ಭಾಗ 193
ಕಾಮಾಕ್ಷಿಪುರ
ರಾತ್ರಿ 8:30.........
ವಿಕ್ರಂ.....ಏನಮ್ಮ ನೀತು ರಾತ್ರಿ ಒಂಬತ್ತಾಗುತ್ತ ಬಂದಿದೆ ನಿಧಿ ನಿಕಿತಾ ಇಬ್ಬರಿನ್ನೂ ಬಂದಿಲ್ಲವಲ್ಲ ಫೋನ್ ಕೂಡ ನಾಟ್ರೀಚಬಲ್ ಬರ್ತಿದೆ.
ನೀತು......ಅಣ್ಣ ಅವರೆಲ್ಲರೂ 7:00 ಘಂಟೆಗೆ ಹೊರಟರೆಂದು ಈಗ ಸುಭಾಷ್ ಹೇಳಿದ ಇನ್ನೇನು ತಲುಪಬಹುದು.
ಹರೀಶ.....ಲೇ ಇಲ್ಲಿಂದ ಮೂರು ಕಾರನ್ನು ಕಳಿಸಿದೆ ಅದರಲ್ಲಿ ಎಲ್ಲರು ಬರುವುದಕ್ಕೆ ಆಗುತ್ತಾ ?
ಸುಮ.....ಅಶೋಕ..ರೇವಂತ್..ಪ್ರೀತಿ ಮೂವರೂ ಯೂನಿಟ್ಟಿನಲ್ಲೇ ಇದ್ದಾರಲ್ಲ ಅವರ ಹತ್ತಿರವೂ ಎರಡು ಕಾರುಗಳಿವೆ ಸಾಕಾಗುತ್ತೆ.
ಇವರೆಲ್ಲರೂ ಮಾತನಾಡುತ್ತಿದ್ದಂತೆ ಮನೆ ಮುಂದೆ ಕಾರುಗಳು ಬಂದು ನಿಂತಿದ್ದು ಕೆಳಗಿಳಿದು ಒಳಬಂದ ನಿಧಿ—ನಿಕಿತಾ ಇಬ್ಬರನ್ನೂ ನೀತು ಗಟ್ಟಿಯಾಗಿ ತಬ್ಬಿಕೊಂಡಳು.
ರಾಜೀವ್......ಯಾಕಮ್ಮ ಇಷ್ಟು ಲೇಟ್ ಮಾಡಿಕೊಂಡ್ರಿ ಬೆಳಕಿರುವ ಸಮಯದಲ್ಲೇ ಬಂದು ಬಿಡಬಾರದಿತ್ತಾ ?
ನಿಕಿತಾ.......ತಾತ ಪರ್ಚೇಸಿಂಗ್ ಮಾಡುವುದರಲ್ಲೇ ಸ್ವಲ್ಪ ಲೇಟಾಗಿ ಹೋಯಿತು ಅದಕ್ಕೆ ತಡವಾಯ್ತು.
ಅಶೋಕ......ವಿಕ್ರಂ ಸಿಂಗ್—ರಾಣಾ ನೀವೇನೂ ಇಲ್ಲೇ ನಿಂತುಬಿಟ್ರಿ ನಡೀರಿ ಒಳಗೆ ಹೋಗೋಣ.
ರಾಣಾ.......ಸರ್ ನಾವೀಗಲೇ ರಾಜಸ್ಥಾನಕ್ಕೆ ಹಿಂದಿರುಗುತ್ತಿದ್ದೀವಿ ರಾಜಕುಮಾರಿ ಅವರನ್ನು ಮನೆಗೆ ಸುರಕ್ಷಿತವಾಗಿ ತಲುಪಿಸುವುದಕ್ಕೆ ಬಂದೆವು ಅಲ್ಲಿನ ಕೆಲಸಗಳನ್ನೂ ನೋಡಬೇಕಾಗಿದೆ.
ನೀತು......ನಮ್ಮ ಜೊತೆ ಊಟ ಮಾಡಿಕೊಂಡು ಆಮೇಲೆ ನೀವು ಹೋಗಿವಿರಂತೆ ಒಳಗೆ ನಡಿ.
ರಜನಿ......ಏನೇ ಇದು ನೀವಿಬ್ರೂ ಇಡೀ ಬೆಂಗಳೂರನ್ನೇ ಪರ್ಚೇಸ್ ಮಾಡ್ಕೊಂಡು ಬಂದಿರುವಂತಿದೆ.
ರಶ್ಮಿ.......ಅಕ್ಕ ಇದು ಮೋಸ ನೀವಿಬ್ರೂ ಇಷ್ಟೊಂದು ಶಾಪಿಂಗ್ ಮಾಡಿದ್ದೀರ ನಮ್ಮನ್ನು ಮಾತ್ರ ಕರೆದುಕೊಂಡೆ ಹೋಗಲಿಲ್ಲ.
ದೃಷ್ಟಿ.......ಹೂಂ ಅಕ್ಕ ನಾವೇನು ಮಾಡಿದ್ವಿ ನಮ್ಮನ್ನೂ ನಿಮ್ಮ ಜೊತೆ ಕರ್ಕೊಂಡು ಹೊಗ್ಬೇಕಿತ್ತು.
ನಿಕಿತಾ.......ನಿಮ್ಮನ್ನೆಲ್ಲ ಅಲ್ಲಿಗೆ ಕರ್ಕೊಂಡ್ ಹೋಗಿದ್ರೆ ಈಗ ನೀವು ಚಳಿ ಜ್ವರದಿಂದ ನಡುಗ್ತಾ ಮಲಗಿರುತ್ತಿದ್ರಿ.
ನಯನ.......ಯಾಕೆ ?
ನಿಧಿ.......ಇವಳನೋ ಸುಮ್ಮನೆ ತಮಾಷೆ ಮಾಡ್ತಿದ್ದಾಳಷ್ಟೆ ಮುಂದಿನ ಸಲ ನಾವೆಲ್ಲ ಒಟ್ಟಿಗೆ ಹೋಗೋಣ ಸರಿಯಾ ಈಗ ಎಲ್ಲಾ ಶಾಪಿಂಗ್ ಬ್ಯಾಗ್ ಮೇಲಿನ ರೂಮಲ್ಲಿಡಿ ಹೋಗಿ.
ಹರೀಶ........ಆ ರೌಡಿಗೆ ಸುಪಾರಿ ಕೊಟ್ಟಿದ್ದವರ ಬಗ್ಗೆ ತಿಳಿಯಿತಾ ?
ವಿಕ್ರಂ ಸಿಂಗ್........ಗೊತ್ತಾಯ್ತು ಸರ್ ನಮ್ಮ ಮಹರಾಜರ ಇಬ್ಬರು ಪರಿಚಯದ ಉದ್ಯಮಿಗಳೇ ಇಲ್ಲಿನ ಒಬ್ಬ ಎಂ.ಎಲ್.ಎ. ಮೂಲಕ ಆ ರೌಡಿಗೆ ಕಿರಿಯ ರಾಜಕುಮಾರಿಯನ್ನು ಅಪಹರಿಸಲು ಸುಪಾರಿ ಕೊಟ್ಟಿದ್ದು. ನಾಳೆ ಬೆಳಿಗ್ಗೆಗೆಲ್ಲಾ ಅವರನ್ನು ಹಿಡಿಯುತ್ತೀವಿ ಇನ್ನಿಲ್ಯಾವ ರೀತಿಯ ಸಮಸ್ಯೆಗಳೂ ಬರುವುದಿಲ್ಲ ಅದಕ್ಕೆ ವ್ಯವಸ್ಥೆ ಮಾಡಿದ್ದೀವಿ.
ರಾಣಾ......ಮಾತೆ ನಮ್ಮ ಪ್ರಾಣ ಇರುವವರೆಗೂ ಈ ಮನೆಯವರ ಒಂದು ಹನಿ ರಕ್ತವೂ ನಿಮ್ಮ ಮಡಿಲಲ್ಲಿ ಬೀಳದಂತೆ ಕಾಯುತ್ತೀವಿ.
ನೀತು......ನನಗೆ ನಿಮ್ಮೆಲ್ಲರ ಮೇಲೆ ನಂಬಿಕೆಯಿದೆ. ಬೆಂಗಳೂರಿನಲ್ಲಿ ಏನಾಯ್ತು ? ಆ ರೌಡಿ ರಮನಾಥ್......
ನಿಧಿ ಟಿವಿ ಆನ್ ಮಾಡಿ ಚಾನೆಲ್ ಬದಲಾಯಿಸುತ್ತ ಕನ್ನಡ ನ್ಯೂಸ್
ಛಾನೆಲ್ ಹಾಕಿದರೆ ಬೆಂಗಳೂರಿನಲ್ಲಿ ಇವರು ಮಾಡಿ ಬಂದಿರುವಂತ ಮಾರಣ ಹೋಮದ ಕುರಿತಾಗಿ ರಸವತ್ತಾಗಿ ವರ್ಣಿಸಲಾಗುತ್ತಿತ್ತು.
" ಬೆಂಗಳೂರು ಭೂಗತ ಜಗತ್ತಿನ ಅನಭಶಕ್ತ ದೊರೆಯಾಗಿ ಕುಖ್ಯಾತಿ ಗಳಿಸಿದ್ದ ಡಾನ್ ರಮನಾಥ್ ಅವನ ಮೂವರು ಮಕ್ಕಳು ಸೇರಿದಂತೆ ಒಬ್ಬ ಶಾಸಕ ಹಾಗು ಅವನ ಗ್ಯಾಂಗಿನ 68 ಜನ ರೌಡಿಗಳ ಜೊತೆಗೆ ಹತ್ಯೆಯಾಗಿದ್ದಾನೆ. ಇವರೆಲ್ಲರನ್ನು ಸಾಮಾನ್ಯ ರೀತಿಯಲ್ಲೇನು ಹತ್ಯೆ ಮಾಡಿರದೆ ಪ್ರತಿಯೊಬ್ಬರ ದೇಹಗಳನ್ನು ಹತ್ತಾರು ತುಂಡು ತುಂಡಾಗಿ ಕತ್ತರಿಸಿ ಹಾಕಲಾಗಿದೆ. ಸಂಜೆಯಿಂದ ಇಡೀ ಪೋಲಿಸ್ ಇಲಾಖೆಯೇ ಡಾನ್ ರಮನಾಥನ ಅಡ್ಡೆಯಲ್ಲಿ ಬೀಡು ಬಿಟ್ಟಿದ್ದು ತನಿಖೆ ಮಾಡುತ್ತ ಇದ್ದರೂ ಸಹ ಈ ಮಾರಣಹೋಮಕ್ಕೆ ಯಾರು ಕಾರಣಕರ್ತರೆಂಬ ಬಗ್ಗೆ ಸಣ್ಣದೊಂದು ಸುಳಿವೂ ಸಹ ದೊರೆತಿಲ್ಲ. ಕೆಲವು ರಾಜಕೀಯ ನಾಯಕರ ಬೆಂಬಲದೊಂದಿಗೆ ಬೆಂಗಳೂರನ್ನೇ ತನ್ನ ರೌಡಿ ಬಲದಿಂದ ಹೆದರಿಸಿ ಆಳುತ್ತಿದ್ದ ರಮನಾಥನ ಅಂತ್ಯವಾಗಿದೆ. ಇವರೆಲ್ಲರ ಹತ್ಯೆ ಎಷ್ಟು ಭೀಕರವಾಗಿತ್ತೆಂದರೆ ಅವರೆಲ್ಲರ ತಲೆಗಳನ್ನು ದೇಹದಿಂದಲೇ ಕತ್ತರಿಸಲ್ಪಟ್ಟಿರುವುದಲ್ಲದೆ ಯಾರ ದೇಹದ ಭಾಗ ಯಾವುದೆಂಬುದು ಸಹ ಗುರುತಿಸಲು ಸಾಧ್ಯವಾಗದಷ್ಟು ತುಂಡುಗಳನ್ನಾಗಿ ಕತ್ತರಿಸಿದ್ದಾರೆ
ಪೋಲಿಸರು ಎಲ್ಲರ ತಲೆಗಳನ್ನು ಬೇರ್ಪಡಿಸಿದ್ದು ಯಾರ ದೇಹದ ಭಾಗ ಯಾವುದೆಂದು ಹುಡುಕಾಡುವಂತಾಗಿದೆ. ಇಡೀ ಬೆಂಗಳೂರಿನ ಇತಿಹಾಸದಲ್ಲೇ ಇಂತಹ ಭೀಕರವಾದ ನರಮೇಧ ಹಿಂದೆಂದೂ ಕೂಡ ಕಂಡು ಕೇಳಿರದ ಘಟನೆಯಾಗಿದೆ. ಈ ಸಾಮೂಹಿಕ ನರಮೇಧಗಳ ತನಿಖೆಗಾಗಿ ಸರ್ಕಾರ ಐದು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು ಅತಿ ಶೀಘ್ರದಲ್ಲಿಯೇ ಇದರ ಹಿಂದಿರುವವರನ್ನು ಬಂಧಿಸಿ ಅವರಿಗೆ ತಕ್ಕ ಶಿಕ್ಷೆ ಕೊಡಿಸಲಿಗುವುದೆಂಬ ಹೇಳಿಕೆಯನ್ನು ರಾಜ್ಯ ಸರ್ಕಾರದ ಗೃಹ ಇಲಾಖೆ ಬಿಡುಗಡೆ ಮಾಡಿದೆ. ಪೋಲಿಸ್ ಮೂಲಗಳ ಪ್ರಕಾರ ಅವರಿಗೆ ಯಾವುದೇ ರೀತಿಯ ಸಣ್ಣದೊಂದು ಸುಳಿವೂ ಸಹ ಸಿಗದೆ ಈ ಪ್ರಕರಣವನ್ನು ಭೇಧಿಸುವುದು ನೂರು ಕೆಜಿ ರಾಗಿ ಕಾಳಿನ ನಡುವೆ ಒಂದು ಸಾಸಿವೆ ಕಾಳನ್ನು ಹುಡುಕಿದಂತೆ ಎಂದು ತಮ್ಮ ಹೆಸರನ್ನೆಳಲು ಇಚ್ಚಿಸದ ಹಿರಿಯ ಪೋಲಿಸ್ ಅಧಿಕಾರಿಗಳು ನಮಗೆ ತಿಳಿಸಿದ್ದಾರೆ. ಏನೇ ಆಗಿರಲಿ ಬೆಂಗಳೂರಿನ ಜನತೆ ಈ ದಿನ ಡಾನ್ ರಮನಾಥನ ದುರಾಚಾರಗಳಿಂದ ಮುಕ್ತರಾಗಿರುವುದಕ್ಕೆ ತುಂಬ ಸಂತೋಷಪಡುತ್ತ ಈ ನರಮೇಧ ನಡೆಸಿದವರು ಪೋಲಿಸರಿಗೆ ಸಿಕ್ಕಿ ಬೀಳಬಾರದೆಂದು ಜೊತೆಗೆ ಅವರೆಲ್ಲೇ ಇರಲಿ ನೂರು ವರ್ಷ ಸುಖವಿಗಿರಲೆಂದು ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. ""
ನೀತು.....ನಿಕ್ಕಿ ಪುಟ್ಟ ಇದನ್ನೆಲ್ಲಾ ನೀನೆಗೆ ನೋಡಿದೆ ಭಯ ಆಗ್ಲಿಲ್ವಾ.
ನಿಧಿ ಬೇಡ ಬೇಡ ಎಂದು ಸನ್ನೆ ಮಾಡುತ್ತಿದ್ದರೆ ನಿಕಿತಾ ಅವಳ ಕಡೆ ನೋಡುತ್ತಿಲ್ಲದ ಕಾರಣ ಅದು ಗೊತ್ತಾಗದೆ.........ಆಂಟಿ ನಾವಲ್ಲಿಗೆ ಹೋದಾಗ ಅಕ್ಕ ಮೊದಲಿಗೆ ಆ ರೌಡಿಯ ಹಿರಿ ಮಗನ ತಲೆ ಕತ್ತರಿಸಿ ಬಿಟ್ಟಿದ್ದನ್ನು ಮಾತ್ರ ನೋಡಿದ್ದು. ಆಮೇಲೆ ಅಕ್ಕನೇ ಕಣ್ಮುಚ್ಚಿ ಆಕಡೆ ತಿರುಗಿ ನಿಲ್ಲುವಂತೆ ಹೇಳಿದ್ರು. ಮೊದಲಿಗೆ ಸ್ವಲ್ಪ ಭಯವಾಯ್ತು ಆದ್ರೆ ಅಕ್ಕ ಜೊತೆಯಲ್ಲಿದ್ರಲ್ಲ ಅದಕ್ಕೆ ಧೈರ್ಯವಾಗಿದ್ದೆ. ಅವನ ಮೂವರು ಮಕ್ಕಳು ಸತ್ತ ನಂತರ ನಾವಲ್ಲಿರದೆ ಹೊರಟು ಬಂದುಬಿಟ್ವಿ ಆಂಟಿ.
ಮನೆಯವರೆಲ್ಲರೂ ನಿಧಿಯನ್ನೇ ನೋಡುತ್ತಿದ್ದರೆ ಹಿರಿಮಗಳೆದುರು ನೀತು ಕೈಕಟ್ಟಿಕೊಂಡು ನಿಂತಾಗ ನಿಧಿ.....ಅಮ್ಮ ನಿಮ್ಜೊತೆ ಅಪ್ಪನ ಕಣ್ಣಲ್ಲಿ ಕಣ್ಣೀರು ಬರುತ್ತಿದ್ದುದನ್ನು ನೋಡಿದಾಗಿನಿಂದ ನಾನು ನನ್ನ ಕೋಪವನ್ನು ಸಹಿಸಿಕೊಂಡಿದ್ದೆ. ಈ ಮನೆಯ ಮುದ್ದಿನ ಮಗಳ ಕಡೆ ಕೆಟ್ಟ ದೃಷ್ಟಿ ಹಾಕಿದ್ದ ಪಾಪಿಗೆ ಬೇರೆಯವರ ಮನೆ ಮಕ್ಕಳ ಮೇಲೆ ಕಣ್ಣಾಕಿದರೆ ಏನಾಗುತ್ತದೆಂದು ತೋರಿಸಲು ಅವನ ಮೂರು ಜನ ಮಕ್ಕಳ ತಲೆ ಮಾತ್ರ ನಾನು ಕತ್ತರಿಸಿದ್ದು.
ನೀತು ಮುಗುಳ್ನಗುತ್ತ ಮಗಳ ತಲೆ ಸವರಿ ಹಣೆಗೆ ಮುತ್ತಿಡುತ್ತ....... ಆಗಿದ್ದಾಯ್ತು ಬಿಡು ಅದನ್ನೆಲ್ಲಾ ನೆನೆದು ಯಾವ ಪ್ರಯೋಜವಿಲ್ಲ..... ಎಂದಾಗ ನಿಧಿ ಅಮ್ಮನನ್ನು ಬಿಗಿದಪ್ಪಿಕೊಂಡಳು.
..........continue