ಭಾಗ 219
ಜುಲೈ 31
ರಾಜಸ್ಥಾನ.....
ಜೈಪುರದ ಬಳಿ ಒಂದು ವಯಕ್ತಿಕ ಫಾರ್ಮ್ ಹೌಸ್.....
ರಾಜಸ್ಥಾನದ ರಾಜಧಾನಿ ಜೈಪುರದಿಂದ 40 ಕಿಮೀ.. ದೂರ ನಿರ್ಜನ ಪ್ರದೇಶದಲ್ಲಿ ಎಕರೆಗಟ್ಟಲೆ ವಿಶಾಲವಾದ ಪ್ರದೇಶದಲ್ಲಿ ಅತ್ಯಾಧುನಿಕ ಸಾಧನಗಳೊಂದಿಗೆ ಸುಸಜ್ಜಿತವಾಗಿರುವ ಫಾರ್ಮ್ ಹೌಸಿನಲ್ಲಿಂದು ಆ ಪ್ರದೇಶದ ಗಣ್ಯಾತಿಗಣ್ಯ ವ್ಯಕ್ತಿಗಳೆಲ್ಲರೂ ಒಟ್ಟಿಗೆ ಸೇರಿಕೊಂಡು ಮೀಟಿಂಗ್ ಮಾಡುತ್ತಿದ್ದರು. ರಾಜಸ್ಥಾನದ ಮುಖ್ಯಮಂತ್ರಿ.....ಗೃಹ ಸಚಿವನ ಜೊತೆ ಅಲ್ಲಿನ ಸರ್ಕಾರದ ಇನ್ನೂ ಏಳು ಜನ ಮಂತ್ರಿಗಳು... ಸರ್ಕಾರಿ ಸೇವೆಯಲ್ಲಿರುವ ಅತ್ಯುನ್ನತ ಅಧಿಕಾರಿಗಳು....ಎಂಟು ಜನ
....ಶಾಸಕರು....ಕೆಲವು ಬಿಝಿನೆಸ್ ಜಗತ್ತಿಗೆ ಸಂಬಂಧಿಸಿದ ಪ್ರತಿಷ್ಠಿತ ವ್ಯಕ್ತಿಗಳು ಯಾವುದೋ ಮುಖ್ಯ ವಿಷಯ ಚರ್ಚಿಸುವುದಕ್ಕಾಗಿ ಇಲ್ಲಿ ಬಂದು ಸೇರಿಕೊಂಡಿದ್ದರು.
ಸಿಎಂ.....ಏನ್ರೀ ದೊರಾಬ್ ನಾವು ಮೊದಲು ನಮ್ಮ ಜೊತೆಯಲ್ಲಿ ಸೇರಿಕೊಳ್ಳುವಂತೆ ನಿಮ್ಮನ್ನು ಆಹ್ವಾನಿಸಿದರೂ ನೀವಾಗ ನಮ್ಮನ್ನು ತಿರಸ್ಕರಿಸಿ ವಿರೋಧ ಪಕ್ಷದವರ ಜೊತೆ ಸೇರಿಕೊಂಡಿದ್ರಲ್ಲ.
ದೊರಾಬ್.....ಕ್ಷಮಿಸಿ ಸರ್ ಆಗ ಮಣ್ಣು ತಿನ್ನುವ ಕೆಲಸ ಮಾಡಿಬಿಟ್ಟೆ ಈಗ ನನಗೆ ಬುದ್ದಿ ಬಂದಿದೆ.
ಗೃಹ ಸಚಿವ......ಎಲ್ಲಿ ಕಿಶೋರಿ ಸಿಂಗ್ ಜಗಮಲ್ ಇನ್ನೂ ಬಂದಿಲ್ವಲ್ಲ ಅವರ ಜೊತೆಗಾರರೂ ಸಹ ಯಾರೊಬ್ಬರೂ ಕಾಣಿಸ್ತಿಲ್ಲ.
ಒಬ್ಬ ಅಧಿಕಾರಿ.......ಸರ್ ಅವರ ಬಗ್ಗೆ ನಿಮಗೊಂದು ವಿಷಯವನ್ನು ತಿಳಿಸಬೇಕಾಗಿತ್ತು.
ಸಿಎಂ.....ಯಾಕೆ ಏನಾಯ್ತು ?
ಅಧಿಕಾರಿ.......ಸರ್ ಕೆಲವು ದಿನಗಳಿಂದ ಕಿಶೋರಿ ಸಿಂಗ್ ಜಗಮಲ್ ಒಬ್ಬರೇ ಅಲ್ಲ ಅವರ ಜೊತೆಗಾರರು ಸೇಠ್ ಧನಿಕಲಾಲ್...ಬ್ರಿಜೇಶ್ ಮಿಶ್ರಾ....ವಿನೋದ್ ಪಾಠಕ್ ಯಾರೊಬ್ಬರೂ ನಮ್ಮ ಜೊತೆಯಲ್ಲಿ ಸಂರ್ಪಕದಲ್ಲಿಲ್ಲ.
ಗೃಹ ಸಚಿವ........ಸಂಪರ್ಕದಲ್ಲಿಲ್ಲ ಅಂದರೇನರ್ಥ ?
ಅಧಿಕಾರಿ.......ಸರ್ ಅವರ ಫೋನ್ ಸ್ವಿಚಾಫ್ ಆಗಿದೆ ಜೊತೆಗವರು ತಮ್ಮ ಕಛೇರಿಗಳಿಗೂ ಬರ್ತಿಲ್ಲ ಮನೆಯಲ್ಲೂ ಸಿಗ್ತಿಲ್ಲ.
ಸಚಿವ4.......ಅವರ ಮನೆಯವರ ಬಳಿ ವಿಚಾರಿಸಿದ್ದೀರಾ ಅಥವ ಅವರ ಕಛೇರಿಯಲ್ಲಿ ಕೇಳಿದ್ದೀರಾ ? ಯಾವುದಾದರೂ ಕೆಲಸಕ್ಕಾಗಿ ಹೊರ ದೇಶಕ್ಕೇನಾದರೂ ಹೋಗಿರಬಹುದು.
ಅಧಿಕಾರ.......ಎಲ್ಲವನ್ನೂ ಪರಿಶೀಲಿಸಿದ್ದೀವಿ ಸರ್ ಅವರಲ್ಯಾರೂ ರಾಜಸ್ಥಾನದಿಂದ ಹೊರ ಹೋಗಿಲ್ಲ ಅವರಷ್ಟೇ ಅಲ್ಲ ಕುಟುಂಬದ ಸದಸ್ಯರುಗಳೂ ಸಹ ಕಾಣಿಸುತ್ತಿಲ್ಲ.
ಗೃಹ ಸಚಿವ......ವಾಟ್ ಏನ್ ಹೇಳ್ತಿದ್ದೀರಾ ? ನಮ್ಮ ಪ್ಲಾನ್ ಸಕ್ಸಸ್ ಆಗಬೇಕಿದ್ದರೆ ಆ ನಾಲ್ವರು ತುಂಬ ಅವಶ್ಯಕ ಅವರೇ ಕಾಣಿಸುತ್ತಿಲ್ಲ ಅಂತಿದ್ದೀರಲ್ಲ ಏನಿದರ ಅರ್ಥ ?
ಸಿಎಂ......ಅವರ ಹಿಂದೆ ಯಾವಾಗಲೂ ನಮ್ಮ ಗೂಡಚಾರಿಗಳು ಇರಲೇಬೇಕು ಅಂತ ಹೇಳಿರಲಿಲ್ವಾ.
ಅಧಿಕಾರಿ.......ಸರ್ ನಾಲ್ವರ ಹಿಂದೆಯೂ 4—4 ಜನರನ್ನು ಅವರ ಮೇಲೆ ನಿಗಾ ವಹಿಸುತ್ತಿರುವಂತೆ ನೇಮಿಸಿದ್ದೆ ಆದರೆ.......
ಗೃಹ ಸಚಿವ.......ಏನು ಆದರೆ ಮುಂದೇಳು.
ಅಧಿಕಾರಿ.......ಸರ್ ಆ ನಾಲ್ಶರು ಕಾಣೆಯಾದ ದಿನದಿಂದಲೂ ನಮ್ಮ ಜನರೂ ಸಹ ನಾಪತ್ತೆಯಾಗಿದ್ದಾರೆ ಅವರನ್ನೂ ಸಂಪರ್ಕಿಸಲಾಗಿಲ್ಲ.
ಸಿಎಂ.....ಅವರನ್ನು ಯಾರಾದರೂ ಕಿಡ್ನಾಪ್ ಮಾಡಿರುವ ಸಾಧ್ಯತೆ ?
ಗೃಹ ಸಚಿವ.......ಇಲ್ಲ ಸರ್ ಹಾಗಾಗಲಿಕ್ಕೆ ಸಾಧ್ಯವಿಲ್ಲ ರಾಜಸ್ಥಾನದ ನೆಲದಲ್ಲಿ ನಮ್ಮನ್ನು ಏದುರಿಸಿ ನಿಲ್ಲುವ ಗಂಡು ಇದ್ದಿದ್ದು ಒಬ್ಬನೇ ಆದ್ರೆ ಅವನೂ ಈಗ ಬದುಕಿಲ್ಲವಲ್ಲ.
ಮಂತ್ರಿ5.......ಯಾರ ಬಗ್ಗೆ ಹೇಳ್ತಿದೀರ ಸರ್ ?
ಗೃಹ ಸಚಿವ.......ಇನ್ಯಾರ ಬಗ್ಗೆ ಹೇಳಲಿ ಮಹರಾಜ ರಾಣಪ್ರತಾಪ್.
ಸಿಎಂ ಬೆವರು ಒರೆಸಿಕೊಳ್ಳುತ್ತ......ಈ ಸಮಯ ಅವನ ಬಗ್ಗೆ ಯಾಕೆ ನೆನೆಪು ಮಾಡಿಕೊಳ್ತೀರಾ ? ಅವನ ಕಥೆಗೆ ಅಂತ್ಯ ಹಾಡಲು ನಾವೆಲ್ಲ ಎಷ್ಟೊಂದು ಪ್ರಯಾಸ ಪಡಬೇಕಾಗಿ ಬಂದಿತ್ತು.
ಮಂತ್ರಿ6......ಹೌದು ಸರ್ ಆ ಕೆಲಸಕ್ಕೆ ಹಿಮಾಚಲದ ರಾಜ ಮನೆತನ ನಮಗೆ ತುಂಬಾನೇ ಸಹಾಯ ಮಾಡಿದ್ದರು.
ಅಧಿಕಾರಿ.......ಸರ್ ಹಿಮಾಚಲದಲ್ಲಿರುವ ಅರಮನೆಯಿಂದ ಅಲ್ಲಿನ ರಾಜ ಮನೆತನದವರ ಜೊತೆಯಲ್ಲಿ ಅಲ್ಲಿನ ಅಳುಕಾಳುಗಳೂ ಸಹ ಕಣ್ಮರೆಯಾಗಿದ್ದಾರೆ ಯಾರೊಬ್ಬರ ಸುಳಿವೂ ಸಿಗ್ತಿಲ್ಲ.
ಅಧಿಕಾರಿಯ ಮಾತನ್ನು ಕೇಳಿ ಸಿಎಂ—ಗೃಹ ಸಚಿವನ ಸಹಿತ ಅಲ್ಲಿದ್ದ 43ಜನರೂ ಗಾಬರಿ ಶಾಕಿನಿಂದ ಎದ್ದು ನಿಂತು ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಳ್ಳುತ್ತಿದ್ದರು.
ಸಿಎಂ.......ಖಂಡಿತವಾಗಿ ಇದೆಲ್ಲದರ ಹಿಂದೆ ಯಾರದ್ದೋ ಕೈವಾಡ ಇದೆ ಬಹುಶಃ ಸೂರ್ಯವಂಶಿಗಳೇ ಇರಬಹುದಾ ?
ಶಾಸಕ4......ಸರ್ ಈಗೆಲ್ಲಿದ್ದಾರೆ ಸೂರ್ಯವಂಶಿಗಳು ಮಹರಾಜ ಮಹರಾಣಿ ಇಬ್ಬರೂ ಸ್ವರ್ಗಸ್ಥರಾಗಿದ್ದಾರೆ ಉಳಿದಿರುವುದು ಅವರ ಒಬ್ಬಳೇ ಮಗಳು ಅದುವೇ ಒಂದೋ ಎರಡೋ ವರ್ಷದ ಮಗು.
ಶಾಸಕ5......ಆದರೆ ತಲೆತಲಾಂತರಗಳಿಂದಲೂ ಸೂರ್ಯವಂಶಿಯ ಸಂಸ್ಥಾನದ ರಕ್ಷಣೆ ಮಾಡುತ್ತಿರುವ ಯೋಧರಿನ್ನೂ ಇದ್ದಾರಲ್ಲ ಅವರ ವಿಷಯ ಮರೆತು ಬಿಟ್ಟಿರಾ ?
ಗೃಹ ಸಚಿವ....ಹೌದು ಸರ್ ಏನೋ ಸರಿಬರುತ್ತಿಲ್ಲ ಇದೆಲ್ಲದರ ಹಿಂದೆ ಯಾರದ್ದೋ ಕೈವಾಡವಿದೆ ಅಂತ ನನಗೂ ಅನುಮಾನವಾಗ್ತಿದೆ.
ಸಿಎಂ......ನಮ್ಮ ಮೀಟಿಂಗ್ ಇಲ್ಲಿಗೆ ನಿಲ್ಲಿಸೋಣ ಅವರೆಲ್ಲರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಸಿಗುವವರೆಗೂ ನಾವು ಈ ರೀತಿಯಲ್ಲಿ ಗುಪ್ತವಾಗಿ ಬೇಟಿಯಾಗುವುದು ಬೇಡ ನಡೀರಿ ಹೋಗೋಣ.
ಅದೇ ಸಮಯಕ್ಕೆ ಸರಿಯಾಗಿ.......
* *
* *
.....continue