ ನಾವು ಬೇಂಗಳೂರಿನಲ್ಲಿ ಬೇಟಿಯಾಗೋಣ ಎಂದರು. ಸುಮಾರು ಮೂರು ಘಂಟೆಗಳ ಕಾಲ
ನಾಲ್ವರೂ ಠಾಣೆ ಹಿಂದಿನ ಗೋಡೌನಿನೊಳಗೇ ಚರ್ಚೆ ನಡೆಸಿದರು. ಅಲ್ಲಿಂದ ಹೊರಬಂದಾಗ ಪಂಚಾಯಿತಿ ಅಧ್ಯಕ್ಷರ ಆಗ್ರಹದಿಂದಾಗಿ ಸಿಎಂ ಹಳ್ಳಿಗರನ್ನುದ್ದೇಶಿಸಿ ಭಾಷಣ ಮಾಡಿದರು. ಅಧ್ಯಕ್ಷರು ಸೇರಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಹಳ್ಳಿ ಜನರೊಂದಿಗೆ ಬೆರತು ಭೋಜನ ಸೇವಿಸಿದ ಸಿಎಂ ಬೆಂಗಳೂರಿನ ಕಡೆ ಪ್ರಯಾಣ ಬೆಳಿಸಿದರು.
* *
* *
continue......