ಇನ್ನು ಎರಡು ದಿನ ಬಿಟ್ಟು ಪೋಸ್ಟ್ ಮಾಡುತ್ತಾರೆ ಆದ್ದರಿಂದ ಅಭಿಮಾನಿಗಳು ಸಹಕರಿಸಬೇಕಾಗಿ ವಿನಂತಿಇವತ್ತು ಇಲ್ವಾ....? ಅಪ್ಡೇಟ್... ಬೇಗ ಸ್ಟೋರಿ ಅಪ್ಲೋಡ್ ಮಾಡಿ...
ಇನ್ನು ಎರಡು ದಿನ ಬಿಟ್ಟು ಪೋಸ್ಟ್ ಮಾಡುತ್ತಾರೆ ಆದ್ದರಿಂದ ಅಭಿಮಾನಿಗಳು ಸಹಕರಿಸಬೇಕಾಗಿ ವಿನಂತಿಇವತ್ತು ಇಲ್ವಾ....? ಅಪ್ಡೇಟ್... ಬೇಗ ಸ್ಟೋರಿ ಅಪ್ಲೋಡ್ ಮಾಡಿ...
ಸೂಪರ್. ಮುಂದುವರಿಸಿ.ಭಾಗ 155
ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದಾಗ ಈ ಮೊದಲೇ ಅಶೋಕ ಬುಕ್ ಮಾಡಿದ್ದ ಮಿನಿ ಇವರಿಗಾಗಿ ಹೊರಗೆ ಕಾಯುತ್ತಿತ್ತು. ಎಲ್ಲರೂ ಅದನ್ನೇರಿ ಕುಳಿತರೆ ನಮಿತ ಅಕ್ಕನ ಪಕ್ಕ ಕುಳಿತ ನಿಶಾ ಕಿಟಕಿಯಾಚೆ ನೋಡಿ ಕಿರುಚಾಡುತ್ತ ಕೀಟಲೆ ಮಾಡುತ್ತ ಆಗಾಗ ಮಿಕ್ಕವರ ಹತ್ತಿರ ಹೋಗಿ ಸೇರಿಕೊಳ್ಳುತ್ತಿದ್ದಳು. ಹರಿದ್ವಾರ ತಲುಪಿ ಕಾಯ್ದಿರಿಸಿರುವ ಲಕ್ಷುರಿ ಹೋಟೆಲ್ಲಿನ ರೂಂ ಸೇರುವಷ್ಟರಲ್ಲೇ ಸಂಜೆಯಾಗಿತ್ತು. ರೂಂ ಫೋನ್ ಮೊಳಗಿ ರಿಸೆಪ್ಷನ್ನಿನಿಂದ ಹರೀಶನಿಗೆ ಕರೆ ಬಂದು ಆತನನ್ನು ಯಾರೋ ಕಾಯುತ್ತಿರುವ ಬಗ್ಗೆ ತಿಳಿಸಲಾಯಿತು
ಹರೀಶ.....ಇಲ್ಯಾರು ನನ್ನನ್ನು ನೋಡಲು ಬಂದಿರೋದು ನಮಗಿಲ್ಲಿ ಯಾರ ಪರಿಚಯವೂ ಇಲ್ಲವಲ್ಲ.
ನೀತು......ಹೋಗಿ ನೋಡಿದರೆ ತಾನೇ ತಿಳಿಯುತ್ತೆ ನಾನು ಚಿನ್ನಿ ಪ್ರೆಶ್ ಆಗುತ್ತೀವಿ ನೀವು ಹೋಗಿ ಬನ್ನಿ.
ಹರೀಶ ಕೆಳಗೆ ಬಂದಾಗ ಕಾವಿ ವಸ್ತ್ರಧಾರಿಯಾದ ವ್ಯಕ್ತಿಯೊಬ್ಬರು ತಮ್ಮ ಪರಿಚಯ ಮಾಡಿಕೊಂಡು xxxx ಆಶ್ರಮದಲ್ಲಿ ತಮಗಾಗಿ ಗೋವಿಂಚಾರ್ಯ ಗುರುಗಳು ಏದುರುನೋಡುತ್ತಿದ್ದಾರೆ. ನೀವು ಪತ್ನಿ
ಸಮೇತರಾಗಿ ಬರಬೇಕೆಂದು ನನ್ನ ಬಳಿ ಹೇಳಿ ಕಳುಹಿಸಿದ್ದಾರೆ ನೀವು ಈಗಲೇ ಬರುವುದಾದರೆ ನಾನಿಲ್ಲೇ ಕಾಯುತ್ತಿರುತ್ತೇನೆ. ಹರೀಶ ಹತ್ತು ನಿಮಿಷದಲ್ಲಿ ಮಡದಿಯೊಂದಿಗೆ ಬರುವುದಾಗಿ ಹೇಳಿ ನೀತುಳಿಗೆ ವಿಷಯ ತಿಳಿಸಿ ತಾನು ರೆಡಿಯಾಗತೊಡಗಿದನು. ನೀತು ಮಗಳನ್ನು ಎತ್ತಿಕೊಂಡು ರಜನಿಯ ಬಳಿ ಹೋಗಿ......
ನೀತು......ರಜನಿ ಗುರುಗಳು ನನ್ನ ಹರೀಶರನ್ನು xxxx ಆಶ್ರಮದಲ್ಲಿ ಕಾದಿರುವಂತೆ ಅದಕ್ಕೆ ನಾವಲ್ಲಿಗೆ ಹೋಗಬೇಕಿದೆ ನೀನೇ ಇವಳನ್ನು ಸಂಭಾಳಿಸಿಕೋ.
ಅಶೋಕ.....ಬಾ ಚಿನ್ನಿ ಅಮ್ಮಂಗೆ ಟಾಟಾ ಮಾಡು ನಾನು ನೀನು ಅಣ್ಣ ಅಕ್ಕ ಎಲ್ಲರೂ ಆಚೆ ಹೋಗಿ ಸುತ್ತಾಡಿಕೊಂಡು ಐಸ್ ತಿಂದು ಬರೋಣ ಆಯ್ತಾ.
ನಿಶಾಳಿಗಿನ್ನೇನು ಬೇಕಿತ್ತು ತಟ್ಟನೆ ಅಶೋಕನ ಹೆಗಲಿಗೇರಿ ಅಮ್ಮನತ್ತ ಕೈಬೀಸಿ ಟಾಟಾ ಮಾಡಿ ಅವನೊಂದಿಗೆ ತೊದಲು ನುಡಿಯಲ್ಲಿ ಏನೊ ಹೇಳತೊಡಗಿದಳು.
* *
* *
ನೀತು ಹಾಗು ಹರೀಶ xxxx ಆಶ್ರಮವನ್ನು ತಲುಪಿದಾಗ ಅವರು ಬರುವುದನ್ನೇ ಎದುರು ನೋಡುತ್ತಿದ್ದ ವಿಕ್ರಂ ಸಿಂಗ್ ಬಾಗಿಲಿನಲ್ಲೇ ಅವರಿಗೆ ಬೇಟಿಯಾದನು.
ಹರೀಶ......ವಿಕ್ರಂ ಸಿಂಗ್ ನೀವು ಯಾವಾಗ ಬಂದಿರಿ ?
ವಿಕ್ರಂ ಸಿಂಗ್......ನಾನು ಬೆಳಿಗ್ಗೆಯೇ ಬಂದೆ ಆದರೆ ಗುರುಗಳನ್ನಿನ್ನೂ ಬೇಟಿಮಾಡುವ ಅವಕಾಶ ಸಿಕ್ಕಿಲ್ಲ. ನೀವು ಬಂದಾಗ ಜೊತೆಯಲ್ಲೇ ಬರುವಂತೆ ನನಗೆ ಅವರ ಶಿಷ್ಯರೊಬ್ಬರಿಂದ ಅಪ್ಪಣೆ ಮಾಡಿದ್ದಾರೆ.
ಹರೀಶ....ಗುರುಗಳು ಯಾವ ಕೋಣೆಯಲ್ಲಿದ್ದಾರೆ ?
ಅಷ್ಟರಲ್ಲೇ ಶಿಷ್ಯನೊಬ್ಬ ಬಂದು ಮೂವರಿಗೂ ಹಿಂಬಾಲಿಸುವಂತೇಳಿ ಗೋವಿಂದಾಚಾರ್ಯರ ಬಳಿ ಕರೆದೊಯ್ದನು. ಆಚಾರ್ಯರ ಕೋಣೆ ತಲುಪುವ ಮುನ್ನ ಎದುರಾದ ರೂಮಿನ ಕಿಟಕಿಯಿಂದ ತರುಣಿಯು ನೀತುವಿನ ಕಡೆಯೇ ನೋಡುತ್ತಿದ್ದು ನೀತು ದೃಷ್ಟಿಯೂ ಆಕೆ ಮೇಲೆ ಬಿದ್ದಾಗ ನೀತುವಿನ ತುಟಿಗಳಲ್ಲಿ ಮುಗುಳ್ನಗೆ ಮೂಡಿತು. ಮೂವರೂ ಗೋವಿಂದಾಚಾರ್ಯರಿಗೆ ನಮಸ್ಕರಿಸಿ ಅವರ ಹಿಂದೆ ನಿಂತಿದ್ದ ಗುರು ಶಿವರಾಮಚಂದ್ರ ಮತ್ತು ದೇವಾನಂದ ಸ್ವಾಮೀಜಿಗಳಿಗೂ ನಮಿಸಿ ಎದುರಿಗೆ ಕುಳಿತರು.
ಗೋವಿಂದಾಚಾರ್ಯರು.....ನಮ್ಮ ಯುವರಾಣಿ ಹೇಗಿದ್ದಾಳೆ ಹರೀಶ
ಹರೀಶ......ಅವಳಿಗೇನು ಗುರುಗಳೇ ಆರಾಮವಾಗಿ ಆಡಿಕೊಂಡು ಸಂತೋಷದಿಂದ ಕಾಲ ಕಳೆಯುತ್ತಿದ್ದಾಳೆ. ಈಗಲೂ ಪ್ರತಾಪ್ ಮತ್ತು ಅಶೋಕನ ಜೊತೆ ಸುತ್ತಾಡಿಕೊಂಡು ಬರಲು ಹೋಗಿದ್ದಾಳೆ.
ಗೋವಿಂದಾಚಾರ್ಯರು......ಸಂತೋಷ. ನಾನು ಈ ದಿವನೇ ನೀವು ಹರಿದ್ವಾರಕ್ಕೆ ಬರಬೇಕೆಂದು ಹೇಳಿದ್ದೇಕೆ ಅಂತ ಗೊತ್ತಿದೆಯಾ ?
ನೀತು....ನಾಳೆ ಮೇ 10ನೇ ತಾರೀಖು ರಾಣಾಪ್ರತಾಪ್ ಸುಧಾಮಣಿ ಇಬ್ಬರೂ ಜನಿಸಿದ್ದು ನಾಳೆಯ ದಿನ ಜೊತೆಗೆ ಅವರ ವಿವಾಹದ ದಿನ ಕೂಡ ಮೇ 10. ಆದರೆ ನೀವು ನಮ್ಮೆಲ್ಲರನ್ನೂ ಹರಿದ್ವಾರಕ್ಕೆ ಬನ್ನಿರಿ ಎಂದು ಏಕೆ ಹೇಳಿದಿರೆಂದು ಮಾತ್ರ ನನಗೆ ತಿಳಿದಿಲ್ಲ ಗುರುಗಳೇ.
ಗೋವಿಂದಾಚಾರ್ಯರು ಅಚ್ಚರಿಯಿಂದ........ಅವರಿಬ್ಬರ ಹುಟ್ಟಿದ ದಿನದ ಬಗ್ಗೆ ನಿನಗೆ ಹೇಗೆ ತಿಳಿಯಿತು ?
ನೀತು.....ಸುಧಾಮಣಿಯವರ ಡೈರಿಯ ಮೂಲಕ ತಿಳಿಯಿತು. ವಿಕ್ರಂ ಸಿಂಗ್ ನಿಶಾಳನ್ನು ಆಶ್ರಮದ ಬಳಿ ಬಿಟ್ಟು ತೆರಳಿದಾಗ ಅವಳ ಜೊತೆ ರಾಣಾಪ್ರತಾಪರ ಒಂದು ಪುಟ್ಟ ಮರದ ಪೆಟ್ಟಿಗೆಯೂ ಅವಳ ಬ್ಯಾಗ್ ಒಳಗಿತ್ತು. ಅದರಲ್ಲಿದ್ದ ಕಾಗದ ಮತ್ತು ಅರಮನೆಯಲ್ಲಿ ಸುಧಾಮಣಿ ಬರೆದಿದ್ದ ಡೈರಿಯನ್ನು ನಾನು ಎರಡು ದಿನದ ಹಿಂದಷ್ಟೆ ಓದಿದೆ. ನನಗೆ ಅದರಿಂದ ಬಹಳಷ್ಟು ವಿಷಯಗಳೂ ಗೊತ್ತಾಯಿತು. ಸುಧಾಮಣಿ ಜನ್ಮ ನೀಡಿದ ಮಗಳನ್ನು ನಾನು ದತ್ತು ಸ್ವೀಕರಿಸಿ ನನ್ನ ಸ್ವಂತ ಮಗಳ ರೀತಿ ಲಾಲನೆ ಪೋಷಣೆ ಮಾಡುತ್ತಿರುವಾಗ ಮಹಾರಾಜ ಮತ್ತು ಮಹಾರಾಣಿಯರು ಮಗಳಾಗಿ ದತ್ತು ಸ್ವೀಕರಿಸಿದ ಹುಡುಗಿಯೂ ಸಹ ನನಗೆ ಹಿರಿಯ ಮಗಳಲ್ಲವೇ ಗುರುಗಳೇ ? ನನ್ನ ಹಿರಿಮಗಳಾದ ನಿಧಿ ಎಲ್ಲಿ ಕಾಣಿಸುತ್ತಿಲ್ಲವಲ್ಲ ಗುರುಗಳೆ ?
ನೀತುವಿನ ಮಾತುಗಳನ್ನು ಕೇಳಿ ಹರೀಶ ಅಚ್ಚರಿಯಿಂದ ಹೆಂಡತಿಯ ಕಡೆ ನೋಡುತ್ತಿದ್ದರೆ ಮೂವರು ಗುರುಗಳು ಕೂಡ ಅವಳನ್ನು ನೋಡುತ್ತಿದ್ದರು. ವಿಕ್ರಂ ಸಿಂಗ್ ತುಟಿಗಳಲ್ಲಿ ಮಾತ್ರ ನಗು ಮೂಡಿತ್ತು.
ಗೋವಿಂದಾಚಾರ್ಯರು......ನಿಧಿ ಬಗ್ಗೆಯೂ ನಿನಗೆ ತಿಳಿದಿದೆ ತುಂಬ ಸಂತೋಷ ಮಗಳೇ. ಹೌದು ರಾಣಾಪ್ರತಾಪ್ ಮತ್ತು ಸುಧಾಮಣಿ ಮದುವೆಯಾದ ಮೊದಲನೇ ವರ್ಷವೇ ಈ ಮಗುವನ್ನು ಮಗಳಾಗಿ ದತ್ತು ಸ್ವೀಕಾರ ಮಾಡಿದ್ದರು. ಆದರೆ ರಾಜಸ್ಥಾನದ ವಾತಾವರಣದಲ್ಲಿ
ಮಗುವಿಗೆ ಹೊಂದಿಕೊಳ್ಳುವುದು ಕಷ್ಟಕರವಾಗಿ ಮೂರು ಸಲ ಆಕೆಗೆ ಮರಣದ ಸನಿಹಕ್ಕೆ ಕರೆದೊಯ್ಯುವಷ್ಟು ಆರೋಗ್ಯ ಹದಗೆಟ್ಟಿದ್ದರಿಂದ ನಾನೇ ಅವಳನ್ನು ನಮ್ಮ ಆಶ್ರಮದ ತಂಪು ವಾತಾವರಣದಲ್ಲಿಯೇ ಬೆಳೆಸಬೇಕೆಂದು ಸಲಹೆ ನೀಡಿದ್ದೆ. ಸುಧಾಮಣಿಯ ಮಾತೃ ಹೃದಯ ತನ್ನ ಮಗಳನ್ನು ತನ್ನಿಂದ ದೂರ ಕಳಿಸಲು ಒಪ್ಪಿರಲಿಲ್ಲ ಆದರೆ ಮಗಳ ಆರೋಗ್ಯದ ದೃಷ್ಟಿಯಿಂದ ಬೇರೆ ದಾರಿಯೂ ಅವಳಿಗಿರಲಿಲ್ಲ. ಪ್ರತೀ ವರ್ಷ ಮೂರ್ನಾಲ್ಕು ತಿಂಗಳು ಸುಧಾಮಣಿ ಸಹ ನಮ್ಮ ಆಶ್ರಮದಲ್ಲಿ ಉಳಿದುಕೊಂಡು ಮಗಳಿಗೆ ಪ್ರೀತಿಯ ಧಾರೆಯೆರೆಯುತ್ತಿದ್ದಳು. ಸುಧಾಮಣಿ ಮತ್ತು ರಾಣಾಪ್ರತಾಪ್ ಮರಣ ಹೊಂದಿದ್ದರೂ ಅವರ ಅಸ್ಥಿಗಳನ್ನಿನ್ನೂ ವಿಸರ್ಜನೆ ಮಾಡಲಾಗಿಲ್ಲ. ನಾಳೆ ಅವರ ಹುಟ್ಟಿದ ಮತ್ತು ಸತಿಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನ ಅದಕ್ಕೆ ಅವರಿಬ್ಬರ ಅಸ್ಥಿಗಳನ್ನು ನಾಳೆ ವಿಧಿವತ್ತಾಗಿ ನಿಧಿ ಮತ್ತು ನಿಶಾಳಿಂದ ಗಂಗಾ ಮಾತೆಯಲ್ಲಿ ವಿಲೀನ ಮಾಡಿಸಲು ನಾನು ನಿಮ್ಮೆಲ್ಲರನ್ನೂ ಇಲ್ಲಿಗೆ ಬರುವಂತೆ ಹೇಳಿದ್ದು.
ನೀತು......ಅವರಿಬ್ಬರ ಆತ್ಮಕ್ಕೆ ಶಾಂತಿ ದೊರೆಯುವ ಸತ್ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ ಗುರುಗಳೇ ಆದರೆ ನನ್ನ ಹಿರಿಮಗಳು ನಿಧಿ ಎಲ್ಲೆಂದು ನೀವು ಹೇಳಲಿಲ್ಲ.
ನೀತುವಿನ ಮಾತು ಮುಗಿಯುತ್ತಿದ್ದಂತೆ ಅವರಿದ್ದ ಕೋಣೆ ಬಾಗಿಲಿನ ಹತ್ತಿರ ಬಂದು ನಿಂತ 19ರ ತರುಣಿಯ ಕಂಗಳಲ್ಲಿ ಅಶ್ರುಧಾರೆಯು ಹರಿಯುತ್ತಿತ್ತು. ನೀತು ಹಿಂದಿರುಗಿ ನೋಡಿ ಮೇಲೆದ್ದು ತರುಣಿ ಹತ್ತಿರ ತೆರಳಿ ತಲೆ ಸವರಿದಾಗ ಅಷ್ಟೂ ಹೊತ್ತಿನವರೆಗೂ ತಡೆದುಕೊಂಡಿದ್ದ ದುಃಖವನ್ನು ಹೊರಹಾಕಲು ನೀತುಳನ್ನು ಬಿಗಿದಪ್ಪಿಕೊಂಡ ತರುಣಿ ಅಳಲಾರಂಭಿಸಿದಳು. ನೀತು ತರುಣಿಯ ತಲೆ ನೇವರಿಸುತ್ತ ಅವಳಿಗೆ ಸಮಾಧಾನ ಮಾಡಲು ಪ್ರಯತ್ನ ಮಾಡುತ್ತಾ ಅವಳೊಟ್ಟಿಗೆ ತಾನೂ ಕಣ್ಣೀರು ಸುರಿಸುತ್ತಿದ್ದಳು.
ನೀತು......ಸಾಕು ಕಣಮ್ಮ ಅಳಬೇಡ ನಿಧಿ ಯಾಕಿಷ್ಟು ದುಃಖ ?
ನಿಧಿ ಕಣ್ಣೀರು ಒರೆಸಿಕೊಂಡು......ನಾನು ನಿಮ್ಮನ್ನು ಅಮ್ಮನೆಂದು ಕರೆಯಬಹುದಾ ?
ನೀತು......ನಾನು ನಿನ್ನನ್ನು ಹೆತ್ತಿರದೆ ಇರಬಹುದು ಅಥವ ನಿನ್ನನ್ನು ಸಾಕಿ ಸಲುಹದೆ ಇರಬಹುದು ಆದರೂ ನೀನು ನನ್ನ ಹಿರಿ ಮಗಳೇ ನಿಧಿ ಅದರಲ್ಲಿ ಯಾವ ಸಂಶಯವಿಲ್ಲ. ಎರಡು ದಿನಗಳಿಗಿಂತಲೂ ಮುಂಚೆ ನನಗೆ ನಿನ್ನ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ ಜೊತೆಗೆ ಗುರುಗಳೂ ನಿನ್ನ ಬಗ್ಗೆ ಹೇಳಿರಲಿಲ್ಲ. ಆದರೆ ಅಣ್ಣ ರಾಣಾಪ್ರತಾಪರ ಪತ್ರ ಓದಿದ ನಂತರ ಸುಧಾಮಣಿಯವರ ಡೈರಿಯನ್ನೂ ನಾನು ಓದಿ ನಿನ್ನ ಬಗ್ಗೆ ತಿಳಿದುಕೊಂಡೆ. ಮೂರು ದಿನಗಳಿಂದಲೂ ನಿನ್ನ ನೋಡಿ ಮಾತನಾಡಲು ನಾನೆಷ್ಟು ಹಾತೊರೆಯುತ್ತಿದ್ದೆ ಗೊತ್ತ ನನ್ನನ್ನು ಅಮ್ಮ ಎಂದು ಕರೆಯಲು ನೀನು ಸಂಕೋಚಪಡುವ ಅಗತ್ಯವಿಲ್ಲ.
ನಿಧಿ....ಸುಧಾಮಣಿ ಅಮ್ಮ ಮರಣ ಹೊಂದಿದ ನಂತರ ಅಪ್ಪ ಒಂದೇ ಒಂದು ಬಾರಿ ಆಶ್ರಮಕ್ಕೆ ಬಂದು ನನ್ನನ್ನು ಬೇಟಿಯಾಗಲು ಬಂದಿದ್ದು ಮುಂದಿನ ತಿಂಗಳು ನನ್ನನ್ನೂ ಅರಮನೆಗೆ ಕರೆದೊಯ್ಯುವುದಾಗಿ ಹೇಳಿದ್ದರು. ಆಗಲೇ ನನಗೆ ಪುಟ್ಟ ತಂಗಿ ಜನಿಸಿರುವ ಬಗ್ಗೆ ತಿಳಿಸಿದ್ರು ಆದರೆ ಇಲ್ಲಿರವರೆಗೂ ನಾನವಳನ್ನು ನೋಡಿಯೇ ಇಲ್ಲ. ತಿಂಗಳಿನ ನಂತರ ನಾನು ಆಶ್ರಮದಿಂದ ಶಾಶ್ವತವಾಗಿ ಮನೆಗೆ ಹಿಂದಿರುಗುವ ಸಮಯ ನಿಗಿಧಿಯಾಗಿತ್ತು ಆದರೆ ಅಪ್ಪನೂ ನನ್ನನ್ನು ಒಂಟಿಯಾಗಿಸಿ ಮರಳಿ ಬಾರದೂರಿಗೆ ಹೋಗಿಬಿಟ್ಟರು. ನನ್ನ ತಂಗಿಗೆ ನಿಮ್ಮ ಮಮತೆ ಪ್ರೀಥಿಯ ಆಸರೆ ಸಿಕ್ಕಿತು ಆದರೆ ನನಗೆ ಅಮ್ಮ ?
ನೀತು.....ಹಿಂದೆ ನಡೆದಿದ್ದನ್ನು ಚಿಂತಿಸಿ ಯಾವುದೇ ಪ್ರಯೋಜನವೂ ಇಲ್ಲ ಮಗಳೇ ಮುಂದೇನು ಮಾಡುವುದೆಂದೇ ನಾವು ಯೋಚಿಸಿ ಆ ದಾರಿಯಲ್ಲಿ ನಡೆಯಬೇಕಷ್ಟೆ. ಈಗ ನಿನ್ನ ಜೊತೆ ನಿನ್ನಮ್ಮ ನಾನಿರುವೆ ನಿನಗ್ಯಾರೂ ಇಲ್ಲ ಅಥವ ತಂಗಿಯೊಬ್ಬಳೇ ನಿನಗಿರುವುದು ಎಂದು ಯೋಚಿಸಬೇಡ ನಾವೆಲ್ಲರೂ ನಿನ್ನೊಡನೇ ಇದ್ದೀವಿ. ಎರಡು ವರ್ಷ ಹಿಂದಿನವರೆಗೂ ನಿನಗೆ ಸುಧಾ ಅಮ್ಮನ ಪ್ರೀತಿ ವಾತ್ಸಲ್ಯ ವರ್ಷದಲ್ಲಿ ಮೂರ್ನಾಲ್ಕು ತಿಂಗಳಾದರೂ ಸರಿ ದೊರಕುತ್ತಿತ್ತು ಅಲ್ಲವ. ಆದರೆ ನಿನ್ನ ಪುಟ್ಟ ತಂಗಿಯ ಬಗ್ಗೆ ಯೋಚಿಸಿ ನೋಡು ತಾನು ಹುಟ್ಟಿದ ದಿನ ಅಮ್ಮನನ್ನು ಕಳೆದುಕೊಂಡು ಕನಿಷ್ಠ ಒಮ್ಮೆಯಾದರೂ ತಾಯಿಯ ಮಡಿಲಿನಲ್ಲಿ ಮಲಗುವ ಸೌಭಾಗ್ಯವೂ ಅವಳಿಗೆ ಸಿಗಲಿಲ್ಲ . ಅಪ್ಪ ಎಂದರೆ ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳುವ ಮುಂಚೆಯೇ ಅವರನ್ನೂ ಕಳೆದುಕೊಂಡು ಕೆಲವು ತಿಂಗಳು ಅನಾಥಾಶ್ರಮದಲ್ಲಿ ಅನಾಥೆಯಂತಿದ್ದಳು. ನಾನು ಅವಳನ್ನು ಮಗಳಾಗಿ ನಾಮಕಾವಸ್ಥೆಗೆ ಮಾತ್ರ ಸ್ವೀಕರಿಸಿಲ್ಲ ಅವಳು ನನ್ನ ಜೀವನದ ಒಂದು ಭಾಗವು ಅಲ್ಲ ನನ್ನ ಇಡೀ ಜೀವನವೇ ನನ್ನ ಮುದ್ದಿನ ಮಗಳಾಗಿದ್ದಾಳೆ. ಅವಳು ನನ್ನ ಮಡಿಲಿಗೆ ಬಂದಾಗಲೇ ನನ್ನಲ್ಲಿನ ಮಾತೃತ್ವ ಪರಿಪೂರ್ಣವಾಗಿ ನನ್ನಲ್ಲೂ ಹೊಸ ಚಿಲುಮೆಯೊಡೆಯಿತು. ನಿನ್ನ ಬಗ್ಗೆ ತಿಳಿದು ದೇವರು ನನಗೆ ಹಿರಿ ಮಗಳನ್ನೂ ನೀಡಿದ್ದಾನೆಂದು ತುಂಬ ಸಂತೋಷಪಟ್ಟೆ. ನಿನ್ನ ನೊಡಲು ನಿನ್ನನ್ನು ತಬ್ಬಿಕೊಂಡು ಮುದ್ದಾಡಲು ಮೂರು ದಿನ ನಾನೆಷ್ಟು ವ್ಯಾಕುಳಲಾಗಿದ್ದೆ ಅಂತ ನಿನಗೇಗೆ ಹೇಳಲಿ.
ನಿಧಿ......ಅಮ್ಮ ನಿಮ್ಮ ಬಗ್ಗೆ ಗುರುಗಳು ನನಗೆ ಸಾಕಷ್ಟು ಹೇಳಿದ್ದಾರೆ ನಿಮ್ಮ ಕುಟುಂಬದ ಎಲ್ಲರ ಪರಿಚಯ ಅವರ ಫೋಟೋಗಳನ್ನೂ ಸಹ ಗುರುಗಳು ನನಗೆ ತೋರಿಸಿದ್ದಾರೆ ಆದರೆ ನನ್ನ ಪುಟ್ಟ ತಂಗಿಯ ಫೋಟೋ ತೋರಿಸಿಯೇ ಇಲ್ಲ.
ನೀತು.......ಇಂದೇ ಕೊನೆ ಇನ್ಮುಂದೆ ಯಾವತ್ತೂ ನಿಮ್ಮ ಕುಟುಂಬ ಅಂತ ನೀನು ಹೇಳಬಾರದು ನನ್ನ ಕುಟುಂಬ ಅನ್ನಬೇಕು. ನೀನು ನಮ್ಮ ಮನೆಯ ಹಿರಿಯ ಮಗಳಲ್ಲವಾ ಪುಟ್ಟಿ.
ಇವರಿಬ್ಬರ ಬೇಟಿಯನ್ನು ನೋಡುತ್ತಿದ್ದ ಗೋವಿಂದಾಚಾರ್ಯರು ಹತ್ತಿರ ಬಂದು ನಿಧಿಯ ತಲೆ ನೇವರಿಸಿ..........ಆರು ತಿಂಗಳ ಮಗು ಆಗಿದ್ದಾಗ ಸುಧಾ ಮತ್ತು ರಾಣಾ ನಿನ್ನನ್ನು ಮಗಳಾಗಿ ಸ್ವೀಕರಸಿದರು. ನಿನಗೆ ಐದು ವರ್ಷ ತುಂಬುವವರೆಗೂ ಅಪ್ಪ ಅಮ್ಮನ ನೆರಳಿನಲ್ಲೇ ಅವರ ಮುದ್ದಿನ ಮಗಳಾಗಿದ್ದು ನಂತರ ನಮ್ಮ ಆಶ್ರಮಕ್ಕೆ ಬಂದೆ. ಈಗ ನಿನಗೆ 19 ವರ್ಷ ತುಂಬಿದೆ 14 ವರ್ಷದ ವನವಾಸದ ನಂತರ ನಿನ್ನ ತಾಯಿಯ ಮಡಿಲಿಗೆ ಮರಳುತ್ತಿರುವೆ ಅದಕ್ಕಾಗಿ ಸಂತೋಷಿಸು ಮಗಳೇ. ನಿನ್ನ ಹೆತ್ತ ತಾಯಿ ಯಾರೆಂದು ನಮಗೂ ಗೊತ್ತಿಲ್ಲ ಆದರೆ ನಿನಗೆ ಸುಧಾಳ ನಂತರ ಅವಳಿಗಿಂತಲೂ ಜಾಸ್ತಿ ಪ್ರೀತಿಸುವ ನೀತು ಎಂಬ ತಾಯಿಯ ಸಾನಿಧ್ಯ ದೊರೆಯಲಿದೆ. ನೀತು ನಿನ್ನ ಮೇಲೆಷ್ಟು ಪ್ರೀತಿಯ ಧಾರೆ ಸುರಿಸುತ್ತಾಳೋ ತಪ್ಪು ಮಾಡಿದಾಗ ನಿನಗೆ ಶಿಕ್ಷಿಸಿ ತಿದ್ದಿ ಬುದ್ದಿ ಹೇಳುವುದರಲ್ಲೂ ನಿಸ್ಸೀಮಳು.
ನೀತು...ಗುರುಗಳೇ ನಿಮ್ಮ ಸಾನಿಧ್ಯದಲ್ಲಿ ಬೆಳೆದಿರುವ ನನ್ನೀ ಮಗಳು ಯಾವ ತಪ್ಪನ್ನೂ ಮಾಡಲಾರಳು. ರೀ ನೀವ್ಯಾಕೆ ದೂರ ನಿಂತು ಹೀಗೆ ಕಣ್ಣೀರು ಸುರಿಸುತ್ತಿರುವಿರಿ ? ನಿಮಗೆ ನಮ್ಮ ಮೊದಲನೇ ಮಗುವು ಹೆಣ್ಣಾಗಬೇಕೆಂಬ ಆಸೆಯಿತ್ತಲ್ಲವಾ ? ನೋಡಿ ದೇವರು 19 ವರ್ಷದ ನಂತರವಾದರೂ ನಿಮ್ಮಾಸೆ ಈಡೇರಿಸಿದ್ದಾರೆ ಅದಕ್ಕೆ ಖುಷಿಪಡುವ ಬದಲು ನೀವು ಅತ್ತರೆ ಹೇಗೆ ? ನಿಧಿ ಇವರ್ಯಾರೆಂದು ಗೊತ್ತ ?
ನಿಧಿ (ಹರೀಶನತ್ತ ನೋಡಿ).....ಹೂಂ ಅಮ್ಮ ಇವರು ಅ....ಅ....ಅ..
ಹರೀಶ ಸಮೀಪಕ್ಕೆ ಬಂದು......ಯಾಕಮ್ಮ ಇವಳನ್ನು ಅಮ್ಮ ಅಂತ ಒಪ್ಪಿಕೊಳ್ಳಲು ಕ್ಷಣಿಕವೂ ತಡ ಮಾಡಲಿಲ್ಲ ಆದರೆ ನನ್ನ ಅಪ್ಪ ಅಂತ ಕರೆಯಲು ತುಂಬ ಯೋಚಿಸುತ್ತಿರುವೆ ? ಯಾಕಮ್ಮ ನನಗೆ ಅಷ್ಟೂ ಯೋಗ್ಯತೆ ಇಲ್ಲವಾ ?
ಹರೀಶನ ಮಾತಿನಿಂದ ನಿಧಿ ಜೋರಾಗಿ ಅಳುತ್ತ ಅವನನ್ನು ತಬ್ಬಿ..... ಕ್ಷಮಿಸಿ ಅಪ್ಪ ನಾನು ಅನಾಥಳಾಗಿ ಹುಟ್ಟಿದವಳು. ಸುಧಾ ಅಮ್ಮ ರಾಣಾ ಅಪ್ಪ ನನ್ನನ್ನು ದತ್ತು ಸ್ವೀಕರಿಸಿ ಅಪ್ಪ ಅಮ್ಮನ ಪ್ರೀತಿಯನ್ನು ಧಾರೆಯೆರೆದರು. ಅವರ ಸ್ಥಾನದಲ್ಲಿ ಕೆಲವು ದಿನಗಳಿಗೂ ಮುಂಚೆ ಬೇರೆ ಯಾರನ್ನೂ ಊಹಿಸಿಕೊಳ್ಳಲಿಕ್ಕೂ ನನ್ನಿಂದ ಸಾಧ್ಯವಿರಲಿಲ್ಲ. ಆದರೆ ಗುರುಗಳು ನಿಮ್ಮ ಬಗ್ಗೆ ಕುಟುಂಬಲ್ಲಿನ ಇತರರ ಬಗ್ಗೆ ಪೂರ್ತಿ ಹೇಳಿದಾಗ ನಿಮ್ಮನ್ನೆಲ್ಲಾ ಯಾವಾಗ ಬೇಟಿಯಾಗುವೆನೋ ? ನಾನೂ ಕುಟುಂಬದಲ್ಲಿ ಒಬ್ಬಳಾಗುವ ಅವಕಾಶ ಸಿಗುತ್ತೋ ಇಲ್ಲವೋ ಎಂದೇ ಪ್ರತಿದಿನ ಯೋಚಿಸುತ್ತಿದ್ದೆ.
ಹರೀಶ ಕಣ್ಣೀರಿನೊಂದಿಗೆ ನಿಧಿಯ ಹಣೆಗೆ ಮುತ್ತಿಟ್ಟು.......ನಿನಗೆ ಈ ಅವಕಾಶವನ್ನು ಯಾರೂ ಕೊಡಬೇಕಾಗಿಲ್ಲ ಮಗಳೇ ಅದು ನಿನ್ನದೇ ಹಕ್ಕು. ರಾಣಾಪ್ರತಾಪ್ ಮತ್ತು ಸುಧಾಮಣಿ ಅವರೊಂದಿಗೆ ನಮಗೆ ಜನ್ಮಜನ್ಮದ ಋಣಾನುಬಂಧ ಇದ್ದಂತಿದೆ. ಈ ಜನ್ಮದಲ್ಲಿ ಅವರಿಬ್ಬರ ಋಣ ತೀರಿಸಲು ಅವರ ಇಬ್ಬರೂ ಮಕ್ಕಳಿಗೆ ತಂದೆ ತಾಯಿಯಾಗುವ ಸೌಭಾಗ್ಯ ನಮಗೆ ಲಭಿಸಿದೆ.
ನಿಧಿ......ಅಮ್ಮ ನನ್ನ ತಂಗಿ ತಮ್ಮಂದಿರನ್ನು ಬೇಟಿಯಾಗಲು ನಾನು ತುಂಬ ಕಾತುರಳಾಗಿರುವೆ.
ನೀತು......ಇವತ್ತೊಂದು ದಿನ ನೀನು ಗುರುಗಳ ಜೊತೆಯಲ್ಲಿ ಇರು. ನಾಳೆ ಬೆಳಿಗ್ಗೆ ತಂದೆ ತಾಯಿಯ ಅಸ್ಥಿ ವಿಸರ್ಜನೆ ಮಾಡಿದ ನಂತರ ನಿನ್ನನ್ನು ಒಂದು ಕ್ಷಣಕ್ಕೂ ನನ್ನಿಂದ ದೂರ ಮಾಡುವುದಿಲ್ಲ.
ಹರೀಶ.....ಗುರುಗಳೇ ನಾವು ಮಗಳನ್ನು ನಮ್ಮ ಜೊತೆಯಲ್ಲಿಯೇ ಕರೆದೊಯ್ಯಲು ನೀವು ಅಪ್ಪಣೆ ಕೊಡುವಿರಾ ?
ಗೋವಿಂದಾಚಾರ್ಯರು......ಇವಳ ಆಶ್ರಮದಲ್ಲಿನ ವಾಸ ವರ್ಷದ ಹಿಂದೆಯೇ ಮುಗಿಯಿತು. ರಾಣಾ ಮತ್ತು ಸುಧಾ ಬದುಕಿದ್ದಿದ್ದರೆ ಈಕೆ ಅವರ ಮನೆಗೆ ಸೇರುವವಳಿದ್ದಳು ಆದರೆ ವಿಧಿ ಬೇರೆಯದ್ದೇ ಇವಳ ಪಾಲಿಗೆ ಬರೆಯಿತು. ಈಗ ಅವರಿಬ್ಬರಿಗಿಂತಲೂ ಹೆಚ್ಚು ಪ್ರೀತಿಸುವ ತಂದೆ ತಾಯಿ ಇವಳಿಗೆ ದೊರೆತಿದ್ದಾರೆ ಅದನ್ನು ತಡೆಯುವುದಕ್ಕೆ ನಾವ್ಯಾರು ? ನಿಜಕ್ಕೂ ಹರೀಶ ನನಗಿಂದು ಹೃದಯಾಳದಿಂದ ತುಂಬ ಸಂತೋಷವಾಗುತ್ತಿದೆ ನೀವಿಬ್ಬರು ಇವಳನ್ನು ಮಗಳಾಗಿ ಸ್ವೀಕಾರ ಮಾಡುತ್ತೀರೋ ಅಥವ ನಿಧಿ ನಿಮ್ಮಿಬ್ಬರನ್ನು ತಂದೆ ತಾಯಿಯರ ಸ್ಥಾನದಲ್ಲಿ ಒಪ್ಪಿಕೊಳ್ಳುತ್ತಾಳೋ ಎಂಬುದೇ ನನ್ನ ಚಿಂತೆಯಾಗಿತ್ತು. ಆದರೆ ಜಗನ್ಮಾತೆ ಆದಿಶಕ್ತಿಯ ಕೃಪೆಯಿಂದ ಎಲ್ಲವೂ ಸುಲಲಿತವಾಗಿ ಸಂಪನ್ನಗೊಂಡಿತು. ಮಗಳೇ ನಿಧಿ ಇಂದು ನೀನು ಆಶ್ರಮದಲ್ಲಿಯೇ ಉಳಿದುಕೋ ನಾಳೆಯಿಂದ ನೀನು ನಿನ್ನ ಅಪ್ಪ ಅಮ್ಮನ ಪ್ರೀತಿಯ ಛಾವಣಿಯಡಿ ಇರುವಂತೆ.
ನಿಧಿ ಇನ್ನೂ ಹರೀಶನನ್ನು ತಬ್ಬಿಕೊಂಡೆ ನಿಂತಿದ್ದು....ಆಗಲಿ ಗುರುಗಳೆ
ನೀವು ಹೇಳಿದಂತೆಯೇ ನಡೆದುಕೊಳ್ಳುವೆ.
ನೀತು.....ನೀನಿಷ್ಟು ಸರಾಗವಾಗಿ ಕನ್ನಡ ಮಾತನಾಡುವೆ ಹೇಗೆ ?
ಗೋವಿಂದಾಚಾರ್ಯರು......ನಿಧಿ ಬರೀ ಕನ್ನಡವಲ್ಲ ದೇಶದಲ್ಲಿನ 17 ಭಾಷೆಗಳನ್ನು ಓದಲು...ಬರೆಯಲು ಮತ್ತು ಮಾತನಾಡಲು ಬಲ್ಲಳು.
ಹರೀಶ.....ನನ್ನ ಮಗಳು ಮಲ್ಟಿ ಟಾಲೆಂಟೆಡ್ ಹುಡುಗಿ. ಈಗ ನೀನು ಯಾವ ತರಗತಿಯಲ್ಲಿರುವೆ ?
ನಿಧಿ.....ಮೊದಲನೇ ವರ್ಷದ ಬಿಬಿಎ ಮುಗಿದಿದೆ ಅಪ್ಪ.
ಹರೀಶ.....ಚಿಂತೆಯಿಲ್ಲ ಬಿಡು ಎರಡನೇ ವರ್ಷದಿಂದ ನಮ್ಮೂರಿನ ಕಾಲೇಜಿನಲ್ಲೇ ಮುಂದುವರಿಸುವಂತೆ ನಂತರ ಅಲ್ಲಿಯೇ ಎಂಬಿಎ ಓದಬೇಕು ಸರಿಯಾ.
ರಾತ್ರಿ ಎಂಟವರೆಗೂ ಆಧಿಶಕ್ತಿಯು ಕರುಣಿಸಿದ ಹಿರಿ ಮಗಳೊಟ್ಟಿಗೆ ಕಳೆದ ನೀತು ಹರೀಶ ನಾಳೆ ಮುಂಜಾನೆ ಗಂಗಾ ತೀರದಲ್ಲಿ ತಾಯಿ ಗಂಗೆಯ ಸಮಕ್ಷಮ ನಿಧಿಯನ್ನು ತಮ್ಮ ಮಗಳಾಗಿ ಸ್ವೀಕರಿಸುವ ನಿರ್ಧಾರವನ್ನು ಆಚಾರ್ಯರಿಗೆ ತಿಳಿಸಿದರು.
ನೀತುವಿಗೆ ಫೋನ್ ಮಾಡಿದ ಅಶೋಕ.....ಎಲ್ಲಿದ್ದೀರ ? ನೀವಿನ್ನೂ ಬಂದಿಲ್ಲ ಇಲ್ಲಿ ಚಿನ್ನಿ ಎಲ್ಲಾ ಕಡೆ ನಿನಗಾಗಿ ಹುಡುಕುತ್ತ ಓಡಾಡುತ್ತ ಅವಳ ಹಿಂದೆ ನಮ್ಮನ್ನೂ ಓಡಾಡಿಸುತ್ತಿದ್ದಾಳೆ ಮಮ್ಮ ಎಲ್ಲಿ ಅಂತ.
ನೀತು ನಗುತ್ತ....ಇನ್ನರ್ಧ ಘಂಟೆ ಅವಳನ್ನು ಸಂಭಾಳಿಸಿ ನಾವಷ್ಟು ಸಮಯದಲ್ಲಿ ಹಿಂದಿರುಗಿ ಬರುತ್ತೇವೆಂದು ಫೋನಿಟ್ಟಳು.
ನಿಧಿ.....ಅಮ್ಮ ನೀವು ಹೋಗಬೇಕ ?
ನೀತು......ಈ ಒಂದು ರಾತ್ರಿ ಮಾತ್ರ ನಾವು ದೂರವಿರುವುದು ಪುಟ್ಟಿ ನಾಳೆಯಿಂದ ನನ್ನೀ ಮಗಳನ್ನು ಎಲ್ಲಿಯೂ ಬಿಡುವುದಿಲ್ಲ.
ನಿಧಿ......ಅಮ್ಮ ನಾನು ಯಾವುದಕ್ಕೂ ಹೆದರುವುದಿಲ್ಲ ಆದರೆ ನಾನು ಒಂಟಿಯಾಗಿರುವೆ ಅಂತ ಭಯವಾಗುತ್ತೆ ಅಷ್ಟೆ.
ನೀತು....ಸುಧಾ ಅಮ್ಮ ದೇವರ ಬಳಿ ತೆರಳಿದ್ದರೇನು ನನ್ನೀ ಮಗಳ ಹತ್ತಿರ ಈ ನಿನ್ನ ನೀತು ಅಮ್ಮ ಸದಾ ಇರುತ್ತಾಳೆ ಕಂದ ಹೆದರಬೇಡ.
ವಿಕ್ರಂ ಸಿಂಗ್ ನಿನಗೆ ಆರಾಧನಾ ಗೊತ್ತಿರಬೇಕಲ್ಲವಾ ?
ಮಹಾರಾಜ ಮತ್ತು ಮಹಾರಾಣಿಯ ಮೊದಲನೇ ಪುತ್ರಿಯನ್ನು ನೀತು ಹಾಗು ಹರೀಶ ತಮ್ಮ ಜೇಷ್ಠ ಮಗಳಾಗಿ ಸ್ವೀಕರಿಸುತ್ತಿರುವುದು ನೋಡಿ ಸಂತೋಷದಲ್ಲಿದ್ದ ವಿಕ್ರಂ ಸಿಂಗ್......ಹೂಂ ಮೇಡಂ ನನಗೆ ಆರಾಧನಾ ಬಗ್ಗೆ ಗೊತ್ತಿದೆ ಆದರೆ ಈಗವರು ಎಲ್ಲಿದ್ದಾರೆಂದು ಮಾತ್ರ ತಿಳಿದಿಲ್ಲ.
ನೀತು......ಅವಳನ್ನು ಹುಡುಕಿಸು ವಿಕ್ರಂ ಸಾಧ್ಯವಾದಷ್ಟು ಶೀಘ್ರದಲ್ಲಿ ಅವಳು ನಮ್ಮ ವಶದಲ್ಲಿರಬೇಕು. ಅವಳೆಲ್ಲಿಯೇ ಅಡಗಿದ್ದರೂ ಸರಿ ಹುಡುಕಿ ಕರೆದು ತಾ ಜೊತೆಗೆ ಅವಳಿಗೆ ಸಂಬಂಧಿಸಿದವರು ಯಾರೇ ಇದ್ದರೂ ಅವರನ್ನೂ ಕೂಡ.
ವಿಕ್ರಂ ಸಿಂಗ್.....ವಾತಾಳ ಗರ್ಭದಲ್ಲೇ ಅಡಗಿದ್ದರೂ ಸರಿ ನಾನೆಳೆದು ತರುತ್ತೇನೆ. ಮಹಾರಾಜ ಮಹಾರಾಣಿಯ ಸಾವಿನಲ್ಲಿ ನಿಮಗೆ ಅವರ ಮೇಲೆ ಅನುಮಾನವಿದೆಯಾ ?
ನೀತು.......ಅವರನ್ನು ಹುಡುಗಿದ ಬಳಿಕವೇ ಆ ಬಗ್ಗೆ ನಾವು ಮುಂದೆ ಮಾತಾಡೋಣ. ಆಚಾರ್ಯರೇ ಅಪ್ಪಣೆ ಕೊಡಿ ನನ್ನ ಚಿನುಕುರುಳಿ ಅಮ್ಮ ಕಾಣಿಸುತ್ತಿಲ್ಲ ಅಂತ ರಂಪ ರಾದ್ದಾಂತ ಮಾಡುತ್ತಿದ್ದಾಳೆ ನಾನು ಬೇಗ ಹೋಗಬೇಕಿದೆ.
ಹರೀಶ......ನಮ್ಮೀ ಮಗಳನ್ನು ಇಷ್ಟು ವರ್ಷಗಳ ಕಾಲ ನೀವು ನಿಮ್ಮ
ಸಾನಿಧ್ಯದಲ್ಲಿ ಇಟ್ಟುಕೊಂಡು ಪೋಷಣೆ ಮಾಡಿದ್ದಕ್ಕಾಗಿ ನಿಮಗೆ ನಾ ಆಜನ್ಮ ಋಣಿಯಾಗಿರುವೆ......ಎನ್ನುತ್ತ ಗೋವಿಂದಾಚಾರ್ಯರ ಕಾಲಿಗೆ ಧೀರ್ಘದಂಡ ನಮಸ್ಕರಿಸಿದನು.
ಹರೀಶನನ್ನು ಎದ್ದು ನಿಲ್ಲುವಂತೇಳಿ ಆಚಾರ್ಯರು.....ಅದು ನನ್ನ ಕರ್ತವ್ಯವಾಗಿತ್ತು ಹರೀಶ ನಾಳೆಯಿಂದ ಇವಳು ನಿಮ್ಮ ಮಗಳಾಗಿ ಈಕೆಯ ಸಂಪೂರ್ಣ ಜವಾಬ್ದಾರಿಯೂ ನಿಮ್ಮದಾಗುತ್ತೆ.
ನಿಧಿ ಕಾಲಿಗೆ ನಮಸ್ಕರಿಸಲು ಹೊರಟಾಗ ಅವಳನ್ನು ತಡೆದ ಹರೀಶ
ತಬ್ಬಿಕೊಂಡು........ಹೆಣ್ಣು ಮಕ್ಕಳಿಗೆ ತಂದೆ ಕಾಲಿನ ಹತ್ತಿರ ಸ್ಥಾನವಲ್ಲ ಮಗಳೇ ಅವಳು ತಂದೆ ತಲೆಯಲ್ಲಿನ ಕಿರೀಟವಿದ್ದಂತೆ.
ಆಚಾರ್ಯರು.....ಹರೀಶ ಹೆಣ್ಣು ಮಕ್ಕಳ ಬಗ್ಗೆ ನಿನ್ನ ಭಾವನೆಗಳನ್ನು ತಿಳಿದು ನನ್ನ ಹೃದಯ ತುಂಬಿ ಬಂದಿದೆ. ಸದಾಕಾಲ ಸುಖವಾಗಿರಿ ನಾಳೆ ಮುಂಜಾನೆ ನಾವು " ಹರ್ ಕಿ ಪೌರಿ " ಯಲ್ಲಿ ಸೇರೋಣ.
ನೀತು ಹೊರಡುವುದಕ್ಕೂ ಮುನ್ನ ನಿಧಿಗೆ ಕೈಯಾರೆ ಊಟ ಮಾಡಿಸಿ ಅವಳ ಕೆನ್ನೆಗೆ ಮುತ್ತಿಟ್ಟರೆ ಹರೀಶ ಮಗಳನ್ನು ತಬ್ಬಿ ಸಂತೋಷದಿಂದ ಕಣ್ಣೀರು ಹರಿಸಿದನು.
ದಾರಿಯಲ್ಲಿ.........
ಹರೀಶ.......ನೀತು ಮಗಳ ವಿಷಯ ನೀನೇನೂ ಹೇಳಿರಲಿಲ್ಲವಲ್ಲ ಯಾಕೆ ?
ನೀತು.......ಮೊದಲೇ ನಿಮಗೆ ನಿಧಿ ಬಗ್ಗೆ ತಿಳಿಸಿ ಬಿಟ್ಟಿದ್ದರೆ ಗಂಡನ ಮುಖದಲ್ಲಿ ಆ ಕ್ಷಣ ನೋಡಿದ ಸಂತೋಷ ನೋಡುವ ಸೌಭಾಗ್ಯ ನನಗೆ ಸಿಗುತ್ತಿತ್ತಾ ಹೇಳಿ.
ಹರೀಶ.......ನಿಜಕ್ಕೂ ನಮ್ಮ ಜನ್ಮ ಸಾರ್ಥಕವಾಯಿತು ನೀತು ನಮ್ಮ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುವ ಗಂಡು ಮಕ್ಕಳು ಅತ್ಯಂತ ವಿನಯ ಮತ್ತು ಸಂಭಾವಿತಳಾದ ಹಿರಿಮಗಳು.......
ನೀತು ಅರ್ದದಲ್ಲಿಯೇ.......ಅವರ ಜೊತೆ ಅಪ್ಪನನ್ನೇ ಕೋತಿ ರೀತಿ ಕುಣಿದಾಡಿಸುವ ತರಲೆ ಚಿನುಕುರುಳಿ......ಹ್ಹ...ಹ್ಹ....ಹ್ಹ...ಹ್ಹ.
ಹೆಂಡಿತಿಯ ಮಾತಿಗೆ ಹರೀಶನೂ ನಗುತ್ತ ಅವಳನ್ನು ತಬ್ಬಿಕೊಂಡು ಹೋಟೆಲ್ ತಲುಪಿದಾಗ ಕೆಳಗಿನ ಲಾಬಿಯಲ್ಲೇ ಅಶೋಕನ ಜೊತೆ ಮಕ್ಕಳೆಲ್ಲರೂ ಕುಳಿತಿದ್ದ ಬಾಗಿಲಿನತ್ತ ದೃಷ್ಟಿ ನೆಟ್ಟಿ ಅವನ ಮಡಿಲಲ್ಲಿ ಕುಳಿತಿದ್ದ ನಿಶಾ ಅಮ್ಮ ಕಾಣುತ್ತಲೇ ಓಡಿ ಬಂದು ಜೋತು ಬಿದ್ದಳು.
ನಮಿತ.......ಆಂಟಿ ನೀವಿಷ್ಟೊತ್ತು ಬಾರದೆ ಇದ್ದುದಕ್ಕೆ ಚಿನ್ನಿ ಫುಲ್ ಬೇಸರಗೊಂಡು ಎಲ್ಲಾ ಕಡೆ ನಿಮಗಾಗಿ ಹುಡುಕುತ್ತಿದ್ದಳು ಅದಕ್ಕೆ ಇವಳನ್ನು ಕೆಳಗೆ ಕರೆದುಕೊಂಡು ಬಂದು ಅಮ್ಮ ಬರ್ತಾಳೆ ಅಂತೇಳಿ ಕೂರಿಸಿಕೊಂಡಿದ್ದೆವು ಊಟವನ್ನೂ ಮಾಡಿಲ್ಲ.
ನೀತು......ಚಿನ್ನಿ ನೀನಿನ್ನೂ ಊಟ ಮಾಡಿಲ್ಲವಾ ಬಂಗಾರಿ.....
ನಿಶಾ ಇಲ್ಲವೆಂದು ತಲೆಯಾಡಿಸಿ ತನಗೆ ಹೊಟ್ಟೆ ಹಸಿಯುತ್ತಿದೆ ಊಟ ಮಾಡಿಸೆಂದು ಬೆರಳನ್ನು ಬಾಯಿಯತ್ತ ತೋರಿಸಿದಳು. ಮಗಳಿಗೆ ಊಟ ಮಾಡಿಸಿ ಮಲಗಿಸಿದ ನಂತರ ಆಶ್ರಮದಲ್ಲಿ ಆರ್ಚಾಯರ ಜೊತೆಗಿನ ಮಾತುಕತೆ ಹಾಗು ತಾವೆಲ್ಲರೂ ಇಲ್ಲಿಗೆ ಬಂದಿರುವುದಕ್ಕೆ ಕಾರಣವನ್ನೂ ತಿಳಿಸಿದರು. ನಿಧಿಯ ಬಗ್ಗೆ ಹೇಳಿದಾಗ ಮೊದಲಿಗೆ ಎಲ್ಲರೂ ಅಚ್ಚರಿಗೊಂಡರೆ ಬಳಿಕ ಸಂತೋಷದಿಂದ ನಾಳೆ ಅವಳನ್ನು ಬೇಟಿಯಾಗಲು ಉತ್ಸುಕರಾದರು.
ಶೀಲಾ......ನೀನು ನಮಗೂ ಯಾವ ವಿಷಯ ಹೇಳಿರಲಿಲ್ಲವಲ್ಲ .
ನೀತು......ನಾನೇ ಮೊದಲು ನಿಧಿಯನ್ನು ಬೇಟಿಯಾಗಬೇಕೆಂದು ಯಾರ ಹತ್ತಿರವೂ ಅವಳ ವಿಷಯ ಪ್ರಸ್ತಾಪಿಸಿರಲಿಲ್ಲ. ನಾಳೆಯಿಂದ ಅವಳು ನಮ್ಮ ಜೊತೆಯಲ್ಲೇ ಇರುತ್ತಾಳಲ್ಲ ನಿನಗೆಷ್ಟು ಬೇಕಾದರೂ ಮಾತನಾಡಿಕೋ ಆಯ್ತಾ.
ರಜನಿ......ಮತ್ತೆ ನಮ್ಮ ಮನೆ ಮಗಳ ಜೊತೆ ನಾವು ಮಾತನಾಡದೆ ನೀನೇ ಮಾತನಾಡುತ್ತಿರಬೇಕೇನೂ ?
ಸುರೇಶ......ವಾವ್ ಅಮ್ಮ ನನಗೊಬ್ಬಳು ಪುಟ್ಟ ತಂಗಿ ದೊರಕಿದಳು ಈಗ ಅಕ್ಕ ಫುಲ್ ಮಜಾ ?
ಹರೀಶ.....ನೀನು ಸರಿಯಾಗಿ ಓದದಿದ್ದರೆ ಅಕ್ಕನಿಂದ ನಿನ್ನ ಬೆಂಡ್ ತೆಗಿಸ್ತೀನಿ ಗೊತ್ತಾಯ್ತಾ.
ಎಲ್ಲರೂ ಹೀಗೇ ಮಾತನಾಡಿದ ನಂತರ ತಮ್ತಮ್ಮ ರೂಮಿಗೆ ತೆರಳಿ ನಿದ್ರೆಗೆ ಶರಣಾದರೆ ನೀತು ಹರೀಶ ತಮ್ಮ ಮಧ್ಯೆ ನಿಶ್ಚಿಂತೆಯಿಂದ ಮಲಗಿದ್ದ ಮಗಳನ್ನು ನೋಡುತ್ತ ನಿಧಿ ಬಗ್ಗೆ ಮಾತನಾಡುತ್ತಿದ್ದರು.
ಚನ್ನಾಗಿ ಬಂದಿದೆ. ಕೆಲವರಿಗೆ ಬೇಜಾರಾಗಿರ ಬೇಕು, ಸೆಕ್ಸ್ ಇಲ್ಲಾಂತ. ಎರಡು ಇದ್ದರೆ ಸೌಲಭ್ಯ.ಭಾಗ 156
ಮೇ 10 ಮುಂಜಾನೆ 05:30
ಸ್ಥಳ....ಹರ್ ಕಿ ಪೌರಿ — ಹರಿದ್ವಾರ.
ಮೂವರು ಗುರುಗಳಿಗೂ ನಮಸ್ಕರಿಸಿ ನಿಧಿಯನ್ನು ಶೀಲಾ....ರವಿ...
ರಜನಿ....ಅಶೋಕ...ಸುಕನ್ಯಾ...ಸವಿತಾರಿಗೆ ಪರಿಚಯಿಸಿದ ನೀತು
ತನ್ನ ಹಿರಿಯ ಮಗಳನ್ನೂ ಅವರಿಗೆ ಭೇಟಿ ಮಾಡಿಸಿದಳು.
ನಿಧಿ....ಅಮ್ಮ ನಿಶಾ...ಸುರೇಶ ಮತ್ಯಾರು ಕಾಣಿಸುತ್ತಿಲ್ಲ.
ನೀತು ನಗುತ್ತ....ಎಲ್ಲರೂ ನನ್ನ ಲಿಲಿಪುಟ್ ಜೊತೆ ಬರುತ್ತಿದ್ದಾರೆ ಈಗ ನೋಡು ಇಲ್ಲಿಗೆ ಬರುತ್ತಲೇ ನನ್ನ ಚಿಲ್ಟಾರಿಯ ನೌಟಂಕಿ ಶುರುವಾಗಿ ದೊಡ್ಡ ನಾಟಕ ಮಾಡ್ತಾಳೆ.
ನಿಧಿ....ಯಾಕೆ ?
ನೀತು....ನೀನೇ ನೋಡ್ತೀಯಲ್ಲ ಗೊತ್ತಾಗುತ್ತೆ.
ಗಿರೀಶಣ್ಣನ ಕೈ ಹಿಡಿದು ತನ್ನದೇ ಗುಂಗಿನಲ್ಲಿ ಏನೋ ವಟಗುಟ್ಟತ್ತಾ ಬರುತ್ತಿದ್ದ ನಿಶಾಳನ್ನು ನೋಡಿ ನಿಧಿಯ ಕಂಗಳು ಆನಂದದ ಕಂಬನಿ ಸುರಿಸಿದರೆ ನೀತು ಮಗಳನ್ನು ತಬ್ಬಿಕೊಂಡಳು. ಎಲ್ಲಾ ಮಕ್ಕಳನ್ನು ಮುಂದೆ ಬಿಟ್ಟುಕೊಂಡು ಅವರ ಹಿಂದೆ ಪ್ರತಾಪ್ ಮತ್ತು ಅನುಷಾ ಬರುತ್ತಿದ್ದರು. ಪೌರಿ ಸಮೀಪಿಸುತ್ತಿದ್ದಂತೆ ಏದುರಿಗೆ ವಿಶಾಲವಾಗಿ ಹರಿಯುತ್ತಿದ್ದ ಗಂಗಾ ನದಿಯನ್ನು ಕಂಡ ನಿಶಾ ಕುಡಿದಾಡುವುದನ್ನು ನಿಲ್ಲಿಸಿ ತನ್ನ ಪುಟ್ಟ ಮೇದುಳಿನಲ್ಲಿ ಹಿಂದಿನ ಘಟನೆಗಳನ್ನು ಮೆಲುಕು
ಹಾಕುತ್ತ ನಿಂತಳು. ಹಿಂದೆ ವಾರಣಾಸಿಯಲ್ಲಿ ಅಪ್ಪ ತನ್ನನ್ನೆತ್ತಿ ನದಿಯ ಒಳಗೆ ಮುಳುಗಿಸಿ ಎತ್ತಿದ್ದನ್ನು ನೆನೆದು ಈಗಲೂ ಅಪ್ಪ ಹಾಗೆಯೇ ಮಾಡಬಹುದೆಂಬ ಅನುಮಾನದಿಂದ ಸುತ್ತಲೂ ನೋಡಿ ಅಪ್ಪನನ್ನು ಕಂಡು ಅವನನ್ನೇ ಧಿಟ್ಟಿಸಿ ನೋಡತೊಡಗಿದಳು. ಹರೀಶ ಕೈಗಳನ್ನು ಮುಂದೆ ಚಾಚಿ....ಬಾ ಚಿನ್ನಿ ನೀರು ನೋಡಿಲ್ಲಿ ಎನ್ನುತ್ತಿದ್ದಂತೆಯೇ....
ಅಣ್ಣನಿಂದ ಕೈ ಬಿಡಿಸಿಕೊಂಡು ನಾ ಬಲ್ಲ...ನಾ ಬಲ್ಲ...ಎಂದು ಕಿರುಚಿ ಹಿಂದಿರುಗಿ ಓಡತೊಡಗಿದಳು. ಅವಳ ಹಿಂದೆ ಬರುತ್ತಿದ್ದಂತ ಪ್ರತಾಪ್ ಅವಳನ್ನಿಡಿದು ಎತ್ತಿಕೊಂಡರೆ ಕೈ ಕಾಲುಗಳನ್ನು ಬಡಿದು ಅವನಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದಳು. ನೀತು ತಾನೇ ಹೋಗಿ ಮಗಳ ತಲೆ ನೇವರಿಸಿ ಎತ್ತಿಕೊಂಡಾಗ ಅಮ್ಮನನ್ನು ಬಿಗಿದಪ್ಪಿಕೊಂಡ ನಿಶಾ
.......ಮಮ್ಮ ಪಪ್ಪ ಬೇಲ ನೀಲು ಹಾಕಿ ಬೇಲ ಪಪ್ಪ ಬೇಲ ಮಮ್ಮ....
ಎಂದು ಹತ್ತಿರ ಹತ್ತಿರ ಬಂದ ಹರೀಶನನ್ನು ನೋಡಿ ಕಿರುಚಿ ಅಮ್ಮನ ಕುತ್ತಿಗೆಗೆ ಇನ್ನೂ ಗಟ್ಟಿಯಾಗಿ ನೇತಾಕಿಕೊಂಡಳು.
ರಜನಿ.....ಏನಾಯ್ತು ಇವಳಿಗೆ ನೆನ್ನೆ ರಾತ್ರಿಯೆಲ್ಲಾ ಅಪ್ಪನ ಮೇಲೇರಿ ಮಲಗಿದ್ಳು ಈಗ ಅಪ್ಪ ಬೇಡ ಅಂತ ದೂರ ತಳ್ತಿದ್ದಾಳೆ.
ನೀತು ನಗುತ್ತ......ಇವರು ಕಾಶಿಯಲ್ಲಿ ನದಿಯಲ್ಲಿ ಅದ್ದಿಬಿಟ್ಟಿದ್ದರಲ್ಲ ಅದನ್ನೇ ನೆನೆದು ಈಗಲೂ ಅಪ್ಪ ನನ್ನನ್ನು ಮುಳುಗಿಸುತ್ತಾರೆ ಅಂತ ಹೆದರಿ ದೂರ ತಳ್ತಿರೋದು. ರೀ ನೀವು ಸ್ವಲ್ಪ ಹೊತ್ತು ದೂರವೇ ಇರಿ ಚಿನ್ನಿಯ ಭಯ ಸ್ವಲ್ಪ ಕಡಿಮೆಯಾಗಲಿ ಇಲ್ಲಾಂದ್ರೆ ಇನ್ನೂ ಗಲಾಟೆ ಮಾಡ್ತಾಳೆ. ಗುರುಗಳೇ ಇಲ್ಲಿಯೂ ಮಕ್ಕಳಿಬ್ಬರು ನದಿಯಲ್ಲಿ ಸ್ನಾನ ಮಾಡಬೇಕೇನು ?
ಆಚಾರ್ಯರು....ಹಿರಿಮಗಳು ಗಂಗೆಯಲ್ಲಿ ಮಿಂದಿದ್ದಾಳೆ ಚಿಕ್ಕವಳನ್ನ ಅವಳ ಮಡಿಲಲ್ಲಿ ಕೂರಿಸಿ ಗಂಗೆಯ ನಾಲ್ಕು ಹನಿ ಪ್ರೋಕ್ಷಣೆ ಮಾಡು ಅಷ್ಟೇ ಸಾಕು.
ನಿಶಾ ಇನ್ನೂ ಅಮ್ಮನನ್ನು ತಬ್ಬಿಕೊಂಡು ಅಪ್ಪನನ್ನೇ ಗುರಾಯಿಸುತ್ತಾ ಹತ್ತಿರ ಬರಬೇಡವೆಂದು ಕೈ ಅಳ್ಳಾಡಿಸುತ್ತಿದ್ದಳು.
ನೀತು ಮಗಳ ಕೆನ್ನೆಗೆ ಮುತ್ತಿಟ್ಟು.....ಚಿನ್ನಿ ಪಪ್ಪ ನಿನ್ನ ನೀರಲ್ಲಿ ಅದ್ದಲ್ಲ ಪುಟ್ಟಿ ನೋಡಿಲ್ಲಿ ನಿನ್ನ ನಿಧಿ ಅಕ್ಕ. ಅಕ್ಕನ ಜೊತೆ ಕುಳಿತು ಮಾಮಿಯ ಪೂಜೆ ಮಾಡ್ತೀಯಾ ಅಲ್ಲವ ಚಿನ್ನಿ.
ಅಮ್ಮನನ್ನು ತಬ್ಬಿಕೊಂಡೇ ಕತ್ತನ್ನು ಸ್ವಲ್ಪ ತಿರುಗಿಸಿ ನಿಧಿಯನ್ನು ಕಂಡ ನಿಶಾಳ ತುಟಿಗಳಲ್ಲಿ ಅನಾಯಾಸವಾಗಿ ಮಂದಹಾಸವು ಮೂಡಿತು.
ತಂಗಿಯನ್ನು ಮುದ್ದಾಡಲು ಕಾತುರಳಾಗಿದ್ದ ನಿಧಿ ಬಾ ಎಂದು ಕೈಯಿ ಚಾಚಿದಾಗ ಅಮ್ಮನ ಕಡೆ ನೋಡಿ ಅವಳೊಪ್ಪಿಗೆ ಪಡೆದ ನಿಶಾ ನಿಧಿ ತೋಳಿಗೆ ಜಾರಿಕೊಂಡಳು. ತಂಗಿಯನ್ನು ತಬ್ಬಿಕೊಳ್ಳುತ್ತಲೇ ಮುತ್ತಿನ ಸುರಿಮಳೆಗೈದ ನಿಧಿಯ ಕಂಗಳು ಆನಂದದ ಭಾಷ್ಪ ಸುರಿಸುತ್ತಿದ್ದವು.
ನೀತು ಅವಳ ತಲೆ ಸವರಿ......ನಿಧಿ ಇನ್ಮೇಲೆ ಇವಳು ನಿನ್ನ ಜೊತೆಗೇ ಇರುತ್ತಾಳಲ್ಲವ ದಿನಾ ಮುದ್ದು ಮಾಡುವಂತೆ ಮೊದಲು ಪೂಜೆಯ ಕಾರ್ಯ ಮುಗಿಸಿ ಅಪ್ಪ ಅಮ್ಮನ ಆತ್ಮಕ್ಕೆ ಶಾಂತಿ ಕೊಡಬೇಕು.
ಮುಂದಿನ ಎರಡು ಘಂಟೆಗಳ ಸಮಯ ಮಹರಾಜ ರಾಣಾಪ್ರತಾಪ್ ಹಾಗು ಮಹರಾಣಿ ಸುಧಾಮಣಿಯ ಆತ್ಮದ ಶಾಂತಿಗಾಗಿ ಗುರುಗಳು ಗೋವಿಂದಾಚಾರ್ಯರ ಮುಂದಾಳತ್ವದಲ್ಲಿ ಪೂಜೆ ನೆರವೇರಿಸಿದರು.
ನಿಶಾಳನ್ನು ಮಡಿಲಲ್ಲಿ ಕೂರಿಸಿಕೊಂಡಿದ್ದ ನಿಧಿ ತಂಗಿ ಕೈಯನ್ನಿಡಿದು ಆಚಾರ್ಯರು ಸೂಚಿಸಿದಂತೆ ಪೂಜೆಯ ವಿಧಿವಿಧಾನಗಳನ್ನು ತಾನೇ ಮಾಡುತ್ತಿದ್ದಳು. ಗಂಗಾ ನದಿಯಲ್ಲಿ ಅಸ್ತಿಗಳನ್ನು ವಿಸರ್ಜನೆ ಮಾಡೊ ಸಿಮಯದಲ್ಲಿ ನೀರನ್ನು ಕಂಡು ಹೆದರಿದ ನಿಶಾ ಅಮ್ಮನ ಹೆಗಲಿಗೇರಿ ಸ್ವಲ್ಪ ಶಾಂತಳಾದ ಬಳಿಕ ನೀತು ಕಿರಿಮಗಳ ಕೈಯನ್ನು ಹಿರಿಮಗಳಿಗೆ ತಾಕುವಂತಿಡಿದು ಅಸ್ತಿ ವಿಸರ್ಜನೆ ಕಾರ್ಯ ಸಂಪನ್ನಗೊಳಿಸಿದರು.
ಆಚಾರ್ಯರು...ನಿಮ್ಮೆಲ್ಲರಿಗೂ ಹರಿದ್ವಾರಕ್ಕೆ ಬರುವಂತೇಳಿದ್ದ ಕೆಲಸ ಪೂರ್ಣಗೊಂಡಿತು. ಇಂದಿನಿಂದ ಕೇಧಾರನಾಥ ಮತ್ತು ಬದ್ರಿನಾಥನ ಸನ್ನಿಧಾನ ಜನಮಾನಸಕ್ಕೆ ತೆರೆದುಕೊಳ್ಳಲಿದೆ. ದೇವಭೂಮಿಯಲ್ಲಿ ಕಾಲಿಟ್ಟು ಈ ಕ್ಷೇತ್ರಗಳಿಗೆ ಭೇಟಿ ನೀಡದೆ ಹೋಗುವುದು ಸರಿಯಲ್ಲ ನೀವೆಲ್ಲರೂ ಅಲ್ಲಿಗೆ ಹೋಗಿಬಂದರೆ ಮನೆಯ ಮಕ್ಕಳೆಲ್ಲರಿಗೂ ಒಳ್ಳೆ ಭವಿಷ್ಯ ಮತ್ತು ಆರೋಗ್ಯದ ಭಾಗ್ಯ ದೊರೆಯುತ್ತದೆ. ಇದರ ಬಗ್ಗೆ ನೀನೇನು ಹೇಳುವೆ ಹರೀಶ.
ಹರೀಶ.....ನಾವೂ ಈ ಬಗ್ಗೆ ಯೋಚಿಸಿದ್ದೆವು ಆದರೆ ಕೇಧಾರನಾಥನ
ಕಪಾಟು ಯಾವಾಗ ತೆರೆಯುತ್ತದೆಂಬುದು ತಿಳಿದಿರಲಿಲ್ಲ. ಈಗ ನೀವು ಹೇಳಿದ ನಂತರ ಅರಿವಾಯಿತು ನಾವು ಖಂಡಿತವಾಗಿ ಚಾರ್ ದಾಮ್ ದರ್ಶನವನ್ನು ಮುಗಿಸಿಕೊಂಡೇ ಹಿಂದಿರುಗುತ್ತೇವೆ. ಗುರುಗಳೇ ನಿಮ್ಮ ಮುಂದಿನ ದರ್ಶನ ಯಾವಾಗ ಸಾಧ್ಯವಾಗಬಹುದು ?
ಆಚಾರ್ಯರು.....ನನ್ನ ಆಶ್ರಮದ ದ್ವಾರ ನಿಮಗಾಗಿ ಯಾವಾಗಲೂ ತೆರೆದಿರುತ್ತದೆ ಇನ್ನು ನಿನ್ನ ಹಿರಿ ಮಗಳಿಗೆ ಆಶ್ರಮಕ್ಕೆ ಬರುವ ದಾರಿ ಸಹ ತಿಳಿದಿದೆ ಯಾವಾಗ ಬೇಕಿದ್ದರೂ ಬರಬಹುದು. ದೇವಾನಂದ ತಿಂಗಳಿಗೊಮ್ಮೆ ನಿಮ್ಮಲ್ಲಿಗೆ ಬಂದು ನಿಮ್ಮೆಲ್ಲರ ಕುಶಲೋಪರಿಯನ್ನು ವಿಚಾರಿಸಿಕೊಂಡು ನಮಗೆ ತಿಳಿಸುತ್ತಾನೆ. ಮಗಳೇ ನೀತು ಇದನ್ನು ತೆಗೆದುಕೋ ಇದು ತಪೋಶಕ್ತಿಯ ನಿರ್ಮಲವಾದ ದ್ರವ್ಯ. ನೀವೆಲ್ಲರು ಮನೆಗೆ ತಲುಪಿದ ನಂತರ ಶುಕ್ರವಾರದಂದು ಇದನ್ನು ದೇವರೆದುರಿಗೆ ಇಟ್ಟು ಪೂಜೆ ಮಾಡಿ ಇಲ್ಲಿಗೆ ಆಗಮಿಸಿರುವ ಕುಟುಂಬದ ಸದಸ್ಯರಿಗೆ ಸೇವಿಸಲು ನೀಡಬೇಕು. ಈ ದ್ರವ್ಯವನ್ನು ಶುದ್ದವಾದ ಪಾತ್ರೆಯಲ್ಲಿ ಹಾಕಿ ಇಲ್ಲಿ ಕುಟುಂಬದ ಎಷ್ಟು ಜನ ಸದಸ್ಯರಿದ್ದಾರೋ ಅಷ್ಟೆ ಲೋಟ ನೀರನ್ನು ಬೆರಸಿದ ನಂತರ ಎಲ್ಲರೂ ಒಂದೊಂದು ಲೋಟವನ್ನು ಗ್ರಹಿಸಬೇಕು ಇದನ್ನು ಬೇರೆ ಯಾರಿಗೂ ಸಹ ನೀಡಬಾರದು ಅದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಗು ನಿಧಿ ಒಬ್ಬಳು ತಾಯಿಯಿಂದ ನಿನ್ನನ್ನು ನಮ್ಮ ಆಶ್ರಮದ ಸುಪರ್ಧಿಗೆ ತೆಗೆದುಕೊಂಡು ಈಗ ನಿನ್ನನ್ನು ಮತ್ತೊಬ್ಬ ತಾಯಿಯ ಮಡಿಲಿಗೆ ಒಪ್ಪಿಸುತ್ತಿರುವೆ. ಈ ತಾಯಿಯ ಮಮತೆಯ ಆಸರೆಯಲ್ಲಿ ಸುಖವಾಗಿರಮ್ಮ. ಪರಮೇಶ್ವರ ಮತ್ತು ಆದಿಶಕ್ತಿಯು ನಿಮ್ಮೆಲ್ಲರಿಗೂ ಸದಾಕಾಲ ಒಳ್ಳೆಯದನ್ನೇ ಮಾಡಲಿ.
ಪ್ರತಿಯೊಬ್ಬರೂ ಮೂವರು ಗುರುಗಳ ಚರಣಗಳಿಗೆ ಭಕ್ತಿಪೂರ್ವಕ ನಮಸ್ಕಾರ ಮಾಡಿದರೆ ಅವರೂ ಸಹ ಎಲ್ಲರಿಗೂ ಮನಃಪೂರ್ವಕ ಆಶೀರ್ವಧಿಸಿ ಹಾರೈಸಿ ಅಲ್ಲಿಂದ ಆಶ್ರಮಕ್ಕೆ ತೆರಳಿದರು.
* *
* *
ಹೋಟೆಲ್ ರೂಮಿಗೆ ಹಿಂದಿರುಗುವ ಮುನ್ನ ಎಲ್ಲರೂ ಊಟಕ್ಕಾಗಿ ಒಂದು ಕೌಟುಂಬಿಕ ರೆಸ್ಟೋರೆಂಟಿನಲ್ಲಿ ಕುಳಿತಾಗ ಶೀಲಾ....ರಜನಿ
....ಅನುಷ....ಸವಿತಾ ಮತ್ತು ಸುಕನ್ಯಾ ತಮ್ಮೊಂದಿಗೆ ನಿಧಿಯನ್ನು ಕೂರಿಸಿಕೊಂಡು ಮಾತನಾಡಿ ಪರಿಚಯ ಮಾಡಿಕೊಳ್ಳುತ್ತಿದ್ದರು. ಈಗ ನದಿಯಿಂದ ದೂರ ಬಂದಿದ್ದರಿಂದ ನಿಶಾ ಪುನಃ ಅಪ್ಪನ ಹೆಗಲ ಮೇಲೇರಿಕೊಂಡು ಟೇಬಲ್ಲಿನಲ್ಲಿಟ್ಟಿರುವ ತಿಂಡಿಗಳಲ್ಲಿ ತನಗೇನೇನು ಬೇಕೋ ಅದನ್ನು ತೋರಿಸಿ ಅಪ್ಪನಿಂದಲೇ ತಿನ್ನಿಸಿಕೊಳ್ಳುತ್ತಿದ್ದಳು. ಊಟ ಚಾಕು...ಚಾಕು...ಎಂದ ನಿಶಾ ಅಪ್ಪನ ಕಿವಿಯಲ್ಲಿ ಐಸ್ ಐಸ್
ಎಂದು ಪಿಸುಗುಟ್ಟಿದರೆ ಎದುರಿಗೆ ನೀತು ಅಪ್ಪ ಮಗಳನ್ನು ನೋಡುತ್ತ
ಊಟ ಮಾಡುತ್ತಿದ್ದಳು.
ಎಲ್ಲರೂ ಲಾಡ್ಜಿಗೆ ತಲುಪಿದಾಗ ನೀತು ತನ್ನೊಂದಿಗೆ ನಿಧಿಯನ್ನು ಸಹ ತಮ್ಮ ರೂಮಿಗೆ ಕರೆದೊಯ್ದರೆ ನಿಶಾ ಕೂಡ ಅಮ್ಮನ ಹಿಂದೆ ಓಡಿ ಬಂದಳು.
ನೀತು.....ಏನಮ್ಮ ಇದೊಂದೇ ಬ್ಯಾಗನ್ನು ತಂದಿರುವೆ ?
ನಿಧಿ.....ನನ್ನ ಹತ್ತಿರ ಇರುವುದು ಆರು ಜೊತೆ ಬಟ್ಟೆಗಳು ಅದನ್ನಿಡಲು ಒಂದೇ ಬ್ಯಾಗ್ ಸಾಕಲ್ಲವಾ ಅಮ್ಮ.
ನೀತು.....ಆಶ್ರಮದಲ್ಲಿ ನಿನಗೇನು ಅವಶ್ಯಕತೆಯಿತ್ತೆಂಬುದು ನನಗೆ ತಿಳಿಯದು ಆದರೀಗ ನೀನು ನಿನ್ನ ಮನೆಯಲ್ಲಿರುವೆ ಅದಕ್ಕೆ ಇನ್ನೂ ಬಟ್ಟೆಗಳು ಬೇಕಾಗಿದೆ.
ನಿಧಿ.....ಆರು ಚೂಡಿದಾರ್ ಇದೆಯಲ್ಲ ಅಷ್ಟು ಸಾಕಮ್ಮ.
ನೀತು.....ನನ್ನ ಮಗಳು ಹಾಕಿದ್ದನ್ನೇ ಹಾಕುತ್ತಿದ್ದರೆ ಅಮ್ಮನಾಗಿ ನಾನು
ಹೇಗೆ ನೋಡಿಕೊಂಡಿರಲಿ. ಈಗ ಸ್ವಲ್ಪ ರೆಸ್ಟ್ ತೆಗೆದುಕೋ ಸಂಜೆ ನಾವು ಹೋಗಿ ಸ್ವಲ್ಪ ಬಟ್ಟೆ ತೆಗೆದುಕೊಂಡು ಬರೋಣ ಮಿಕ್ಕಿದ್ದನ್ನು ದೆಹಲಿ ಅಥವ ನಮ್ಮೂರಿಗೆ ಹೋದ ಮೇಲೆ ತೆಗೆದುಕೊಳ್ಳೋಣ.
ಸುರೇಶ ರೂಮಿನೊಳಗೆ ಬಂದು....ಅಮ್ಮ ಅಕ್ಕನ ಜೊತೆ ಸರಿಯಾಗಿ ಮಾತನಾಡಲು ಮಹಿಳಾ ತಂಡದವರು ನನಗೆ ಅವಕಾಶ ನೀಡಲಿಲ್ಲ ಅದಕ್ಕೆ ಇಲ್ಲಿಗೆ ಬಂದೆ.
ನಿಧಿ ತಮ್ಮನ ತಲೆ ಸವರಿ.....ಕೈಗೇನು ಮಾಡಿಕೊಂಡೆ ?
ಸುರೇಶ.....ಇದಾ ಅಕ್ಕ ಸಣ್ಣ ಆಕ್ಸಿಡೆಂಟ್ ಆಗಿತ್ತು.
ನಿಶಾ ತಟ್ಟನೆ.....ಅಕ್ಕ ಅಕ್ಕ....ನಾನಿ ಬಿದ್ದಿ....ಢಂ....ಬಿದ್ದಿ...ಎಂದೇಳಿ
ತನ್ನ ಕೈ ಕಾಲುಗಳನ್ನು ತೋರಿಸತೊಡಗಿದಳು.
ನಿಧಿ.....ಅಮ್ಮ ನಾನು ಸ್ವಲ್ಪ ಹೊತ್ತು ತಮ್ಮ ತಂಗಿಯರ ಜೊತೆಗಿದ್ದು ಬರ್ತೀನಿ.
ನಿಶಾ ಚಂಗನೇ ನೆಗೆದು....ನಾನು....ನಾನು...
ನೀತು.....ಹೋಗಿ ಬಾರಮ್ಮ ಅವರೂ ನಿನ್ನ ಜೋತೆ ಮಾತನಾಡಲು ಕಾಯುತ್ತಿದ್ದಾರೆ ಇವನನ್ನು ಒಳಗೆ ಕಳಿಸಿ ಎಲ್ಲಾ ನೋಡಲ್ಲಿ ಬಾಗಿಲ ಆಚೆಯೇ ನಿಂತಿದ್ದಾರೆ. ಇನ್ನು ನೀನು ಚಿನ್ನಿ ಮಂಚ ಹತ್ತಿ ಮಲಗಿಕೋ ಇಲ್ಲಾಂದ್ರೆ ಸಂಜೆ ಟಾಟಾ ಕರ್ಕೊಂಡು ಹೋಗಲ್ಲ ಅಷ್ಟೆ.
ಅಮ್ಮ ಮೆಲ್ಲನೆ ಗದರಿದ್ದೇ ತಡ ಮಂಚವೇರಿ ದಬ್ಬಾಕಿಕೊಂಡ ನಿಶಾ ನಿಮಿಷದೊಳಗೇ ಆಯಾಸಗೊಂಡಿದ್ದರಿಂದ ನಿದ್ರೆಗೆ ಜಾರಿದಳು. ನಿಧಿ ತನ್ನಿಬ್ಬರು ತಮ್ಮಂದಿರು ಮತ್ತು ರಶ್ಮಿ...ನಿಕಿತಾ ಹಾಗು ನಮಿತಾಳನ್ನು ಪರಿಚಯ ಮಾಡಿಕೊಂಡು ಅವರೊಡನೆ ಮಾತನಾಡುತ್ತ ಕುಳಿತಳು.
ನೀತು ಗಂಡನಿಗೆ ಮಗಳೊಟ್ಟಿಗೆ ಮಲಗಿರಲು ತಿಳಿಸಿ ರೂಮಿನಿಂದ ಕೆಳಗೆ ಬಂದಾಗ ಹೋಟೆಲ್ಲಿನ ಲಾಬಿಯಲ್ಲಿ ವಿಕ್ರಂ ಸಿಂಗ್ ಅವಳು ಬರುವುದನ್ನೇ ಕಾದು ಕುಳಿತಿದ್ದನು.
ನೀತು.....ವಿಕ್ರಂ ನಾವು ರೆಸ್ಟೋರೆಂಟಲ್ಲಿ ಕುಳಿತು ಮಾತನಾಡೋಣ ಅಂದ ಹಾಗೆ ಭಾನುಪ್ರಕಾಶ್ ವಿಷಯವಾಗಿ ಏನಾದರು ಸುದ್ದಿ ?
ವಿಕ್ರಂ ಸಿಂಗ್.....ಹೂಂ ಮೇಡಂ ಇದು ಅವರ ಫೋನ್ ಡೀಟೇಲ್ಸ್ ಇಲ್ಲಿ ಮೊದಲು ಕಾಣುತ್ತಿರುವ ನಂ.. ಭಾನುಪ್ರಕಾಶ್ ಅವರ ಅಕ್ಕ ಚಂಚಲಾದೇವಿ ಅವರದ್ದು. ಪ್ರತಿದಿನ ಅಕ್ಕನ ಜೊತೆ ಭಾನುಪ್ರಕಾಶ್ ಕನಿಷ್ಠ 8—10 ಬಾರಿ ಮಾತನಾಡುತ್ತಾರೆ.
ನೀತು.....ಈ ಚಂಚಲಾದೇವಿ ಈಗೆಲ್ಲಿದ್ದಾರೆ ? ಅವರ ಹಿನ್ನೆಲೆ ಏನು ?
ವಿಕ್ರಂ ಸಿಂಗ್.....ಚಂಚಲಾದೇವಿ ಮಹಾರಾಜ ಸೂರ್ಯಪ್ರಕಾಶರ ತಂಗಿ ಭಾನುಪ್ರತಾಪರಿಗಿಂತ ಹಿರಿಯವರು. ಅವರ ಮದುವೆ ಕೂಡ ಹಿಮಾಚಲ ಪ್ರದೇಶದ ರಾಜಕುಟುಂಬದಲ್ಲಿಯೇ ಆಗಿದೆ. ಅಲ್ಲಿನ ಮಹಾರಾಜರಾಗಿದ್ದ ವೀರಸಿಂಗ್ ಅವರ ಎರಡನೇ ಮಗನಾದ ಶೇರ್ ಸಿಂಗ್ ಜೊತೆ ಚಂಚಲಾದೇವಿಯವರ ವಿವಾಹ ಆಗಿರುವುದು. ಆದರೆ ಅವರ ರಾಜಮನೆತನದ ಆಸ್ತಿಗಳು ಸೂರ್ಯವಂಶಕ್ಕೆ ಹೋಲಿಸಿದರೆ ಏನೂ ಅಲ್ಲವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಕಡಿಮೆ. ನನಗೆ ತಿಳಿದಂತೆ ಚಂಚಲಾದೇವಿಯವರು ತಮ್ಮ ಭಾನುಪ್ರತಾಪರಿಗೆ ಹತ್ತಿರವಾಗಿದ್ದರೆ ಅಣ್ಣನಾದ ಸೂರ್ಯಪ್ರತಾರರೊಂದಿಗೆ ಅವರ ಒಡನಾಟ ಅಷ್ಟಾಗಿ ಚೆನ್ನಾಗಿರಲಿಲ್ಲ. ಅವರು ವಿವಾಹವಾಗಿ ಹಿಮಾಚಲಕ್ಕೆ ತೆರಳಿದ ಬಳಿಕ 4 — 5 ಬಾರಿಯಷ್ಟೆ ರಾಜಸ್ಥಾನದ ತವರಿಗೆ ಬಂದಿರಬಹುದು. ಇನ್ನು ಮಹಾರಾಜ ರಾಣಾಪ್ರತಾಪರ ಮದುವೆಯ ಸಮಯದಲ್ಲಿಯೂ ಅವರು ಸ್ವಂತ ಸೋದರತ್ತೆ ಆಗಿದ್ದರೂ ಸಹ ಒಂದು ದಿನದ ಮಟ್ಟಿಗೆ ಬಂದು ವಿವಾಹದಲ್ಲಿ ಹೊರಗಿನವರಂತೆ ಪಾಲ್ಗೊಂಡು ಹಿಂದಿರುಗಿ ಹೋಗಿದ್ದರು.
ನೀತು.....ಈ ಚಂಚಲಾದೇವಿ ಬಗ್ಗೆ ನನಗೆ ಸಂಪೂರ್ಣ ಮಾಹಿತಿಗಳು ಬೇಕು. ಅವರ ಗಂಡ ಮನೆ ಮಕ್ಕಳು ಅವರಿಗಿರುವ ವರ್ಚಸ್ಸು ಪ್ರತೀ ವಿಷಯದ ಬಗ್ಗೆ ವಿವರವಾಗಿ ತಿಳಿಯಬೇಕು. ಇವರ ಜೊತೆ ಭಾನು ಅವರನ್ನೂ ಪ್ರತಿಗಳಿಗೆಯೂ ನಿಮ್ಮವರು ಹಿಂಬಾಲಿಸುತ್ತಿರಲಿ ಅವರು ಏನೇ ಮಾಡಲಿ....ಎಲ್ಲಿಗೇ ಹೋಗಲಿ...ಯಾರನ್ನೇ ಬೇಟಿಯಾಗಲಿ ಅದರ ಸಂಪೂರ್ಣ ವಿವರ ಕಲೆಹಾಕಿ. ಅಕ್ಕನ ಜೊತೆ ಪ್ರತಿದಿನವೂ ಮಾತನಾಡುವಂತದ್ದೇನಿದೆ ಎಂಬುದನ್ನು ತಿಳಿಯಲು ಪ್ರಯತ್ನಿಸಿ.
ವಿಕ್ರಂ ಸಿಂಗ್.....ಚಂಚಲಾದೇವಿಯವರ ವಿವರಗಳನ್ನು ಕಲೆಹಾಕಲು ಆಗಲೇ ನಮ್ಮವರು ಹಿಮಾಚಲಕ್ಕೆ ತೆರಳಿದ್ದಾರೆ ಅದರ ಜೊತೆ ಭಾನು ಅವರ ಮೇಲೂ ನಮ್ಮವರ ಕಣ್ಣು ಇಪ್ಪತ್ನಾಲ್ಕು ಘಂಟೆಯೂ ಇದೆ. ಅವರ ಮಾತುಕತೆಯ ವಿವರಗಳನ್ನು ತಿಳಿದುಕೊಳ್ಳಲು ನಾವು ತುಂಬ ಪ್ರಯತ್ನಿಸಿದೆವು ಆದರೆ ಇನ್ನೂ ಸಫಲರಾಗಿಲ್ಲ.
ನೀತು.....ಅದಕ್ಕೂ ಏನಾದರು ದಾರಿ ಹುಡುಕಬೇಕಾಗಿದೆ ಅವರಿಬ್ಬರ ಮಾತಿನ ವಿವರಗಳು ತಿಳಿದುಕೊಳ್ಳುವುದು ತುಂಬ ಅವಶ್ಯಕ.
ವಿಕ್ರಂ ಸಿಂಗ್.....ಇಬ್ಬರು ಮಹಾರಾಜ ಮಹಾರಾಣಿಯರನ್ನು ಕೊಂದ ಪಾಪಿಗಳಿಗೆ ನಿಮ್ಮ ಬಗ್ಗೆ ತಿಳಿದುಕೊಳ್ಳುವುದು ಕಷ್ಟವೇನಿಲ್ಲ ಅದಕ್ಕೆ ನಿಮ್ಮ ಊರಿನಲ್ಲೂ ನಮ್ಮವರನ್ನು ಕಾವಲಿಗೆ ಕಳುಹಿಸಬಹುದಾ ?
ನೀತು.....ನೀನು ಯೋಚಿಸುವುದರಲ್ಲೂ ತಪ್ಪಿಲ್ಲ ಆದರೆ ಸಧ್ಯಕ್ಕೇನು ಬೇಡ ಮುಂದೆ ಅವಶ್ಯಕತೆಯಿದ್ದರೆ ನಾನೇ ಕರೆಸಿಕೊಳ್ಳುವೆ. ಅಂದ ಹಾಗೆ ಸಂಸ್ಥಾನದ ಅಧೀನದಲ್ಲಿ ಎಷ್ಟು ಜನ ಸೆಕ್ಯೂರಿಟಿಗಿದ್ದಾರೆ ?
ವಿಕ್ರಂ ಸಿಂಗ್....ಸೂರ್ಯವಂಶದ ಸಂಸ್ಥಾನದ ಅಧೀಶದಲ್ಲಿರುವಂತ ಎಲ್ಲಾ ಫ್ಯಾಕ್ಟರಿ.....ಹೋಟೆಲ್...ಶಾಪಿಂಗ್ ಮಾಲ್ ಮತ್ತು ಇತರೆ ವ್ಯಾವಹಾರಿಕ ಸ್ಥಳಗಳ ಜೊತೆ ನಾಲ್ಕು ಅರಮನೆಗಳಿಗೂ ಒಟ್ಟಾಗಿ 4750 ಜನ ಸೆಕ್ಯೂರಿಟಿದ್ದಾರೆ. ಇವರಲ್ಲದೆ ರಾಜಮನೆತನದವರಿಗೆ ಕಾವಲು ನೀಡುವುದಕ್ಕಾಗಿ ಪ್ರತ್ಯೇಕವಾದ ತಂಡದವರಿದ್ದಾರೆ. ಅವರ ನಿಷ್ಠೆ ಸಂಪೂರ್ಣವಾಗಿ ರಾಜಮನೆತನದ ಒಳಿತಿಗಾಗಿ ಮೀಸಲಾಗಿದೆ. ರಾಜಮನೆತನಕ್ಕಾಗಿ ಪ್ರಾಣ ಕೊಡುವುದಕ್ಕೂ ಹಿಂಜರಿಯುವುದಿಲ್ಲ ಜೊತೆಗೆ ಪ್ರಾಣ ತೆಗೆಯಲೂ ಯೋಚಿಸುವುದಿಲ್ಲ. ಇವರೇ 650 ಜನ ಇದ್ದಾರೆ ಅವರಲ್ಲಿ 150 ಜನ ಪ್ರತ್ಯೇಕವಾಗಿ ಜೈಸಲ್ಮೇರಿನ ಅರಮನೆ ಆವರಣದಲ್ಲಿರುವ ಅತಿಥಿ ಗೃಹದಲ್ಲಿದ್ದಾರೆ. ಅವರನ್ನು ವಿಶೇಷವಾದ ಸಂಧರ್ಭಗಳಲ್ಲಿ ಮಾತ್ರ ಮಹಾರಾಜರು ಬಳಸಿಕೊಳ್ಳುತ್ತಿದ್ದರು. ಇವರೆಲ್ಲರು ತುಂಬ ಶಕ್ತಿವಂತರಾಗಿರುವ ಜೊತೆಗೆ ತುಂಬ ಚಾಣಾಕ್ಷರು ಅವರ ನಾಯಕ ದಿಲೇರ್ ಸಿಂಗ್ ಅಂತ ರಾಣಾಪ್ರತಾರರ ಅತ್ಯಂತ ವಿಶ್ವಾಸಪಾತ್ರ ವ್ಯಕ್ತಿ. ನಿಜ ಹೇಳಬೇಕೆಂದರೆ ನನಗಿಂತಲೂ ದಿಲೇರ್ ಸಿಂಗ್ ಒಂದು ಕೈ ಮೇಲು. ರಾಜಕುಮಾರಿ ನಿಶಾ ಮತ್ತು ನಿಮ್ಮ ಬಗ್ಗೆ ತಿಳಿದಾಗಿನಿಂದಲೂ ಅವನು ನಿಮ್ಮನ್ನು ಬೇಟಿಯಾಗಲು ತುಂಬಾ ಕಾತುರನಾಗಿದ್ದಾನೆ.
ನೀತು.....ನಾವೂ ಸಾಧ್ಯವಾದಷ್ಟು ಬೇಗ ಜೈಸಲ್ಮೇರಿಗೆ ಹೋಗೋಣ ಆದರೀಗ ನನಗೆ ಸಾಧ್ಯವಿಲ್ಲ ನಾನು ಬರುವ ಮುನ್ನ ತಿಳಿಸುತ್ತೇನೆ. ನೀನೀಗ ಹೊರಡು ವಿಕ್ರಂ ನಿನ್ನ ವಿಶ್ವಾಸದ ಜನರಿಗೆ ಭಾನುಪ್ರತಾಪ್ ಮತ್ತು ಚಂಚಲಾದೇವಿ ಇಬ್ಬರ ಹಿಂದೆ 24 ಘಂಟೆ ನಿಯೋಜಿಸು.
ವಿಕ್ರಂ ಸಿಂಗ್ ತೆರಳಿದಾಗ ನೀತು ಕುಳಿತಿದ್ದ ಟೇಬಲ್ಲಿಗೆ ಬಂದ.....
ನಿಧಿ......ಅಮ್ಮ ನನ್ನನ್ನು ಹೆತ್ತವಳ್ಯಾರೆಂದು ನನಗೆ ಗೊತ್ತಿಲ್ಲ ನಂತರ ನನಗೆ ತಾಯಿಯ ಪ್ರೀತಿಯನ್ನು ಧಾರೆಯೆರೆದ ಸುಧಾ ಅಮ್ಮ ಕೂಡ ನನ್ನನ್ನು ಒಂಟಿಯಾಗಿಸಿ ಹೊರಟು ಹೋದರು. ಇದೆಲ್ಲವೂ ಕೇವಲ ರಾಜಮನೆತನದ ಆಸ್ತಿಗಾಗಿ ನಡೆಯುತ್ತಿದೆ ನಮಗೇನೂ ಬೇಡಾಮ್ಮ. ಇವರೆಲ್ಲರ ವಿರುದ್ದ ಹೋರಾಡುತ್ತ ನಿಮಗೇನಾದರೂ ಸಂಭವಿಸಿದರೆ ನಾನು ಬದುಕಿರಲಾರೆ ಇನ್ನು ಚಿನ್ನಿಯ ಬಗ್ಗೆ ಯೋಚಿಸಿ.
ನೀತು ಮಗಳ ಕೆನ್ನೆ ಸವರಿ......ನನಗೇನೂ ಆಗುವುದಿಲ್ಲ ಕಣಮ್ಮ ಏಕೆಂದರೆ ವಿರೋಧಿಗಳ್ಯಾರೆಂದು ನಾನು ಊಹಿಸಿರುವೆ ನೀನು ನನ್ನ ಬಗ್ಗೆ ಚಿಂತಿಸದಿರು. ಇನ್ನೂ ನಿನ್ನ ಮತ್ತು ಚಿನ್ನಿ ಜೊತೆ ನಾನು ಬಹಳ ವರ್ಷ ಬಾಳಿ ಬದುಕಬೇಕಿದೆ. ರಾಜಮನೆತನದ ಆಸ್ತಿಯನ್ನು ನಾವು ತ್ಯಜಿಸಿದರೆ ಎಲ್ಲವೂ ಸರ್ಕಾರದ ಪಾಲಾಗಲಿದೆಯೇ ಹೊರತು ಆ ವಿರೋಧಿಗಳಿಗೆ ಏನೂ ದೊರಕುವುದಿಲ್ಲ. ಅದರಿಂದ ರಾಜಮನೆತನ ಮತ್ತು ಅಲ್ಲಿನ ಕೆಲಸವನ್ನೇ ನಂಬಿಕೊಂಡು ಬಾಳುತ್ತಿರುವ ಸಾವಿರ ಕುಟುಂಬಗಳು ಬೀದಿ ಪಾಲಾಗಿ ಹೋಗುತ್ತಾರೆ ಅದು ನಿನಗೆ ಬೇಕ ? ಆಸ್ತಿಯನ್ನು ನಾವು ಬೇಡವೆಂದರೂ ವಿರೋಧಿಗಳು ಸುಮ್ಮನಾಗಿ ಬಿಡುತ್ತಾರೆಂದು ನೀನು ಹೇಗೆ ಊಹಿಸಿರುವೆ ನೀವು ಬದುಕಿರುವಷ್ಟು ದಿನವೂ ಅವರೆಲ್ಲರೂ ಆಸ್ತಿ ಕಬಳಿಸಲು ಶತಪ್ರಯತ್ನ ಮಾಡುತ್ತಾರೆ. ಅದಕ್ಕಿರುವುದೊಂದೇ ಮಾರ್ಗ ಎಲ್ಲಾ ವಿರೋಧಿಗಳನ್ನೂ ಅವರು ಮಾಡಿದ ಪಾಪಗಳಿಗಾಗಿ ಮರಣದಂಡನೆ ನೀಡುವುದೇ ಆಗಿದೆ. ಇದು ನಿನ್ನ ಮತ್ತು ನಿಶಾಳ ಹಕ್ಕು ನಿಮ್ಮಿಬ್ಬರಿಂದ ಇದನ್ನು ಯಾರೂ ಕಬಳಿಸಲು ನಾನು ಅವಕಾಶವನ್ನೇ ನೀಡುವುದಿಲ್ಲ.
ನಿಧಿ......ಸರಿ ಅಮ್ಮ ನೀವು ಹೇಳಿದಂತೆಯೇ ಆಗಲಿ ಆದರೆ ನೀವು ಎಲ್ಲಿಗೇ ಹೋದರೂ ನಾನು ನಿಮ್ಮ ರಕ್ಷಣೆಗೆ ಬರುತ್ತೇನೆ ಅಷ್ಟೆ.
ನೀತು ಮುಗುಳ್ನಗುತ್ತ......ತಾಯಿ ಮಗಳನ್ನು ರಕ್ಷಿಸಬೇಕು ಎಂಬುದು ನಿಯಮ ಕಣಮ್ಮ.
ನಿಧಿ.....ಅಮ್ಮ ಆಶ್ರಮದಲ್ಲಿ ಎಂತಹುದೇ ಕ್ಲಿಷ್ಟಕರವಾದ ಪರಿಸ್ಥಿತಿ ಎದುರಾದರೂ ನಿಭಾಯಿಸುವಷ್ಟು ನನ್ನನ್ನು ಸಕ್ಷಮಗೊಳಿಸಿದ್ದಾರೆ. ನನ್ನ ತಮ್ಮ ತಂಗಿ ಮತ್ತು ಅಪ್ಪನಿಗೆ ಪೆಟ್ಟಾಗುವಂತೆ ಮಾಡಿರುವವರ ವಿರುದ್ದವೇ ನಾವು ಮೊದಲು ಸೇಡು ತೀರಿಸಿಕೊಳ್ಳಬೇಕು.
ನೀತು......ಊರಿಗೆ ಮರಳಿದ ನಂತರ ನಾನು ಮೊದಲಿಗೆ ಮಾಡುವ ಕೆಲಸವೇ ಅದು ನೀನೂ ಜೊತೆಯಲ್ಲಿರುವಂತೆ ಆದರೆ ನಾನೇನು ಹೇಳುತ್ತೀನೋ ಅಷ್ಟನ್ನು ಮಾತ್ರ ಮಾಡಬೇಕು. ಈಗ ನಡಿ ನಿನಗೆ ಸ್ವಲ್ಪ ಶಾಪಿಂಗ್ ಮಾಡಿಕೊಂಡು ಬರೋಣ.
* *
* *
ನಿಶಾ ಅಪ್ಪನ ಮೇಲೇರಿ ಮಲಗಿರುವುದನ್ನು ನೋಡಿ ನೀತು ನಗುತ್ತ ಗಂಡನಿಗೆ ತಾನು...ನಿಧಿ...ಸವಿತಾ ಮತ್ತು ನಿಕಿತಾ ಶಾಪಿಂಗಿಗಾಗಿ ಹೋಗುತ್ತಿರುವೆವು ಅಂತ ತಿಳಿಸಿದಳು.
ಹರೀಶ.....ಲೇ ನನ್ನ ಬಂಗಾರಿ ಎದ್ದರೆ ಮೊದಲು ಕೇಳುವುದು ನಿನ್ನನ್ನೆ ನಾನೇನು ಮಾಡಲಿ.
ನೀತು.....ರೀ ನನ್ನ ಮುದ್ದಿನ ಮಗಳು....ಚಿನ್ನ....ರನ್ನ....ಬಂಗಾರಿ ಅಂತ ಏನೇನೋ ಹೇಳ್ತೀರಲ್ಲ ಸ್ವಲ್ಪ ಹೊತ್ತು ನಿಮಗೆ ಮಗಳನ್ನು ನಿಭಾಯಿಸಲು ಆಗಲ್ಲವಾ ನಾವು ಹೋಗಿ ಬರುತ್ತೀವಿ.
ಹೆಂಡತಿ ತೆರಳಿದ ಸ್ವಲ್ಪ ಹೊತ್ತಿನ ಬಳಿಕ ಎಚ್ಚರಗೊಂಡ ಮಗಳನ್ನು ಮುದ್ದಾಡಿದ ಹರೀಶ ಅವಳನ್ನು ಫ್ರೆಶಾಗಿಸಿದರೆ ಅನುಷ ಅವಳನ್ನು ರೆಡಿ ಮಾಡಿದಳು.
ನಿಶಾ.....ಪಪ್ಪ ಮಮ್ಮ ಲೆಲ್ಲಿ ?
ಹರೀಶ.....ನಿಮ್ಮಮ್ಮ ಅಕ್ಕ ಹೊರಗೆ ಹೋಗಿದ್ದಾರೆ ನಾನು ನೀನು ಅಕ್ಕ ಎಲ್ಲರೂ ಟಾಟಾ ಹೋಗಿ ಬರೋಣ ಜೊತೆಗೆ ಐಸ್....ಚೀಯ ಎಲ್ಲಾ ತಿನ್ನೋಣ.
ನಿಶಾ ಖುಷಿಯಿಂದ.....ಪಪ್ಪ ಚಿಯಾ ( ಸ್ವೀಟ್ಸ್ )ಬೇಕು ಬೇಕು...
ಹರೀಶ...ರವಿ...ಅಶೋಕ ಮತ್ತು ಶೀಲಾ ಎಲ್ಲಾ ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೊರಗೆ ಸುತ್ತಾಡಲು ಹೊರಟರೆ ರಜನಿ ಸುಕನ್ಯಾ ತಾವು ಹೋಟೆಲ್ಲಿನಲ್ಲೇ ಉಳಿಯುವುದಾಗಿ ಹೇಳಿದರು.
* *
* *
ನೀತು.....ನೀನಿಲ್ಲಿವರೆಗೂ ಜೀನ್ಸೇ ಹಾಕಿಲ್ಲವಾ ?
ನಿಧಿ......ಅಮ್ಮ ಆಶ್ರಮದಲ್ಲಿ ಜೀನ್ಸ್ ಹಾಕಲು ಅವಕಾಶವಿರಲಿಲ್ಲ ನಿಮಗೇನೂ ಅಭ್ಯಂತರವಿಲ್ಲ ಅಂದರೆ ನಾನೀಗ ಹಾಕಲು ರೆಡಿ.
ಸವಿತಾ.....ನಿಮ್ಮಮ್ಮನೇ ಜೀನ್ಸ್ ಹಾಕ್ತಾಳೆ ಇನ್ನು ನೀನು ಹಾಕಿದರೆ ಬೇಡ ಅಂತಾಳಾ ಬಿಂದಾಸ್ ಹಾಕ್ಕೋ.
ನಿಕಿತಾ.....ಅಕ್ಕ ನಾನೂ ಮೊದಲು ಜೀನ್ಸ್ ಬೇಡ ಅಂತಿದ್ದೆ ಆಮೇಲೆ ಆಂಟಿಯೇ ಬೈದರು. ಜೀನ್ಸ್ ಹಾಕಿಕೊಂಡಾಗ ಶರ್ಟು ಟೀಶರ್ಟನ್ನೇ ಹಾಕಬೇಕೆಂದಿಲ್ಲ ಜೀನ್ಸ್ ಮೇಲೆ ಶಾರ್ಟ್ ಟಾಪ್ಸ್ ಅಥವ ಚೂಡಿಯ ಟಾಪನ್ನೂ ಹಾಕಿಕೊಳ್ಳಬಹುದು ಅಂತ ಈಗ ನಾನೂ ಕೂಡ ಜೀನ್ಸ್ ಹಾಕ್ತೀನಿ.
ನಿಧಿ....ನಿಕ್ಕಿ ನಿನಗೆ ಜೀನ್ಸ್ ಚೆನ್ನಾಗಿಯೂ ಕಾಣಿಸುತ್ತೆ.
ನಿಕಿತಾ.....ಅಕ್ಕ ನೀವು ಕಂಪ್ಲೀಟ್ ಫಿಟ್ಟಾಗಿದ್ದೀರ ನಿಮಗಂತು ಜೀನ್ಸ್ ಪರ್ಫೆಕ್ಟಾಗಿ ಕಾಣಿಸುತ್ತೆ ಹಾಕಿ ನೋಡಿ.
ಹಿರಿಮಗಳು ನಿಧಿಗೆ 8 —10 ಜೊತೆ ಬಟ್ಟೆಗಳ ಜೊತೆ ಒಳ ಉಡುಪು ಖರೀಧಿಸಿದ ನೀತು ಬಲವಂತ ಮಾಡಿ ನಿಕಿತಾಳಿಗೂ ನಾಲ್ಕು ಜೊತೆ ಬಟ್ಟೆ ತೆಗೆದುಕೊಟ್ಟಳು. ನಾಲ್ವರೂ ಖರೀಧಿ ಮಾಡಿಕೊಂಡು ಮರಳಿ ಹೋಟೆಲ್ಲಿಗೆ ತಲುಪಿದಾಗ ಹರೀಶನ ಜೊತೆ ಮಿಕ್ಕವರು ಹಿಂದಿರುಗಿ ಬರುತ್ತಿದ್ದರು. ಎಲ್ಲರು ಹೋಟೆಲ್ಲಿನ ಹೊರಗೇ ಬೇಟಿಯಾದಾಗ......
ಅಶೋಕ.....ನೀತು ನಾಳಿದ್ದು ನಾವು ಚಾರ್ ದಾಮ್ ಯಾತ್ರೆಗಾಗಿ ಒಂದು ಮಿನಿ ಬಸ್ ಬುಕ್ ಮಾಡಿದ್ದೀವಿ. ಡೆಹ್ರಾಡೂನ್...ಮಸ್ಸೂರಿ
....ಹೃಷಿಕೇಶ....ಪಂಚ ಪ್ರಯಾಗಗಳ ನಂತರ ಯಮುನೋತ್ರಿ.... ಗಂಗೋತ್ರಿ...ಬದ್ರಿನಾಥ ಮತ್ತು ಕೇಧಾರನಾಥನ ದರ್ಶನ ಮಾಡಿಸಿ ದೆಹಲಿಯ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡುತ್ತಾರೆ.
ರವಿ.....ಆ ಕಡೆ ತುಂಬ ಚಳಿಯಂತೆ ನಾವ್ಯಾರೂ ಬೆಚ್ಚಗಿನ ಸ್ವೆಟರನ್ನೇ ತಂದಿಲ್ಲ ನಾಳೆ ಎಲ್ಲರೂ ಹೋಗಿ ಖರೀಧಿಸಬೇಕು.
ನಿಧಿ.....ಅಂಕಲ್ ಆ ಭಾಗದ ಚಳಿ ಸ್ವೆಟರಿನಿಂದ ತಡೆಯಲಾಗದು ಏನಿದ್ದರು ಒಳ್ಳೆ ಕ್ವಾಲಿಟಿಯ ಜರ್ಕಿನ್ ತೆಗೆದುಕೊಳ್ಳಬೇಕು.
ನೀತು.....ನೀನು ಮೊದಲೇ ಹೇಳಿದ್ದರೆ ನಾವು ನಮಗೆಲ್ಲಾ ಜರ್ಕಿನ್ ತೆಗೆದುಕೊಂಡು ಬರಬಹುದಿತ್ತು ಗಂಡಸರು ನಾಳೆ ತಗೋತಿದ್ರು.
ನಿಧಿ......ಅಮ್ಮ ಈ ಭಾಗದ ಚಳಿಯ ಬಗ್ಗೆ ನಿಮಗೆ ತಿಳಿದಿರುತ್ತೆಂದು ನಾನು ಸುಮ್ಮನಿದ್ದೆ.
ಹರೀಶ......ಹೋಗಲಿ ಬಿಡಮ್ಮ ನಾಳೆ ಎಲ್ಲರೂ ಹೋಗಿ ಖರೀಧಿ ಮಾಡೋಣ . ಇವತ್ತು ತುಂಬ ಆಶ್ಚರ್ಯಕರ ಘಟನೆ ನಡೆಯಿತು ಕಣೆ ನೀತು. ನಿನ್ನ ಲಿಲಿಪುಟ್ ಮೊದಲ ಬಾರಿಗೆ. ಐಸ್ ಕ್ರೀಂ ಬೇಡ ಅಂತ ದೂರ ತಳ್ಳಿಬಿಟ್ಟಳು ಗೊತ್ತ.
ನೀತು.....ನನ್ನ ಮಗಳು ಐಸ್ ಬೇಡ ಅನ್ನೋದ ಸಾಧ್ಯವೇ ಇಲ್ಲ.
ಶೀಲಾ.....ಇಲ್ಲ ಕಣೆ ನಿಜ ಹೊರಗೆ ಛಳಿ ಇದೆಯಲ್ಲ ಐಸ್ ಬಾಯಿ ಒಳಗೆ ಹಾಕಿದ ತಕ್ಷಣ ಥೂ.... ಕುಳು ಕುಳು ಅಂತ ಉಗಿದು ನಂಗೆ ಬೇಡ...ಬೇಡ...ಅಂತ ದೂರ ತಳ್ಳಿಬಿಟ್ಟಳು.
ನೀತು.....ಎಲ್ಲಿ ನನ್ನ ಬಂಗಾರಿ ?
ಅನುಷ.....ಅಕ್ಕ ಅಲ್ಲಿ ಅಣ್ಣನ ಜೊತೆ ನೀರಿನ ಫೈಟೇಂನ್ ನೋಡುತ್ತ ಕಿರುಚಾಡುತ್ತಿರುವುದು ನಿಮಗೆ ಕೇಳಿಸುತ್ತಿಲ್ಲವಾ ಅಲ್ಲಿ ನೋಡಿ.
ರವಿ.....ಗಿರೀಶ ಎಲ್ಲರೂ ಒಳಗೆ ಬನ್ನಿ ಛಳಿ ಜಾಸ್ತಿಯಾಗುತ್ತಿದೆ ಬೇಗ ಊಟ ಮಾಡಿ ಮಲಗೋಣ.
ಊಟವಾದ ನಂತರ.....
ಸುರೇಶ.....ಅಮ್ಮ ನಾನೀವತ್ತು ಅಕ್ಕನ ಜೊತೆ ಮಲಗಿಕೊಳ್ತೀನಿ.
ನಿಧಿ ತಮ್ಮನ ಮಾತಿಗೆ ನಕ್ಕರೆ ನೀತು.....ಊರಿಗೆ ಹೋದ ನಂತರ ನೀನು ನಿಮ್ಮಕ್ಕನ ಹೆಗಲಿಗೇ ನೋತಾಕಿಕೋ ಅಲ್ಲಿವರೆಗೂ ಅಣ್ಣನ ಜೊತೆ ರೂಮಿನಲ್ಲಿರು ಓಡೀಗ ಮಲಗಿಕೋ.
ಅಪ್ಪನ ಮೇಲೇರಿ ಮಲಗಿದ್ದ ನಿಶಾಳ ದೃಷ್ಟಿಯು ನಿಧಿ ಅಕ್ಕನ ತಲೆ ಸವರಿ ಮುದ್ದಿಸುತ್ತಿದ್ದ ಅಮ್ಮನ ಮೇಲಿದ್ದು ಅವಳಿಗೆ ಫುಲ್ ಹೊಟ್ಟೆ ಉರಿಯುತ್ತಿತ್ತು. ಅಪ್ಪನ ಎದೆಯಿಂದ ಕೆಳಗಿಳಿದು ಅಮ್ಮನನ್ನು ದಾಟಿ ಅಕ್ಕ ಮತ್ತು ಅಮ್ಮನ ಮಧ್ಯೆ ಸೇರಿಕೊಂಡ ನಿಶಾ ಅಕ್ಕನನ್ನು ದೂರ ತಳ್ಳುತ್ತ ಅಮ್ಮನನ್ನು ಸೇರಿಕೊಂಡು ಮಲಗಿಬಿಟ್ಟಳು.
ನೀತು.....ಎಷ್ಟು ಹೊಟ್ಚೆಯುರಿ ರೀ ನಿಮ್ಮ ಮಗಳಿಗೆ.
ಚನ್ಹರೀಶ....ಮತ್ತೆ ನೀನು ಅವಳನ್ನು ಮುದ್ದಿಸದೆ ನಿಧಿಯನ್ನು ಮಾತ್ರ ಮುದ್ದು ಮಾಡುತ್ತಿದ್ದರೇನು ಮಾಡ್ತಾಳೆ ನಿದ್ದೆ ಬರಲಿ ನಾನು ಪುನಃ ಎತ್ತಿಕೊಂಡು ಮಲಗಿಸಿಕೊಳ್ತೀನಿ.
ನಿಧಿ ತನ್ನ ಪುಟ್ಟ ತಂಗಿ ಅಪ್ಪ ಅಮ್ಮನೊಟ್ಟಿಗೆ ಯಾವ ರೀತಿಯಲ್ಲಿ ಮಧುರವಾದ ಬಾಂಧವ್ಯ ಹೊಂದಿರುವಳೆಂದು ನೋಡಿ ನಗುತ್ತ ತಾನೂ ಕಣ್ಮುಚ್ಚಿ ಮಲಗಿಕೊಂಡಳು.
Dear User!
We found that you are blocking the display of ads on our site.
Please add it to the exception list or disable AdBlock.
Our materials are provided for FREE and the only revenue is advertising.
Thank you for understanding!